ರಾಣಿ ಮುಖರ್ಜಿ ಬೆಂಗಾಳಿಯವರು. ಅಭಿಷೇಕ್ ಬಚ್ಚನ್ ತಾಯಿ ಜಯಾ ಬಚ್ಚನ್ ಕೂಡ ಬೆಂಗಾಳಿಯವರೇ..ಹೀಗಾಗಿ ರಾಣಿಯನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಇವರು ಒಪ್ಪಿದ್ದರು. ತೆರೆ ಮೇಲೆ ಸುಂದರವಾಗಿ ಕಾಣುವ ಈ ಜೋಡಿ ತೆರೆ ಹಿಂದೆಯೂ ಜೋಡಿಯಾದರೆ ಹೇಗಿರುತ್ತೆ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದರೆ ಆದರೆ ವಿಧಿ ಇವರಿಬ್ಬರ ಹಣೆಯಲ್ಲಿ ಬರೆದಿದ್ದು ಮಾತ್ರ ಬೇರೆ ಆಗಿತ್ತು. 'ಲಾಗಾ ಚುನಾರಿ ಮೇ ದಾಗ್' ಸಿನಿಮಾ ಟೈಮ್ನಲ್ಲಿ ರಾಣಿ ಮತ್ತು ಅಭಿಷೇಕ್ ಜೀವನ ತುಂಬ ಬದಲಾಯ್ತು. ಈ ಚಿತ್ರ ಕೂಡ ಹಿಟ್ ಆಗಲಿಲ್ಲ, ಆಗಲೇ ಭಿನ್ನಾಭಿಪ್ರಾಯ ಕೂಡ ಬಂತು. ಈ ಸಿನಿಮಾದಲ್ಲಿ ಜಯಾ ಬಚ್ಚನ್ ಕೂಡ ನಟಿಸಿದ್ದರು. ಸೆಟ್ನಲ್ಲಿ ರಾಣಿಯ ನಡೆ ಜಯಾಗೆ ಇಷ್ಟವಾಗಲಿಲ್ಲ. ಇದರ ಪರಿಣಾಮ ರಾಣಿ ಮತ್ತು ಅಭಿ ಸಂಬಂಧದ ಮೇಲಾಯ್ತು..
ಅಮಿತಾಬ್ ಬಚ್ಚನ್ ಹುಟ್ಟುಹಬ್ಬದ ಪಾರ್ಟಿಯಲ್ಲಿಯೇ ಅಭಿಷೇಕ್ ಮತ್ತು ಕರೀಷ್ಮಾ ಕಪೂರ್ ನಿಶ್ಚಿತಾರ್ಥದ ಘೋಷಣೆಯಾಯ್ತು!
2002ರ ಅಕ್ಟೋಬರ್ನಲ್ಲಿ ಅಮಿತಾಬ್ ಬಚ್ಚನ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅಭಿಷೇಕ್ ಮತ್ತು ಕರೀಷ್ಮಾ ಕಪೂರ್ ನಿಶ್ಚಿತಾರ್ಥ ಮಾಡೋದಾಗಿ ಘೋಷಣೆ ಮಾಡಲಾಯ್ತು. 2003ರಲ್ಲಿ ಈ ನಿಶ್ಚಿತಾರ್ಥವೂ ಮುರಿದುಬಿತ್ತು. ರಣಧೀರ್ ಕಪೂರ್ನಿಂದ ದೂರವಾದ ನಂತರದಲ್ಲಿ ಬಬಿತಾ ಕಪೂರ್ ತನ್ನ ಹೆಣ್ಣುಮಕ್ಕಳಾದ ಕರಿಷ್ಮಾ ಮತ್ತು ಕರೀನಾರನ್ನು ಒಂಟಿಯಾಗಿ ಬೆಳೆಸಿದರು ಎಂಬುದು ಗುಟ್ಟಿನ ವಿಚಾರವಲ್ಲ. ಅವರಿಗೆ ಹಣದ ಮೌಲ್ಯ ಗೊತ್ತಿತ್ತು, ತನ್ನ ಮಕ್ಕಳು ಅವರ ಜೀವನದಲ್ಲಿ ಯಾವ ಕೊರತೆಯನ್ನು ಅನುಭವಿಸಬಾರದು ಎಂದುಕೊಂಡಿದ್ದರು. ಅಭಿಷೇಕ್ ಮತ್ತು ಕರಿಷ್ಮಾ ಸಂಬಂಧದಲ್ಲಿದ್ದಾಗ, ಕರೀಷ್ಮಾ ಅದಾಗಲೇ ಗುರುತಿಸಿಕೊಂಡ ನಟಿಯಾಗಿದ್ದರು, ಆದರೆ ಅಭಿಷೇಕ್ ಮಾತ್ರ ಆಗತಾನೇ ಹೆಸರು ಮಾಡುತ್ತಿದ್ದರು. ಆ ಸಮಯದಲ್ಲಿ ಬಚ್ಚನ್ ಕುಟುಂಬದ ಆರ್ಥಿಕ ಸ್ಥಿತಿಗತಿ ಕೂಡ ಚೆನ್ನಾಗಿರಲಿಲ್ಲ.
ಅಭಿಷೇಕ್ ಬಚ್ಚನ್: ಈ ನಟನ ಬಳಿ ಇರುವ ಕಾರುಗಳೆಲ್ಲವೂ ಐಷಾರಾಮಿ ಕಾರುಗಳೆ
ಬಚ್ಚನ್ ಕುಟುಂಬದ ಆಸ್ತಿಯನ್ನೆಲ್ಲ ಅಭಿಷೇಕ್ ಹೆಸರಿಗೆ ವರ್ಗಾಯಿಸಿ: ಬಬಿತಾ ಕಪೂರ್
ಅಭಿಷೇಕ್ ನಟನೆ ಮೇಲೆ ಅಷ್ಟೊಂದು ಭರವಸೆ ಹೊಂದಿರದ ಬಬಿತಾ, ಮಗಳು ಕರೀಷ್ಮಾ ಭವಿಷ್ಯದ ದೃಷ್ಟಿಯಿಂದ ಬಚ್ಚನ್ ಕುಟುಂಬದ ಆಸ್ತಿಯನ್ನು ಅಭಿಷೇಕ್ ಹೆಸರಿಗೆ ವರ್ಗಾಯಿಸುವಂತೆ ಹೇಳಿದ್ದರು. ಇದಕ್ಕೆ ಬಚ್ಚನ್ ಕುಟುಂಬ ಒಪ್ಪಲಿಲ್ಲ. ಹೀಗಾಗಿ ಈ ಜೋಡಿ ಬೇರೆಯಾಯ್ತು ಎಂಬ ಮಾತಿದೆ. ಇನ್ನೊಂದು ಕಡೆ ಜಯಾ ಬಚ್ಚನ್, ಮಗನ ಜೀವನಕ್ಕೋಸ್ಕರ ಕರೀಷ್ಮಾ ಬಳಿ ನಟನೆ ಬಿಟ್ಟುಬಿಡು ಎಂದಿದ್ದರಂತೆ. ಹೀಗಾಗಿ ಈ ಎರಡು ವಿಚಾರಗಳು ಕರೀಷ್ಮಾ ಮತ್ತು ಅಭಿಷೇಕ್ ಸಂಬಂಧದ ವಿಚಾರದಲ್ಲಿ ಕೇಳಿಬರುತ್ತವೆಯಾದರೂ ಇದು ಅಧಿಕೃತ ಅಥವಾ ನಿಜವಾದ ಕಾರಣ ಎಂದು ಹೇಳಲಾಗದು. ಹಾಗೆಯೇ ಕೆಲವೊಂದು ಸಭೆ ಸಮಾರಂಭಗಳಲ್ಲಿ ಮುಖಾಮುಖಿಯಾದರೂ ಕೂಡ ಅಭಿಷೇಕ್ ಮತ್ತು ಕರೀನಾ ತುಂಬ ದೂರ ದೂರವಿರುತ್ತಾರೆ.
ಕೊರೊನಾ ವೈರಸ್ ಜಾಗೃತಿಗೆ ಕವನ ಬರೆದು ಹಾಡಿರುವ ಅಮಿತಾಬ್ ಬಚ್ಚನ್ ವಿಡಿಯೋ ನೋಡಿದ್ದೀರಾ?
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆಗೆ ರಾಣಿಗೆ ಆಹ್ವಾನ ಇರಲಿಲ್ಲ; ಗುಟ್ಟಾಗಿ ಆದಿತ್ಯಾ ಚೋಪ್ರಾರನ್ನು ಮದುವೆಯಾಗಿದ್ದ ರಾಣಿ ಮುಖರ್ಜಿ
ನಟ ಆಮೀರ್ ಖಾನ್ ಮತ್ತು ಗೋವಿಂದ ಜೊತೆಗೂ ರಾಣಿ ಮುಖರ್ಜಿಗೆ ಸಂಬಂಧ ಇತ್ತು, ಪ್ರೀತಿಯಲ್ಲಿದ್ದರು ಎಂಬ ಮಾತು ಕೇಳಿಬಂದಿತ್ತು. ಕೊನೆಗೆ ರಾಣಿ ಮುಖರ್ಜಿ 2014ರಲ್ಲಿ ಇಟಲಿಯಲ್ಲಿ ರಹಸ್ಯವಾಗಿ ಆದಿತ್ಯ ಚೋಪ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರಾಣಿ ಮುಖರ್ಜಿ ಅವರ ಫಸ್ಟ್ ಕಸಿನ್ ಕಾಜೊಲ್ಗೂ ಕೂಡ ಈ ವಿಷಯ ಗೊತ್ತಿರಲಿಲ್ಲ. ಶತ್ರುಘ್ನ ಸಿನ್ಹಾ, ಶಾರುಖ್ ಖಾನ್, ಆಮೀರ್ ಖಾನ್ ಕೂಡ ಈ ಮದುವೆಗೆ ಸಾಕ್ಷಿಯಾಗಿರಲಿಲ್ಲ. ಅಷ್ಟೇ ಅಲ್ಲ, ಅಭಿಷೇಕ್ ಮತ್ತು ಐಶ್ವರ್ಯಾ ಮದುವೆಗೆ ರಾಣಿ ಮುಖರ್ಜಿಗೆ ಆಹ್ವಾನ ಇರಲಿಲ್ಲ. ಇದರ ಬಗ್ಗೆ ಪ್ರಶ್ನಿಸಿದಾಗ ರಾಣಿ 'ಇದನ್ನು ನೀವು ಅಭಿಷೇಕ್ ಹತ್ತಿರ ಕೇಳಬೇಕು, ನಾವಿಬ್ಬರೂ ಸಹದ್ಯೋಗಿಗಳು ವಿನಃ ಸ್ನೇಹಿತರಲ್ಲ.' ಎಂದು ಹೇಳಿದ್ದರು. ಐಶ್ ಮತ್ತು ಅಭಿಯ ವಿವಾಹ ವಾರ್ಷಿಕೋತ್ಸವ ದಿನಾಂಕದ ಮರುದಿನವೇ ರಾಣಿ ಮದುವೆಯಾಗಿದ್ದದ್ದು ಮಾತ್ರ ದೊಡ್ಡ ವಿಶೇಷ.