ಆ್ಯಪ್ನಗರ

ಇಪ್ಪತ್ತು ವರ್ಷಗಳ ಬಳಿಕ ರೈಲು ಹತ್ತಿದ 'ಹೆಬ್ಬುಲಿ' ಖಳನಟ ರವಿ ಕಿಷನ್

ಕಿಚ್ಚ ಸುದೀಪ್ ನಾಯಕನಟನಾಗಿರುವ ಹೆಬ್ಬುಲಿ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವ ನಟ ಕಮ್ ಬಿಜೆಪಿ ಸಂಸದ ರವಿ ಕಿಷನ್ ಇಪ್ಪತ್ತು ವರ್ಷಗಳ ಬಳಿಕ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ರೈಲು ಪ್ರಯಾಣಿಕರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಸಲುವಾಗಿ ಅವರು ರೈಲು ಹತ್ತಿದ್ದಾರೆ.

PTI 31 Oct 2019, 4:21 pm
ಕನ್ನಡದ 'ಹೆಬ್ಬುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್ ವಿರುದ್ಧ ಖಳನಟನಾಗಿ ಪಾತ್ರ ಪೋಷಿಸಿರುವ ನಟ ರವಿ ಕಿಷನ್ ತಮ್ಮ ವೈವಿಧ್ಯಭರಿತ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹಾಲಿ ಸಂಸದರೂ ಆಗಿರುವ ರವಿ ಕಿಷನ್ ಗೋರಖ್‌ಪುರವನ್ನು ಪ್ರತಿನಿಧಿಸುತ್ತಿದ್ದಾರೆ.
Vijaya Karnataka Web ravi-kishan


ಬಿಹಾರದಲ್ಲಿನ ಹಾಜಿಪೂರ್ ಜಂಕ್ಷನ್‌ನಲ್ಲಿ ವೈಶಾಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದರು. ರೈಲು ಹತ್ತುವುದಕ್ಕೂ ಮುನ್ನ ಮಾಧ್ಯಮಗಳ ಜತೆಗೆ ಮಾತನಾಡಿರುವ ಅವರು, "ತಾನು 20 ವರ್ಷಗಳ ಬಳಿಕ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.

ಕಿಚ್ಚ ಸುದೀಪ್ ಅಬ್ಬರ ಕಂಡು ಬೆರಗಾದ ಪಾರುಲ್ ಯಾದವ್

ಬಿಜೆಪಿ ಸಂಸದರಾಗಿರುವ ರವಿ ಕಿಷನ್ ತನ್ನ ಲೋಕಸಭಾ ಕ್ಷೇತ್ರವಾಗಿರುವ ಗೋರಖ್‌ಪುರಕ್ಕೆ ಹೋಗಲು ವೈಶಾಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ರೈಲ್ವೆ ಸಚಿವ ಪಿಯೂಷ್ ಗೋಯಲ್ ಆದೇಶದ ಪ್ರಕಾರ ತನು ಛಟ್ ಪೂಜೆಯ ಸಂದರ್ಭದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿರುವವರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಪ್ರಯಾಣಿಸಿದ್ದೇನೆ" ಎಂದಿದ್ದಾರೆ. ತಾನು ಪ್ರಯಾಣಿಕರಿಂದ ಮಾಹಿತಿ ಸಂಗ್ರಹಿಸಿ, ರೈಲ್ವೆ ಸಚಿವರಿಗೆ ನೀಡುವುದಾಗಿ ಹೇಳಿದ್ದಾರೆ.

ಹುಟ್ಟುಹಬ್ಬದ ದಿನವೇ ಆಕಾಂಕ್ಷಾ ಜತೆ "ಕಣ್ಣು ಚಪ್ಪಾಳೆ" ಹೊಡೆದ ಕಿಚ್ಚ

View this post on Instagram #journey A post shared by Ravi Kishan (@ravikishann) on Oct 30, 2019 at 11:07am PDT
2017ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ನಾಯಕತ್ವದ ಹೆಬ್ಬುಲಿ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ರವಿ ಕಿಷನ್ ಸ್ಯಾಂಡಲ್‍ವುಡ್‌ಗೆ ಅಡಿಯಿಟ್ಟರು. ಕನ್ನಡ ಅಷ್ಟೇ ಅಲ್ಲದೆ ಹಿಂದಿ, ಭೋಜ್‍ಪುರಿ, ತೆಲುಗು, ತಮಿಳು ಮತ್ತು ಗುಜರಾತಿ ಭಾಷೆಗಳಲ್ಲೂ ಅಭಿನಯಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಸೈ ರಾ ನರಸಿಂಹ ರೆಡ್ಡಿ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲೂ ನಟಿಸಿದ್ದಾರೆ.
View this post on Instagram #Gorakhpur train se pahucha aur swagat huva devtulya janta dwara 🙏 A post shared by Ravi Kishan (@ravikishann) on Oct 30, 2019 at 11:02am PDT
View this post on Instagram #Gorakhpur A post shared by Ravi Kishan (@ravikishann) on Oct 30, 2019 at 11:01am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌