ಆ್ಯಪ್ನಗರ

ಲಕ್ಷ್ಮೀ ದೇವರಿಗೆ ಅಕ್ಷಯ್‌ ಕುಮಾರ್‌ ಸಿನಿಮಾದಿಂದ ಅವಮಾನ? ಟೈಟಲ್‌ ಬದಲಿಸಲು ಹಿಂದೂ ಸೇನಾ ಒತ್ತಾಯ!

ಅಕ್ಷಯ್‌ ಕುಮಾರ್‌ ನಟನೆಯ 'ಲಕ್ಷ್ಮೀ ಬಾಂಬ್‌' ಸಿನಿಮಾ ಒಂದಿಲ್ಲೊಂದು ಕಾರಣಕ್ಕಾಗಿ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಿದೆ. ಈ ಸಿನಿಮಾದ ಶೀರ್ಷಿಕೆಯಿಂದ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂಬ ಮಾತು ಕೇಳಿಬಂದಿದೆ.

Vijaya Karnataka Web 21 Oct 2020, 2:45 pm
ಈ ವರ್ಷದ ಬಹುನಿರೀಕ್ಷಿತ ಬಾಲಿವುಡ್‌ ಸಿನಿಮಾಗಳಲ್ಲಿ 'ಲಕ್ಷ್ಮೀ ಬಾಂಬ್‌' ಚಿತ್ರಕ್ಕೆ ಮೊದಲ ಸ್ಥಾನವಿದೆ. ಶೀಘ್ರದಲ್ಲೇ ಈ ಚಿತ್ರ ಓಟಿಟಿ ಪ್ಲಾಟ್‌ಫಾರ್ಮ್‌ ಮೂಲಕ ಬಿಡುಗಡೆ ಆಗಲಿದೆ. ಆದರೆ ಈ ಸಿನಿಮಾಗೆ ವಿವಾದ ಸುತ್ತಿಕೊಂಡಿದೆ. ಅಕ್ಷಯ್‌ ಕುಮಾರ್‌ ಮತ್ತು ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆ ನಿಭಾಯಿಸಿರುವ 'ಲಕ್ಷ್ಮೀ ಬಾಂಬ್‌' ಶೀರ್ಷಿಕೆಗೆ ವಿರೋಧ ವ್ಯಕ್ತವಾಗುತ್ತಿದೆ.
Vijaya Karnataka Web ಲಕ್ಷ್ಮೀ ಬಾಂಬ್‌


ಹಿಂದೂಗಳ ದೇವತೆ ಲಕ್ಷ್ಮೀ ಹೆಸರಿನ ಪಕ್ಕದಲ್ಲಿ ಬಾಂಬ್‌ ಎಂಬ ಪದ ಬಳಸಿರುವುದಕ್ಕೆ ಹಿಂದೂ ಸೇನಾ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಶೀರ್ಷಿಕೆ ಬದಲಾಗಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಪತ್ರ ಕೂಡ ಬರೆಯಲಾಗಿದೆ. ಇಂಥ ಶೀರ್ಷಿಕೆ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವುದಕ್ಕಾಗಿ ಚಿತ್ರತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಒಂದು ವೇಳೆ ಶೀರ್ಷಿಕೆ ಬದಲಾಗದಿದ್ದರೆ ಪ್ರತಿಭಟನೆ ಮಾಡುವುದಾಗಿ ತಿಳಿಸಲಾಗಿದೆ.

'ಲಕ್ಷ್ಮೀ ಬಾಂಬ್‌' ಚಿತ್ರದಿಂದ ಲವ್‌ ಜಿಹಾದ್‌ ಅನ್ನು ಪ್ರಚಾರ ಮಾಡಲಾಗುತ್ತಿದೆ ಎಂಬುದಾಗಿಯೂ ಒಂದು ವರ್ಗದ ನೆಟ್ಟಿಗರು ಆರೋಪಿಸಿದ್ದಾರೆ. ಈ ಸಿನಿಮಾದಲ್ಲಿ ಕಥಾನಾಯಕನ ಹೆಸರು ಆಸಿಫ್‌, ಕಥಾನಾಯಕಿ ಹೆಸರು ಪ್ರಿಯಾ. ಹಾಗಾಗಿ ಇದು ಲವ್‌ ಜಿಹಾದ್‌ ಅನ್ನು ಪ್ರೇರೇಪಿಸುತ್ತಿದೆ. ಇದನ್ನು ನಿರ್ಮಾಣ ಮಾಡಿರುವ ಶಬೀನಾ ಖಾನ್‌ ಅವರು ಕಾಶ್ಮೀರದ ಪ್ರತ್ಯೇಕವಾದಿಗಳು ಎಂದು ಕೆಲವರು ಆರೋಪಿಸಿದ್ದಾರೆ.

also read: 'ಲಕ್ಷ್ಮೀ ಬಾಂಬ್‌' ಮೇಲೆ ಲವ್‌ ಜಿಹಾದ್‌ ಆರೋಪ! ಅಕ್ಷಯ್‌ ಕುಮಾರ್‌ಗೆ ನಾಚಿಕೆ ಆಗಬೇಕು ಎಂದ ನೆಟ್ಟಿಗರು!

ಈ ಎಲ್ಲ ಕಾರಣಗಳಿಗಾಗಿ ಅಕ್ಷಯ್‌ ಕುಮಾರ್‌ ಅವರನ್ನು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಲಾಗುತ್ತಿದೆ. #ShameOnUAkshayKumar ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗಿದೆ. ನ.9ರಂದು 'ಡಿಸ್ನಿ ಹಾಟ್‌ಸ್ಟಾರ್‌' ಮೂಲಕ 'ಲಕ್ಷ್ಮೀ ಬಾಂಬ್‌' ಬಿಡುಗಡೆ ಆಗಲಿದೆ. ರಾಘವ ಲಾರೆನ್ಸ್‌ ಈ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಈಗಾಗಲೇ ಟ್ರೇಲರ್‌ ನೋಡಿರುವ ಆಮೀರ್‌ ಖಾನ್‌ ಮುಂತಾದವರು ಮನಸಾರೆ ಮೆಚ್ಚಿಕೊಂಡಿದ್ದಾರೆ.

also read: ಅಕ್ಷಯ್‌ಗೆ ಮನಸಾರೆ ಹೊಗಳಿದ ನಟ ಆಮೀರ್ ಖಾನ್‌! ಇದಕ್ಕೆ ಕಾರಣವಾಗಿದ್ದು ಆ ಒಂದು ಸಿನಿಮಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌