ಆ್ಯಪ್ನಗರ

ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರ ಅಜಯ್‌ ನಿಭಾಯಿಸಬೇಕಿತ್ತಾ?

ಈ ವಿವಾದದ ನಡುವೆ 'ಪದ್ಮಾವತಿ' ಕುರಿತಾದ ಮತ್ತೊಂದು ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ.

Vijaya Karnataka Web 27 Nov 2017, 3:42 pm
ಸದ್ಯಕ್ಕೆ ಬಾಲಿವುಡ್‌ನಲ್ಲಿ ಬಿಡುಗಡೆಗೂ ಮುನ್ನ ಹೆಚ್ಚು ಸುದ್ದಿ ಮಾಡುತ್ತಿರುವ ಚಿತ್ರ 'ಪದ್ಮಾವತಿ'. ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿರುವುದು ನಿಮಗೆಲ್ಲ ಗೊತ್ತಿರುವ ವಿಷಯ. ಚಿತ್ರದಲ್ಲಿ ಇತಿಹಾಸವನ್ನ ತಿರುಚಲಾಗಿದೆ ಎಂಬ ಆರೋಪಗಳು ಈ ಸಂಘಟನೆಗಳಿಂದ ಕೇಳಿಬರುತ್ತಿದೆ.
Vijaya Karnataka Web is it ajay devgan was the first choice for padmavati
ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರ ಅಜಯ್‌ ನಿಭಾಯಿಸಬೇಕಿತ್ತಾ?


ಈ ವಿವಾದದ ನಡುವೆ 'ಪದ್ಮಾವತಿ' ಕುರಿತಾದ ಮತ್ತೊಂದು ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ. ಅದೇನಪ್ಪಾ ಅಂದ್ರೆ, ಅಲ್ಲಾವುದ್ದೀನ್ ಖಿಲ್ಜಿ ಪಾತ್ರದ ಮೊದಲ ಆಯ್ಕೆ ಅಜಯ್‌ ದೇವಗನ್‌ ಆಗಿದ್ದರಂತೆ. 'ಪದ್ಮಾವತಿ' ಟ್ರೇಲರ್‌ನಲ್ಲಿ ನಿಜಕ್ಕೂ ಮಿಂಚಿರುವುದು ಅಲ್ಲಾವುದ್ದೀನ್‌ ಪಾತ್ರ ನಿಭಾಯಿಸಿರುವ ರಣವೀರ್‌ ಸಿಂಗ್‌ ಎಂದರೆ ತಪ್ಪಾಗಲಾರದು. ಆ ಪಾತ್ರದಲ್ಲಿ ಬೇರೆ ನಟರನ್ನು ಊಹಿಸಿಕೊಳ್ಳಲೂ ಕಷ್ಟವೆನ್ನುವ ಮಟ್ಟಕ್ಕೆ ಸಖತ್ತಾಗಿ ಮಿಂಚಿದ್ದಾರೆ ರಣವೀರ್‌.

ಆದರೆ ಕೆಲ ಮೂಲಗಳು ಈ ಸುದ್ದಿ ನಿಜವಲ್ಲ ಎಂದು ವರದಿ ಮಾಡಿವೆ. ಸದ್ಯದ ಮಾಹಿತಿ ಪ್ರಕಾರ ಅಜಯ್‌ ದೇವಗನ್‌ ಮೊದಲ ಆಯ್ಕೆಯಾಗಿದ್ದು 'ಪದ್ಮಾವತಿ' ಚಿತ್ರಕ್ಕಲ್ಲ ಬದಲಾಗಿ 'ಬಾಜಿರಾವ್‌ ಮಸ್ತಾನಿ' ಚಿತ್ರಕ್ಕೆ. ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ 'ಬಾಜಿರಾವ್‌ ಮಸ್ತಾನಿ' ಚಿತ್ರಕ್ಕಾಗಿ ಅಜಯ್‌ ದೇವಗನ್‌ ಅವರನ್ನು ಸಂಪರ್ಕಿಸಿದರಂತೆ. ಕಾರಣಾಂತರಗಳಿಂದ ಅಜಯ್‌ ಆ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ ಎನ್ನಲಾಗಿದೆ. ಅಜಯ್‌ ಮತ್ತು ಸಂಜಯ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದ 'ಹಮ್‌ ದಿಲ್‌ ದೇ ಚುಕೆ ಸನಮ್‌' ಚಿತ್ರ ಸೂಪರ್‌ ಹಿಟ್‌ ಆಗಿದ್ದು ಈಗ ಹಳೆಯ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌