ಆ್ಯಪ್ನಗರ

ಕುಖ್ಯಾತ ರೌಡಿ ವಿಕಾಸ್‌ ದುಬೆ ಎನ್‌ಕೌಂಟರ್‌ ಘಟನೆ ಆಧರಿಸಿ ತಯಾರಾಗಲಿದೆ ವೆಬ್‌ ಸಿರೀಸ್‌!

ವಿಕಾಸ್‌ ದುಬೆ ಎನ್‌ಕೌಂಟರ್‌ ಸುತ್ತ ಅನೇಕ ಅನುಮಾನದ ಪ್ರಶ್ನೆಗಳು ಮೂಡಿವೆ. ಆ ಘಟನೆ ಆಧರಿಸಿ ವೆಬ್‌ ಸಿರೀಸ್‌ ಮಾಡಲು ಈಗ ಪ್ಲ್ಯಾನ್‌ ಸಿದ್ಧವಾಗಿದೆ. ಖ್ಯಾತ ನಿರ್ದೇಶಕ ಹನ್ಸಲ್‌ ಮೆಹ್ತಾ ಅವರು ಇದಕ್ಕೆ ಆ್ಯಕ್ಷನ್‌-ಕಟ್ ಹೇಳಲಿದ್ದಾರೆ.

Vijaya Karnataka Web 10 Aug 2020, 3:15 pm
ಸದ್ಯಕ್ಕಂತೂ ಸಿನಿಮಾಗಳ ರೀತಿಯೇ ವೆಬ್‌ ಸಿರೀಸ್‌ಗಳು ಮಿಂಚು ಹರಿಸುತ್ತಿವೆ. ದೊಡ್ಡ ದೊಡ್ಡ ಸ್ಟಾರ್‌ ಕಲಾವಿದರೆಲ್ಲ ವೆಬ್‌ ಸರಣಿಯಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್‌ ಬಚ್ಚನ್‌, ನಿತ್ಯಾ ಮೆನನ್‌, ಸೈಫ್‌ ಅಲಿ ಖಾನ್‌, ರಾಧಿಕಾ ಆಪ್ಟೆ ಮುಂತಾದವರೆಲ್ಲ ವೆಬ್‌ ಸಿರೀಸ್‌ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ವೆಬ್‌ ಸರಣಿಗಳಲ್ಲಿ ಕ್ರೈಂ ಕಥೆಗಳೇ ರಾರಾಜಿಸುತ್ತವೆ.
Vijaya Karnataka Web hansal mehta to direct web series on infamous gangster vikas dubey encounter
ಕುಖ್ಯಾತ ರೌಡಿ ವಿಕಾಸ್‌ ದುಬೆ ಎನ್‌ಕೌಂಟರ್‌ ಘಟನೆ ಆಧರಿಸಿ ತಯಾರಾಗಲಿದೆ ವೆಬ್‌ ಸಿರೀಸ್‌!


ಇಂಥದ್ದೇ ಒಂದು ಕ್ರೈಂ ಕಥೆ ಇಟ್ಟುಕೊಂಡು ಬಾಲಿವುಡ್‌ನ ಖ್ಯಾತ ನಿರ್ದೇಶಕ ಹನ್ಸಲ್‌ ಮೆಹ್ತಾ ಅವರು ಹೊಸದೊಂದು ವೆಬ್‌ ಸಿರೀಸ್‌ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಆಯ್ದುಕೊಂಡಿರುವುದು ಕುಖ್ಯಾತ ರೌಡಿ ವಿಕಾಸ್‌ ದುಬೆ ಜೀವನಾಧಾರಿತ ಕಥೆ ಎಂಬುದು ಅಚ್ಚರಿಯ ವಿಚಾರ! ವಿಕಾಸ್‌ ದುಬೆ ಕರಾಳ ಮುಖ ಮತ್ತು ಆತನ ಎನ್‌ಕೌಂಟರ್‌ ಘಟನೆಗಳನ್ನು ಆಧರಿಸಿ ಅವರು ಒಂದು ಪೊಲಿಟಿಕಲ್‌ ಥ್ರಿಲ್ಲರ್‌ ವೆಬ್‌ ಸರಣಿ ನಿರ್ದೇಶನ ಮಾಡಲಿದ್ದಾರೆ.

ಭೂಗತ ಲೋಕದಲ್ಲಿ ಸಕ್ರಿಯವಾಗಿದ್ದ ವಿಕಾಸ್‌ ದುಬೆ ಮೇಲೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಮಧ್ಯಪ್ರದೇಶದಲ್ಲಿ ಜುಲೈ 9ರಂದು ಆತನನ್ನು ಬಂಧಿಸಲಾಯಿತು. ಆದರೆ ಮರುದಿನವೇ ಆತನನ್ನು ಕರೆದುಕೊಂಡು ಹೋಗುತ್ತಿದ್ದ ಪೊಲೀಸ್‌ ವಾಹನ ಅಪಘಾತಕ್ಕೀಡಾಯಿತು. ಆ ಸಂದರ್ಭದಲ್ಲಿ ವಿಕಾಸ್‌ ದುಬೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಆಗ ನಡೆದ ಎನ್‌ಕೌಟರ್‌ಗೆ ಆತ ಬಲಿಯಾದ.

also read: 'ದುಬೆ ಎನ್‌ಕೌಂಟರ್‌ ನಕಲಿ ಅಲ್ಲ, ತೆಲಂಗಾಣದೊಂದಿಗೆ ಹೋಲಿಕೆ ಬೇಡ': ಸುಪ್ರೀಂಗೆ ಯುಪಿ ಪೊಲೀಸರ ಅಫಿಡವಿಟ್‌

'ಈ ಘಟನೆ ನಮ್ಮ ಪ್ರಸ್ತುತ ಸಮಾಜದ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಇಲ್ಲಿ ರಾಜಕೀಯ ಮತ್ತು ಭೂಗತಲೋಕ ಲೋಕದ ನಂಟು ಇದೆ. ಘಟನೆಯನ್ನು ಪ್ರಾಮಾಣಿಕವಾಗಿ ತೆರೆಮೇಲೆ ಕಟ್ಟಿಕೊಡಲಾಗುವುದು. ಇದು ಪೊಲಿಟಿಕಲ್‌ ಥ್ರಿಲ್ಲರ್‌ ಸ್ಟೋರಿ ಆಗಿರಲಿದೆ' ಎಂದು ಹನ್ಸಲ್‌ ಮೆಹ್ತಾ ಹೇಳಿದ್ದಾರೆ. ನೈಜ ಘಟನೆ ಆಧಾರಿತ 'ಆಲಿಘಡ್‌', 'ಒಮೆರ್ಟಾ', 'ಶಾಹಿದ್‌' ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ ಖ್ಯಾತ ಹನ್ಸಲ್‌ ಮೆಹ್ತಾ ಅವರಿಗೆ ಸಲ್ಲುತ್ತದೆ.

also read: Supreme Court: 'ಅಪರಾಧಿ ದುಬೆಗೆ ಹೇಗೆ ಜಾಮೀನು ಸಿಕ್ತು'?, ವ್ಯವಸ್ಥೆಯ ವೈಫಲ್ಯಕ್ಕೆ ಸುಪ್ರೀಂಕೋರ್ಟ್‌ ಕಿಡಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌