ಆ್ಯಪ್ನಗರ

ನಾನು ಪ್ರಚಾರ ಮಾಡಿದ್ದು ಏಲಕ್ಕಿಯನ್ನು ಹೊಗೆಸೊಪ್ಪನ್ನಲ್ಲ: ಅಜಯ್ ದೇವಗನ್

ಅಜಯ್ ದೇವಗನ್ ಅಭಿಮಾನಿಯಾದ ಅವರು ಈ ಹಿಂದೆ ಪ್ರಚಾರ ಮಾಡಿದ ಹೊಗೆಸೊಪ್ಪಿನ ಉತ್ಪನ್ನಗಳನ್ನು ಬಳಸಿದ ಕಾರಣ ಕ್ಯಾನ್ಸರ್‌ಗೆ ತುತ್ತಾಗಿದ್ದಾಗಿ ಹೇಳಿದ್ದರು. ಈ ಬಗ್ಗೆ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದಾರೆ. ಆ ಅಭಿಮಾನಿಯೊಂದಿಗೂ ಮಾತನಾಡಿದ್ದಾರೆ.

Vijaya Karnataka Web 16 May 2019, 5:45 pm
"ನಾನು ಹೊಗೆಸೊಪ್ಪನ್ನು ಪ್ರಚಾರ ಮಾಡಿಲ್ಲ" ಎಂದು ಬಾಲಿವುಡ್ ಹೀರೋ ಅಜಯ್ ದೇವಗನ್ ಹೇಳಿದ್ದಾರೆ. ಹೊಗೆಸೊಪ್ಪಿನ ಉತ್ಪನ್ನಗಳಿಗೆ ಸೆಲೆಬ್ರಿಟಿಗಳು ಪ್ರಚಾರ ಮಾಡಬಾರದು ಎಂದು ರಾಜಸ್ಥಾನ ಮೂಲದ ನಾನಕ್‍ರಾಮ್ ಎಂಬ 40 ವರ್ಷದ ವ್ಯಕ್ತಿ ಮನವಿ ಮಾಡಿದ್ದು ಗೊತ್ತೇ ಇದೆ.
Vijaya Karnataka Web ajay (1)


ಅಜಯ್ ದೇವಗನ್ ಅಭಿಮಾನಿಯಾದ ಅವರು ಈ ಹಿಂದೆ ಪ್ರಚಾರ ಮಾಡಿದ ಹೊಗೆಸೊಪ್ಪಿನ ಉತ್ಪನ್ನಗಳನ್ನು ಬಳಸಿದ ಕಾರಣ ಕ್ಯಾನ್ಸರ್‌ಗೆ ತುತ್ತಾಗಿದ್ದಾಗಿ ಹೇಳಿದ್ದರು. ಈ ಬಗ್ಗೆ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದಾರೆ. ಆ ಅಭಿಮಾನಿಯೊಂದಿಗೂ ಮಾತನಾಡಿದ್ದಾರೆ. [ಅಜಯ್ ದೇವಗನ್‌ಗೆ ಕ್ಯಾನ್ಸರ್ ರೋಗಿ ಬಿನ್ನಹ]

"ಕಂಪೆನಿ ಜತೆಗಿನ ನನ್ನ ಒಪ್ಪಂದದ ಪ್ರಕಾರ ನಾನು ಹೊಗೆಸೊಪ್ಪನ್ನು ಪ್ರಚಾರ ಮಾಡಿಲ್ಲ. ವಾಣಿಜ್ಯ ಜಾಹೀರಾತಿಗಾಗಿ ನಾನು ಏಲಕ್ಕಿಯನ್ನು ಉಪಯೋಗಿಸಿದೆವು. ನನ್ನ ಒಪ್ಪಂದದ ಪ್ರಕಾರ ಅದು ಹೊಗೆಸೊಪ್ಪು ಅಲ್ಲ. ಒಂದು ವೇಳೆ ಆ ಕಂಪೆನಿ ಏಲಕ್ಕಿ ಅಲ್ಲದೆ ಇನ್ನೇನಾದರೂ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರೆ ನಾನೇನು ಮಾಡಲು ಸಾಧ್ಯ" ಎಂದಿದ್ದಾರೆ.

ನಟನಾಗಿ ತನ್ನ ಜವಾಬ್ದಾರಿ ಬಗ್ಗೆ ಮಾತನಾಡಿರುವ ಅಜಯ್ ದೇವಗನ್, "ನಾನು ತನ್ನ ಲೇಟೆಸ್ಟ್ ಸಿನಿಮಾ 'ದೇ ದೇ ಪ್ಯಾರ್ ದೇ' ಚಿತ್ರದಲ್ಲಿ ಧೂಮಪಾನ ಮಾಡದ ವ್ಯಕ್ತಿಯ ಪಾತ್ರ ಪೋಷಿಸಿದ್ದೇನೆ. ಕಂಪೆನಿ (2002) ಸಿನಿಮಾದಲ್ಲಿ ಮಾಲಿಕ್ ಭಾಯ್ ನಂತಹ ಪಾತ್ರಗಳನ್ನು ಪೋಷಿಸುವಾಗ ಧೂಮಪಾನ ಮಾಡದೆ ಇರಲು ಸಾಧ್ಯವಿಲ್ಲ. ಹಾಗಾಗಿ ನಟರು ಈ ರೀತಿ ಮಾಡಬಾರದು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಪಾತ್ರಕ್ಕೆ ತಕ್ಕಂತೆ ನಾವು ಅನುಸರಿಸಿಕೊಳ್ಳಬೇಕಾಗುತ್ತದೆ" ಎಂದು ಹೇಳಿದ್ದಾರೆ ಅಜಯ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌