ಆ್ಯಪ್ನಗರ

ಒಂದೇ ವರ್ಷದಲ್ಲಿ ಮುರಿದು ಬಿತ್ತಾ ಬಾಲಿವುಡ್ ಜೋಡಿಯ ದಾಂಪತ್ಯ ಜೀವನ?

ಬಾಲಿವುಡ್‍ನಲ್ಲಿ ಆಗಾಗ ಗಾಳಿಸುದ್ದಿಗಳು, ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಹೊಗೆ ಇಲ್ಲದೆ ಬೆಂಕಿ ಇಲ್ಲ ಎಂಬ ಮಾತಿನಂತೆ ಈ ಜೋಡಿ ಬಗ್ಗೆಯೂ ಅಂತಹದ್ದೇ ಗಾಸಿಪ್ ಹಬ್ಬಿದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ ಪ್ರತೀಕ್ ಬಬ್ಬರ್.

TIMESOFINDIA.COM 2 Apr 2020, 4:43 pm

ಕಳೆದ ವರ್ಷ ಜನವರಿಯಲ್ಲಿ ಮದುವೆಯಾದ ಬಾಲಿವುಡ್ ನಿರ್ಮಾಪಕಿ ಸನ್ಯಾ ಸಾಗರ್ ಹಾಗೂ ನಟ ಪ್ರತೀಕ್ ಬಬ್ಬರ್ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಇವರಿಬ್ಬರ ಬಗ್ಗೆ ಈ ರೀತಿ ಗಾಸಿಪ್ ಹರಿದಾಡಲು ಕಾರಣಗಳೂ ಇಲ್ಲದಿಲ್ಲ.
Vijaya Karnataka Web ಪ್ರತೀಕ್ ಬಬ್ಬರ್


ಇತ್ತೀಚಿನ ದಿನಗಳಲ್ಲಿ ಸನ್ಯಾ ಸಾಗರ್ ಸಿನಿಮಾಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಗಂಡ ಪ್ರತೀಕ್‍ರನ್ನು ಆಹ್ವಾನಿಸದೇ ಇರುವುದು ಒಂದು ಕಾರಣವಾದರೆ, ಇನ್ನೊಂದು ಪ್ರತೀಕ್ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೂ ಸನ್ಯಾರನ್ನು ಕರೆಯುತ್ತಿಲ್ಲವಂತೆ ಎಂಬ ವದಂತಿಗಳು ಬಲವಾಗಿ ಹಬ್ಬಿರುವುದೇ ಗಾಳಿಸುದ್ದಿಗಳಿಗೆ ಕಾರಣವಾಗಿದೆ.

ಮಗದೊಂದು ಕಡೆ ಇವರಿಬ್ಬರೂ ಇನ್‍ಸ್ಟಾಗ್ರಾಮ್‌ನಲ್ಲಿ ಸಹ ಪರಸ್ಪರ ಫಾಲೋ ಮಾಡಿಕೊಳ್ಳುತ್ತಿಲ್ಲ. ಅದೇ ರೀತಿ ಇವರಿಬ್ಬರಿಗೂ ಸಂಬಂಧಿಸಿದ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಡಿಲೀಟ್ ಮಾಡಿಕೊಂಡಿರುವುದು ಈ ವದಂತಿಗೆ ಇನ್ನಷ್ಟು ಪುಷ್ಟಿ ನೀಡಿದೆ.

ಇಪ್ಪತ್ತೊಂದು ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಅರ್ಜುನ್

ಆದರೆ ಈ ಸುದ್ದಿಗಳನ್ನು ಪ್ರತೀಕ್ ಬಬ್ಬರ್ ಖಂಡಿಸಿದ್ದಾರೆ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ, ನಮ್ಮ ನಡುವೆ ಯಾವುದೇ ಗಲಾಟೆ ಜಗಳ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ರಿಲೇಷನ್‌ಶಿಪ್‍ನಲ್ಲಿದ್ದ ಈ ಜೋಡಿ ಕಳೆದ ವರ್ಷ ಲಖನೌನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿತು.

ಮದುವೆಯಾಗಿ ವರ್ಷದೊಳಗೆ ಬೇರೆಯಾಗುವ ಮಾತೇಕೆ?
ಪ್ರತೀಕ್ ತಾಯಿ ಮರಾಠಿಯಾಗಿದ್ದು ಆ ಸಂಪ್ರದಾಯದ ಪ್ರಕಾರ ಮದುವೆ ಅದ್ದೂರಿಯಾಗಿ ನಡೆಯಿತು. ಇತ್ತೀಚೆಗೆ ರಿಲೀಸ್ ಆದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಸಿನಿಮಾದಲ್ಲಿ ಪ್ರತೀಕ್ ಅಭಿನಯಿಸಿದ್ದಾರೆ. ಇದರ ಜೊತೆಗೆ 'ಮುಂಬೈ ಸಾಗ' ಎಂಬ ಸಿನಿಮಾದಲ್ಲೂ ಪ್ರತೀಕ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಜಾಕಿ ಶ್ರಾಫ್, ಜಾನ್ ಅಬ್ರಹಾಂ, ಸುನಿಲ್ ಶೆಟ್ಟಿ, ಇಮ್ರಾನ್ ಹಸ್ಮಿ, ಶರ್ಮನ್ ಜೋಷಿ ಸೇರಿದಂತೆ ಮುಂತಾದವರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌