ಆ್ಯಪ್ನಗರ

ಮೊದಲೇ ಮಾಡಬೇಕಿತ್ತು ತುಂಬಾ ತಡವಾಗಿದೆ: ನಟಿ ಸೋನಾಕ್ಷಿ ಸಿನ್ಹಾ

"ಬಿಜೆಪಿ ಪಕ್ಷಕ್ಕಾಗಿ ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ನಮ್ಮ ತಂದೆ, ಪಕ್ಷದಲ್ಲಿ ಜೆಪಿ ನಾರಾಯಣ್ ಅವರಿಂದ ಹಿಡಿದು ಅಟಲ್‌ಜಿ, ಅಡ್ವಾನಿಜೀ ಅವರಿಂದಲೂ ಬಹಳಷ್ಟು ಗೌರವ ಪಡೆದವರು. ಆದರೆ ಈಗ ಅವರು ಪಕ್ಷದಲ್ಲಿರುವ ವ್ಯಕ್ತಿಗಳಿಂದ ಬಯಸಿದಷ್ಟು ಗೌರವ ಪಡೆಯಲು ಸಾಧ್ಯವಾಗುತ್ತಿಲ್ಲ.

Vijaya Karnataka Web 30 Mar 2019, 7:00 pm
ನಟಿ ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ಅವರು ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ ಸೋನಾಕ್ಷಿ ಸಿನ್ಹಾ ಅವರು "ಅದು ಅವರ ಆಯ್ಕೆ. ಅವರು ಇರುವಲ್ಲಿ ಸಂತೋಷವಾಗಿಲ್ಲ ಎಂದರೆ ಬೇರೆ ಕಡೆ ಹೋಗುವುದು ಒಳ್ಳೆಯದು. ಅದನ್ನೇ ಅವರು ಮಾಡಿದ್ದಾರೆ. ಬದಲಾವಣೆ ಯಾರಿಗಾದರೂ ಹೆಚ್ಚು ಖುಷಿ ಕೊಡಬಹುದು. ಅವರಿಗೆ ಈಗ ಸಿಕ್ಕಿರುವ ಕಾಂಗ್ರೆಸ್ ವೇದಿಕೆಯಲ್ಲಿ ಹೆಚ್ಚು ಕೆಲಸಗಳನ್ನು ಅವರಿಗೆ ಮಾಡಲು ಸಾಧ್ಯವಾಗಬಹುದು" ಎಂದಿದ್ದಾರೆ.
Vijaya Karnataka Web sonakshi3003


"ಬಿಜೆಪಿ ಪಕ್ಷಕ್ಕಾಗಿ ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ನಮ್ಮ ತಂದೆ, ಪಕ್ಷದಲ್ಲಿ ಜೆಪಿ ನಾರಾಯಣ್ ಅವರಿಂದ ಹಿಡಿದು ಅಟಲ್‌ಜಿ, ಅಡ್ವಾನಿಜೀ ಅವರಿಂದಲೂ ಬಹಳಷ್ಟು ಗೌರವ ಪಡೆದವರು. ಆದರೆ ಈಗ ಅವರು ಪಕ್ಷದಲ್ಲಿರುವ ವ್ಯಕ್ತಿಗಳಿಂದ ಬಯಸಿದಷ್ಟು ಗೌರವ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಹಜವಾಗಿಯೇ ಅವರು ಬದಲಾವಣೆ ಬಯಸಿದ್ದಾರೆ. ಈ ಕೆಲಸವನ್ನು ಅವರು ಬಹಳ ಹಿಂದೆಯೇ ಮಾಡಬೇಕಿತ್ತು, ತುಂಬಾ ತಡವಾಗಿ ಮಾಡಿದ್ದಾರೆ" ಎಂದಿದ್ದಾರೆ ಶತ್ರಘ್ನ ಸಿನ್ಹಾ ಮಗಳು ಹಾಗೂ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ.

ಹಿರಿಯ ನಟ ಶತ್ರುಘ್ನ ಸಿನ್ಹ ಅವರು ಬಹಳಷ್ಟು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಇದ್ದರು. ಅವರು ಯಾವುದೇ ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸಿಲ್ಲ. ಆದರೆ, ಬಿಜೆಪಿ ಪಕ್ಷವೊಂದರಲ್ಲೇ ಗುರುತಿಸಿಕೊಂಡು ಪಕ್ಷ ನಿಷ್ಠೆಯನ್ನು ಮೆರೆದಿದ್ದರು ಎನ್ನಬಹುದು. ಆದರೆ, ಪಕ್ಷ ನಿಷ್ಠೆ ಬಿಟ್ಟರೆ ಬೇರೆ ಯಾವುದೇ ಸಂಗತಿಗಳಲ್ಲಿ ಅವರ ಯೋಗ್ಯತೆ ಏನು ಎಂಬುದು ಹೊರಗಡೆ ಪ್ರಪಂಚಕ್ಕೆ ಎಂದೂ ತಿಳಿಯಲು ಸಾಧ್ಯವಾಗಿಲ್ಲ ಎನ್ನಬಹುದು. ಒಟ್ಟಿನಲ್ಲಿ ಈಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಅಲ್ಲೇನಾಗುತ್ತೋ ಕಾದು ನೋಡಬೇಕಿದೆ.

ಇನ್ನು ನಟಿ ಸೋನಾಕ್ಷಿ ಸಿನ್ಹಾ ಅವರು ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಕನ್ನಡದಲ್ಲಿ ಕೂಡ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಜೊತೆ ನಟಿಸಿ ಕನ್ನಡಿಗರಿಗೆ ಕೂಡ ಅವರು ಪರಿಚಿತರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌