ಆ್ಯಪ್ನಗರ

'ನಾ ಆಗಬೇಕಿತ್ತು ಕಟ್ಟಪ್ಪ' ಎಂದ ಖ್ಯಾತ ವಿಲನ್‌!

ಬಾಲಿವುಡ್‌ನ ಖಡಕ್‌ ವಿಲನ್‌ವೊಬ್ಬರು 'ಬಾಹುಬಲಿಯ ಕಟ್ಟಪ್ಪನ ಪಾತ್ರ ತನಗೇನಾದರೂ ಸಿಕ್ಕಿದ್ದರೆ ಇನ್ನಷ್ಟು ಚೆನ್ನಾಗಿ ಅಭಿನಯಿಸುತ್ತಿದ್ದೆ' ಎಂದು ಹೇಳಿದ್ದಾರೆ.

TNN & Agencies 3 Jul 2017, 12:27 pm
ಎಸ್‌ಎಸ್‌ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ 'ಕಟ್ಟಪ್ಪ'ನ ಪಾತ್ರವೂ ಒಂದು. ಈ ಪಾತ್ರಕ್ಕೆ ಜೀವ ತುಂಬಿ ನಟಿಸಿದ ಸತ್ಯರಾಜ್‌, ಅನೇಕರಿಂದ ಪ್ರಶಂಸೆ ಪಡೆದುಕೊಂಡಿದ್ದು ಈಗ ಹಳೆಯ ಮಾತು.
Vijaya Karnataka Web gulshan grover believes he could have played kattappa better than sathyaraj
'ನಾ ಆಗಬೇಕಿತ್ತು ಕಟ್ಟಪ್ಪ' ಎಂದ ಖ್ಯಾತ ವಿಲನ್‌!


ಆದರೆ ಬಾಲಿವುಡ್‌ನ ಖಡಕ್‌ ವಿಲನ್‌ವೊಬ್ಬರು 'ಬಾಹುಬಲಿಯ ಕಟ್ಟಪ್ಪನ ಪಾತ್ರ ತನಗೇನಾದರೂ ಸಿಕ್ಕಿದ್ದರೆ ಇನ್ನಷ್ಟು ಚೆನ್ನಾಗಿ ಅಭಿನಯಿಸುತ್ತಿದ್ದೆ' ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ. ಬಾಲಿವುಡ್‌ನ ಬ್ಯಾಡ್‌ ಮ್ಯಾನ್‌ ಎಂದೇ ಕರೆಯಿಸಿಕೊಳ್ಳುವ ಗುಲ್ಶನ್‌ ಗ್ರೋವರ್‌, ಕಟ್ಟಪ್ಪ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ.

'ಬಾಹುಬಲಿ 2' ಚಿತ್ರ ವೀಕ್ಷಿಸಿದ ಗುಲ್ಶನ್‌, 'ನಿರ್ದೇಶಕ ರಾಜಮೌಳಿ ಕಟ್ಟಪ್ಪನ ಪಾತ್ರವನ್ನು ಅದ್ಭುತವಾಗಿ ಸೃಷ್ಟಿಸಿದ್ದಾರೆ. ಈ ಪಾತ್ರವನ್ನು ನೋಡಿದ ಬಳಿಕ ನನ್ನ ತಲೆಯಲ್ಲಿ ಬಂದ ಮತ್ತೊಂದು ವಿಚಾರ ಎಂದರೆ, ಸತ್ಯರಾಜ್ ನಿಭಾಯಿಸಿದ ಈ ಪಾತ್ರವನ್ನು ನಾನು ಮಾಡಿದ್ದರೆ ಇನ್ನೂ ಚೆನ್ನಾಗಿ ಬರುತ್ತಿತ್ತು. ಕಟ್ಟಪ್ಪನ ಪಾತ್ರಕ್ಕೆ ಬೇಕಾದ ಬಾಡಿ ಹಾಗೂ ಮ್ಯಾನರಿಜಂ ನನಗೂ ಇವೆ. ಆ ಪಾತ್ರಕ್ಕೆ ನನ್ನಿಂದ ಹೆಚ್ಚು ನ್ಯಾಯ ಒದಗುತ್ತಿತ್ತು' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ' ನಟ ಸತ್ಯರಾಜ್ ಕಟ್ಟಪ್ಪನ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಆದರೆ ಚಿತ್ರದ ಕ್ರೆಡಿಟ್‌ ಎಲ್ಲ ರಾಜಮೌಳಿಗೆ ಸಲ್ಲಬೇಕು. ರಾಜಮೌಳಿ ಅತ್ಯುತ್ತಮ ನಿರ್ದೇಶಕ. ಅವರೊಂದಿಗೆ ಕೆಲಸ ಮಾಡಲು ನಾನು ಸಿದ್ಧ' ಎಂದು ಗ್ರೋವರ್ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌