ಪಂಚಕುಲ ಹಿಂಸಾಚಾರ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಗುರ್ಮಿತ್ ಸಿಂಗ್ ಹಾಗೂ ಆತನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ಬಂಧನಕ್ಕೊಳಗಾಗಿದ್ದು ಗೊತ್ತೇ ಇದೆ. ಇದೀಗ ಬಾಲಿವುಡ್ ತಾರೆ ರಾಖಿ ಸಾವಂತ್ ವಿರುದ್ಧ ಹನಿಪ್ರೀತ್ ತಾಯಿ ಆಶಾ ತನೇಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ನೋಟಿಸ್ ಕಳುಹಿಸಿದ್ದಾರೆ.
ಗುರ್ಮೀತ್, ಹನಿಪ್ರೀತ್ ಬಂಧನಕ್ಕೊಳಗಾದ ಸಂದರ್ಭದಲ್ಲಿ ರಾಖಿ ಇವರ ಬಗ್ಗೆ ವೀಡಿಯೋ ಒಂದರಲ್ಲಿ ಮಾತನಾಡಿದ್ದರು. ನನಗೆ ಗುರ್ಮೀತ್ ಚೆನ್ನಾಗಿ ಗೊತ್ತೆಂದೂ, ಅವರನ್ನು ಭೇಟಿಯಾಗಲು ಹೋದಾಗೆಲ್ಲಾ ಎಲ್ಲಿ ಗುರ್ಮೀತ್ಗೆ ಆತ್ಮೀಯಳಾಗುತ್ತೇನೋ ಎಂಬ ಕಾರಣಕ್ಕೆ ಹನಿಪ್ರೀತ್ ತನ್ನನ್ನು ಭೇಟಿ ಮಾಡಲು ಬಿಡುತ್ತಿರಲಿಲ್ಲ ಎಂದು ರಾಖಿ ಹೇಳಿದ್ದರು. ಇನ್ನೊಂದು ಕಡೆ ಗುರ್ಮೀತ್ ಜೀವನಾಧಾರದ ಬಾಲಿವುಡ್ ಬಯೋಪಿಕ್ನಲ್ಲಿ ಹನಿಪ್ರೀತ್ ಪಾತ್ರದಲ್ಲಿ ರಾಖಿ ಸಾವಂತ್ ಅಭಿನಯಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಹನಿಪ್ರೀತ್ ತಾಯಿ ರಾಖಿ ವಿರುದ್ಧ ನೋಟಿಸ್ ಕಳುಹಿಸಿದ್ದಾರೆ. ತನ್ನ ಮಗಳ ಬಗ್ಗೆ ಇಲ್ಲಸಲ್ಲದ ಸುಳ್ಳು ಹೇಳಿಕೆಗಳನ್ನು ರಾಖಿ ಸಾವಂತ್ ನೀಡುತ್ತಿದ್ದಾರೆ ಎಂದು ಹನಿಪ್ರೀತ್ ತಾಯಿ ಆರೋಪಿಸಿದ್ದಾರೆ. ಹಾಗಾಗಿ ನೋಟೀಸ್ ನೀಡಿದ್ದಾಗಿ ಮಾಧ್ಯಮಗಳಿಗೆ ವಿವರ ನೀಡಿದ್ದಾರೆ. ಒಂದು ತಿಂಗಳಲ್ಲಿ ರಾಖಿ ಸಾವಂತ್ ಕ್ಷಮೆ ಕೋರಬೇಕೆಂದು ಇಲ್ಲದಿದ್ದರೆ 5 ಕೋಟಿ ರೂ. ದಂಡ ಸಲ್ಲಿಸಬೇಕೆಂದು ನೋಟೀಸ್ನಲ್ಲಿ ತಿಳಿಸಿದ್ದಾರೆ. ಗುರ್ಮೀತ್ ಸಿಂಗ್ ಜೀವನಾಧಾರಿತ ಚಿತ್ರದಲ್ಲಿ ಹನಿಪ್ರೀತ್ ಪಾತ್ರವನ್ನು ರಾಖಿ ಸಾವಂತ್ ಪೋಷಿಸುತ್ತಿದ್ದಾರೆ.
ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 2017ರ ಆಗಸ್ಟ್ನಲ್ಲಿ ಗುರ್ಮೀತ್ಗೆ 20 ವರ್ಷ ಜೈಲು ಶಿಕ್ಷೆ ಜಾರಿಯಾಗಿದೆ. ಗುರ್ಮೀತ್ರನ್ನು ಬಂಧಿಸಿದ ಬಳಿಕ ಹರಿಯಾಣದ ಪಂಚಕುಲದಲ್ಲಿ ಹಿಂಸಾಚಾರಕ್ಕೆ ನಡೆಸಲು ಪ್ರೇರೇಪಿಸಿದ್ದಕ್ಕೆ ಹನಿಪ್ರೀತ್ರನ್ನು ಹರಿಯಾಣ ಪೊಲೀಸರು ಬಂಧಿಸಿದರು.
ಗುರ್ಮೀತ್, ಹನಿಪ್ರೀತ್ ಬಂಧನಕ್ಕೊಳಗಾದ ಸಂದರ್ಭದಲ್ಲಿ ರಾಖಿ ಇವರ ಬಗ್ಗೆ ವೀಡಿಯೋ ಒಂದರಲ್ಲಿ ಮಾತನಾಡಿದ್ದರು. ನನಗೆ ಗುರ್ಮೀತ್ ಚೆನ್ನಾಗಿ ಗೊತ್ತೆಂದೂ, ಅವರನ್ನು ಭೇಟಿಯಾಗಲು ಹೋದಾಗೆಲ್ಲಾ ಎಲ್ಲಿ ಗುರ್ಮೀತ್ಗೆ ಆತ್ಮೀಯಳಾಗುತ್ತೇನೋ ಎಂಬ ಕಾರಣಕ್ಕೆ ಹನಿಪ್ರೀತ್ ತನ್ನನ್ನು ಭೇಟಿ ಮಾಡಲು ಬಿಡುತ್ತಿರಲಿಲ್ಲ ಎಂದು ರಾಖಿ ಹೇಳಿದ್ದರು. ಇನ್ನೊಂದು ಕಡೆ ಗುರ್ಮೀತ್ ಜೀವನಾಧಾರದ ಬಾಲಿವುಡ್ ಬಯೋಪಿಕ್ನಲ್ಲಿ ಹನಿಪ್ರೀತ್ ಪಾತ್ರದಲ್ಲಿ ರಾಖಿ ಸಾವಂತ್ ಅಭಿನಯಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಹನಿಪ್ರೀತ್ ತಾಯಿ ರಾಖಿ ವಿರುದ್ಧ ನೋಟಿಸ್ ಕಳುಹಿಸಿದ್ದಾರೆ. ತನ್ನ ಮಗಳ ಬಗ್ಗೆ ಇಲ್ಲಸಲ್ಲದ ಸುಳ್ಳು ಹೇಳಿಕೆಗಳನ್ನು ರಾಖಿ ಸಾವಂತ್ ನೀಡುತ್ತಿದ್ದಾರೆ ಎಂದು ಹನಿಪ್ರೀತ್ ತಾಯಿ ಆರೋಪಿಸಿದ್ದಾರೆ. ಹಾಗಾಗಿ ನೋಟೀಸ್ ನೀಡಿದ್ದಾಗಿ ಮಾಧ್ಯಮಗಳಿಗೆ ವಿವರ ನೀಡಿದ್ದಾರೆ. ಒಂದು ತಿಂಗಳಲ್ಲಿ ರಾಖಿ ಸಾವಂತ್ ಕ್ಷಮೆ ಕೋರಬೇಕೆಂದು ಇಲ್ಲದಿದ್ದರೆ 5 ಕೋಟಿ ರೂ. ದಂಡ ಸಲ್ಲಿಸಬೇಕೆಂದು ನೋಟೀಸ್ನಲ್ಲಿ ತಿಳಿಸಿದ್ದಾರೆ. ಗುರ್ಮೀತ್ ಸಿಂಗ್ ಜೀವನಾಧಾರಿತ ಚಿತ್ರದಲ್ಲಿ ಹನಿಪ್ರೀತ್ ಪಾತ್ರವನ್ನು ರಾಖಿ ಸಾವಂತ್ ಪೋಷಿಸುತ್ತಿದ್ದಾರೆ.
ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 2017ರ ಆಗಸ್ಟ್ನಲ್ಲಿ ಗುರ್ಮೀತ್ಗೆ 20 ವರ್ಷ ಜೈಲು ಶಿಕ್ಷೆ ಜಾರಿಯಾಗಿದೆ. ಗುರ್ಮೀತ್ರನ್ನು ಬಂಧಿಸಿದ ಬಳಿಕ ಹರಿಯಾಣದ ಪಂಚಕುಲದಲ್ಲಿ ಹಿಂಸಾಚಾರಕ್ಕೆ ನಡೆಸಲು ಪ್ರೇರೇಪಿಸಿದ್ದಕ್ಕೆ ಹನಿಪ್ರೀತ್ರನ್ನು ಹರಿಯಾಣ ಪೊಲೀಸರು ಬಂಧಿಸಿದರು.