ಆ್ಯಪ್ನಗರ

'ಚಂದ್ರಯಾನ 2' ಬಗ್ಗೆ ಬಾಲಿವುಡ್ ನಟರು ಹೇಳಿದ್ದೇನು?

ನಮ್ಮ ದೇಶದ ಕನಸಿನ ಕೂಸು 'ಚಂದ್ರಯಾನ 2' ಮಿಷನ್ ತಾಂತ್ರಿಕ ತೊಂದರೆಯಿಂದಾಗಿ ಯಶಸ್ವಿಯಾಗಲಿಲ್ಲ. ಅಂತಿಮಘಟ್ಟದಲ್ಲಿ ಇನ್ನೇನು 2.1ಕಿಮೀ ಇರುವಾಗಲೇ ಸಿಗ್ನಲ್ ಸಂಪರ್ಕ ಕಡಿತಗೊಂಡು, ಭಾರತೀಯರಿಗೆ ನಿರಾಸೆಯಾಗಿದ್ದು ನಿಜ. ಈ ಬಗ್ಗೆ ಕೆಲ ಬಾಲಿವುಡ್ ತಾರೆಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Vijaya Karnataka Web 7 Sep 2019, 3:47 pm
ಇಡೀ ದೇಶ ಕುತೂಹಲದಿಂದ ನಿನ್ನೆ ರಾತ್ರಿ 'ಚಂದ್ರಯಾನ 2' ಕಣ್ತುಂಬಿಕೊಳ್ಳಲು ಕಾದು ಕುಳಿತಿತ್ತು. ಚಂದ್ರನ ಮೇಲೆ ಇಳಿಯಬೇಕಾಗಿದ್ದ ವಿಕ್ರಮ್ ಲ್ಯಾಂಡರ್ ಕೊನೇ ಕ್ಷಣದಲ್ಲಿ ಸಂವಹನ ಕಳೆದುಕೊಂಡಿತ್ತು. ಇದರಿಂದಾಗಿ ಇಸ್ರೋ ವಿಜ್ಞಾನಿಗಳು ಸೇರಿದಂತೆ ದೇಶದ ಜನರು ಕೂಡ ನಿರಾಸೆಗೊಳಗಾಗಿದ್ದಾರೆ. ಪ್ರಯತ್ನ ವಿಫಲವಾಗಿದ್ದಕ್ಕೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಕಣ್ಣೀರು ಹಾಕಿದ್ದು, ಪ್ರಧಾನಿ ನರೇಂದ್ರ ಮೋದಿ ಇವರನ್ನು ಆಲಿಂಗಿಸಿಕೊಂಡು ಸಂತೈಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
Vijaya Karnataka Web chhhh




"ಇಸ್ರೋ ಇಂದು ಮಾಡಿರುವ ಸಾಧನೆ ಸಣ್ಣ ಮಟ್ಟದಲ್ಲ. ಇದರ ಬಗ್ಗೆ ನಮಗೆ ಹೆಮ್ಮೆಯಿದೆ. " ಎಂದು ಬಾಲಿವುಡ್ ನಟ ರಿತೇಶ್ ದೇಶಮುಖ್ ಟ್ವೀಟ್ ಮಾಡಿದ್ದಾರೆ.



View this post on Instagram “Moon is 3,84,400 kms and we failed at 2.1 KM that's 0.0005463% of margin.Even this failure is a foundation for new beginnings. Even this failure has a taste of success in it. Kudos to our Scientists and ISRO A post shared by Amitabh Bachchan (@amitabhbachchan) on Sep 7, 2019 at 12:15am PDT


"ಭಾರತ ಮತ್ತು ಇಡೀ ವಿಶ್ವ ನಿಮ್ಮ ಜೊತೆಗಿದೆ " ಎಂದು ನಟ ಅನುಪಮ್ ಖೇರ್ ಟ್ವಿಟ್ಟರ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಟ ಅಕ್ಷಯ್‌ ಕುಮಾರ್, ನಿರ್ದೇಶಕ ಮಧುರ್ ಬಂಡಾರ್ಕರ್, ಗಾಯಕ ಅರ್ಮನ್ ಮಲ್ಲಿಕ್ ಸೇರಿದಂತೆ ಅನೇಕರು ಚಂದ್ರಯಾನ 2ರ ಬಗ್ಗೆ ಕುತೂಹಲಕಾರಿಯಾಗಿದ್ದೇವೆಂದು ಟ್ವೀಟ್ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌