ಆ್ಯಪ್ನಗರ

ಒಂದೇ ಒಂದು ಗೆಲುವಿಗಾಗಿ ಕಾಯುತ್ತಿರುವ ಶಾರುಖ್ ಖಾನ್‌ಗೆ ಸಾಥ್ ನೀಡಿದ ಇಬ್ಬರು 'ಸ್ಟಾರ್' ನಟರು‌! ಯಾರವರು?

ನಟ ಶಾರುಖ್ ಖಾನ್ ಅವರು ಸತತ ಎರಡು ವರ್ಷಗಳಿಂದ ಬ್ರೇಕ್ ತೆಗೆದುಕೊಂಡು, ಸಿನಿಮಾಗಳಿಂದ ದೂರ ಉಳಿದಿದ್ದರು. ಇದೀಗ 'ಪಠಾಣ್' ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ಇದೀಗ ಆ ಸಿನಿಮಾದಿಂದ ಒಂದಷ್ಟು ಮಾಹಿತಿಗಳು ಹೊರಬಿದ್ದಿವೆ.

Vijaya Karnataka Web 18 Dec 2020, 10:18 pm
2018ರಲ್ಲಿ ತೆರೆಕಂಡ 'ಜೀರೋ' ಸಿನಿಮಾದಿಂದ ಶಾರುಖ್‌ ಖಾನ್‌ ಕರಿಯರ್‌ಗೆ ದೊಡ್ಡ ಹೊಡೆತ ಬಿತ್ತು. ಕಮರ್ಷಿಯಲ್ ಜೊತೆಗೆ ಪ್ರಯೋಗಾತ್ಮಕವಾಗಿಯೂ 'ಜೀರೋ' ಸಿನಿಮಾ ದೊಡ್ಡ ಸೋಲು ಕಂಡಿತ್ತು. ಅಲ್ಲದೆ, ಅದಕ್ಕೂ ಹಿಂದೆ ತೆರೆಕಂಡಿದ್ದ ಸಿನಿಮಾಗಳೆಲ್ಲ ಹೀನಾಯ ಸೋಲು ಕಂಡಿದ್ದವು. ಆ ಹಿನ್ನೆಲೆಯಲ್ಲಿ 2 ವರ್ಷ ಬ್ರೇಕ್ ಪಡೆದುಕೊಂಡಿದ್ದ ಶಾರುಖ್‌, ಈಗ ಪುನಃ ಬಣ್ಣ ಹಚ್ಚಿದ್ದಾರೆ. ಯಶ್ ರಾಜ್ ಬ್ಯಾನರ್‌ನಲ್ಲಿ 'ಪಠಾಣ್‌' ಸಿನಿಮಾವನ್ನು ಶಾರುಖ್ ಒಪ್ಪಿಕೊಂಡಿದ್ದು, ಶೂಟಿಂಗ್ ಕೂಡ ಶುರುವಾಗಿದೆ! ಇದೀಗ ಈ ಸಿನಿಮಾದಲ್ಲಿ ಇಬ್ಬರು ಸ್ಟಾರ್‌ ನಟರು ಬಣ್ಣ ಹಚ್ಚಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ! ಯಾರವರು?
Vijaya Karnataka Web Shah Rukh Khan


'ಪಠಾಣ್'ನಲ್ಲಿ ಸಲ್ಮಾನ್‌-ಹೃತಿಕ್‌
ಸದ್ಯದ ಮಾಹಿತಿ ಪ್ರಕಾರ, 'ಪಠಾಣ್' ಸಿನಿಮಾದಲ್ಲಿ ಶಾರುಖ್ ಜೊತೆಗೆ ಸಲ್ಮಾನ್‌ ಖಾನ್ ಮತ್ತು ಹೃತಿಕ್ ರೋಷನ್‌ ಕೂಡ ನಟಿಸಲಿದ್ದಾರಂತೆ. ವಿಶೇಷವೆಂದರೆ, ಅವರಿಬ್ಬರು ರಾ ಏಜೆಂಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಈ ಹಿಂದೆ 'ಏಕ್ ಥಾ ಟೈಗರ್' ಸರಣಿಯ ಸಿನಿಮಾಗಳಲ್ಲಿ ರಾ ಏಜೆಂಟ್ ಆಗಿ ಸಲ್ಮಾನ್ ಕಾಣಿಸಿಕೊಂಡಿದ್ದರು. ಅದೇ ಥರ 'ವಾರ್' ಸಿನಿಮಾದಲ್ಲಿ ಹೃತಿಕ್ ಕೂಡ ಕಬೀರ್ ಅನ್ನೋ ರಾ ಏಜೆಂಟ್ ಪಾತ್ರ ಮಾಡಿದ್ದರು. ಇದೀಗ ಆ ಪಾತ್ರಗಳ ಮೂಲಕವೇ 'ಪಠಾಣ್'ನಲ್ಲಿ ಎಂಟ್ರಿ ನೀಡಲಿದ್ದಾರಂತೆ ಸಲ್ಮಾನ್ ಮತ್ತು ಹೃತಿಕ್‌. ಸತತ ಸೋಲಿನಿಂದ ಕಂಗೆಟ್ಟಿರುವ ಶಾರುಖ್‌ಗೆ ಈ ಸಿನಿಮಾವಾದರೂ ಗೆಲುವು ನೀಡಲಿ ಎಂಬುದು ಅಭಿಮಾನಿಗಳ ಹಾರೈಕೆ ಆಗಿದೆ.

ಡಿಫರೆಂಟ್ ಲುಕ್‌ನಲ್ಲಿ ಶಾರುಖ್‌
ಬಹುನಿರೀಕ್ಷಿತ 'ಪಠಾಣ್‌' ಸಿನಿಮಾಕ್ಕಾಗಿ ಶಾರುಖ್‌ ಉದ್ದ ಕೂದಲು ಬಿಟ್ಟು, ಸ್ಟೈಲಿಶ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋಗಳು ಈಗಾಗಲೇ ಸಖತ್ ವೈರಲ್ ಆಗಿವೆ. 'ವಾರ್' ಖ್ಯಾತಿಯ ಸಿದ್ಧಾರ್ಥ್‌ ಆನಂದ್ ಈ ಸಿನಿಮಾಗೆ ನಿರ್ದೇಶನದ ಮಾಡುತ್ತಿದ್ದಾರೆ. ಯಶ್‌ ರಾಜ್‌ ಬ್ಯಾನರ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಶಾರುಖ್, ಬಹಳ ಸಮಯದ ನಂತರ ನಿರ್ಮಾಪಕ ಆದಿತ್ಯ ಚೋಪ್ರಾ ಜೊತೆ ಒಂದಾಗಿದ್ದಾರೆ.

ಶಾರುಖ್ ಖಾನ್, ಆಲಿಯಾ ಭಟ್, ಸಮಂತಾ ಅಕ್ಕಿನೇನಿ, ಮೋಹನ್‌ಲಾಲ್ ಬಳಿಯಿದೆ ಭರ್ಜರಿ ಮನೆ!

ಇನ್ನು, ಈ ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. 'ಓಂ ಶಾಂತಿ ಓಂ', 'ಚೆನ್ನೈ ಎಕ್ಸ್‌ಪ್ರೆಸ್‌', 'ಹ್ಯಾಪಿ ನ್ಯೂ ಇಯರ್' ನಂತರ ಈಗ ನಾಲ್ಕನೇ ಬಾರಿಗೆ 'ಪಠಾಣ್‌'ನಲ್ಲಿ ಶಾರುಖ್ ಜೊತೆ ಅವರು ನಟಿಸಲಿದ್ದಾರೆ. ನಟ ಜಾನ್ ಅಬ್ರಾಹಂ ಇಲ್ಲಿ ಖಳನಾಗಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಮತ್ತು ಜಾನ್‌ಗೆ ಈ ಸಿನಿಮಾಕ್ಕಾಗಿ ಸಿಕ್ಕಾಪಟ್ಟೆ ಸಂಭಾವನೆ ನೀಡಲಾಗಿದೆಯಂತೆ. ಇನ್ನು, 'ಪಠಾಣ್' ನಂತರ ರಾಜ್‌ಕುಮಾರ್ ಹಿರಾನಿ ಹಾಗೂ ತಮಿಳು ನಿರ್ದೇಶಕ ಅಟ್ಲೀ ಕುಮಾರ್‌ ಜೊತೆಗೂ ಶಾರುಖ್ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ.

ನೂರಾರು ಜನರ ಜೀವ ಉಳಿಸಿದ ರಿಯಲ್‌ ಹೀರೋ ಬಯೋಪಿಕ್‌ನಲ್ಲಿ ಶಾರುಖ್‌ ಅಥವಾ ಸೋನು ಸೂದ್‌?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌