ಆ್ಯಪ್ನಗರ

ಮಹೇಶ್ ಬಾಬು ಹೇಳಿರೋದು ಸರಿಯಾಗೇ ಇದೆ ಎಂದ ಬಾಲಿವುಡ್ ನಟಿ ಕಂಗನಾ!

‘’ಬಾಲಿವುಡ್ ಮಂದಿಯಿಂದ ನನ್ನ ನಿಭಾಯಿಸಲು ಸಾಧ್ಯವಿಲ್ಲ’’ ಎಂದು ಮಹೇಶ್ ಬಾಬು ಹೇಳಿದ್ದರು. ಮಹೇಶ್ ಬಾಬು ಅವರ ಈ ಹೇಳಿಕೆ ಸರಿಯಾಗಿ ಇದೆ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ.

Authored byಹರ್ಷಿತಾ ಎನ್ | Vijaya Karnataka Web 13 May 2022, 2:13 pm

ಹೈಲೈಟ್ಸ್‌:

  • ಬಾಲಿವುಡ್‌ ಮಂದಿಯಿಂದ ನನ್ನನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದ ಮಹೇಶ್ ಬಾಬು
  • ಮಹೇಶ್ ಬಾಬು ಅವರ ಹೇಳಿಕೆ ಸರಿಯಾಗಿಯೇ ಇದೆ ಎಂದ ನಟಿ ಕಂಗನಾ ರನೌತ್
  • ಮಹೇಶ್ ಬಾಬು ಪರವಾಗಿ ಮಾತನಾಡಿದ ನಟಿ ಕಂಗನಾ ರನೌತ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kangana ranaut extended her support to mahesh babu over his bollywood comment
ಮಹೇಶ್ ಬಾಬು ಹೇಳಿರೋದು ಸರಿಯಾಗೇ ಇದೆ ಎಂದ ಬಾಲಿವುಡ್ ನಟಿ ಕಂಗನಾ!
ಟಾಲಿವುಡ್ ನಟ ಮಹೇಶ್ ಬಾಬು ಅವರಿಗೆ ಇತ್ತೀಚೆಗಷ್ಟೇ ಒಂದು ಪ್ರಶ್ನೆ ಎದುರಾಗಿತ್ತು. ‘ಮೇಜರ್’ ಚಿತ್ರದ ಟ್ರೈಲರ್ ಲಾಂಚ್ ವೇಳೆ ‘’ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲವೇ?’’ ಎಂಬ ಪ್ರಶ್ನೆ ಮಹೇಶ್ ಬಾಬು ಕಡೆ ತೂರಿಬಂತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹೇಶ್ ಬಾಬು, ‘’ನನಗೆ ಹಿಂದಿ ಚಿತ್ರರಂಗದಿಂದ ಸಾಕಷ್ಟು ಆಫರ್ಸ್ ಬರುತ್ತಿವೆ. ಆದರೆ, ಅವರು ನನ್ನನ್ನು ನಿಭಾಯಿಸುತ್ತಾರೆ ಎಂದು ನನಗೆ ಅನಿಸುವುದಿಲ್ಲ. ನನ್ನನ್ನು ನಿಭಾಯಿಸಲು ಸಾಧ್ಯವಾಗದ ಚಿತ್ರರಂಗಕ್ಕೆ ಹೋಗಿ ನನ್ನ ಕೆಲಸದ ಸಮಯವನ್ನು ವ್ಯರ್ಥ ಮಾಡಲು ನನಗೆ ಇಷ್ಟವಿಲ್ಲ. ನನಗೆ ದಕ್ಷಿಣ ಭಾರತದಲ್ಲಿ ಅಪಾರ ಗೌರವ, ಜನಪ್ರಿಯತೆ ಇದೆ. ಹೀಗಾಗಿ, ತೆಲುಗು ಚಿತ್ರರಂಗವನ್ನು ಬಿಟ್ಟು ಬೇರೊಂದು ಚಿತ್ರರಂಗಕ್ಕೆ ಹೋಗುವ ಆಲೋಚನೆಯನ್ನು ನಾನು ಮಾಡುವುದಿಲ್ಲ’’ ಎಂದಿದ್ದರು.
ಮಹೇಶ್ ಬಾಬು ಕೊಟ್ಟಿರುವ ಈ ಹೇಳಿಕೆ ಇದೀಗ ವಿವಾದಕ್ಕೆ ಗ್ರಾಸವಾಗಿದೆ. ಮಹೇಶ್ ಬಾಬು ಅವರ ಈ ಹೇಳಿಕೆ ಕುರಿತಾಗಿ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೂ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿರುವ ಕಂಗನಾ ರನೌತ್, ‘’ಮಹೇಶ್ ಬಾಬು ಕೊಟ್ಟಿರುವ ಹೇಳಿಕೆ ಸರಿಯಾಗಿದೆ’’ ಎಂದಿದ್ದಾರೆ.

'ಬಾಲಿವುಡ್‌ ಮಂದಿಯಿಂದ ನನ್ನನ್ನು ನಿಭಾಯಿಸಲು ಸಾಧ್ಯವಿಲ್ಲ..'; ನಟ ಮಹೇಶ್‌ ಬಾಬು ಹೀಗೆ ಹೇಳಿದ್ದೇಕೆ?

ನಟಿ ಕಂಗನಾ ರನೌತ್ ಹೇಳಿದ್ದೇನು?
‘’ಮಹೇಶ್ ಬಾಬು ಸರಿಯಾಗಿಯೇ ಹೇಳಿದ್ದಾರೆ. ಮಹೇಶ್ ಬಾಬು ಅವರನ್ನ ನಿಭಾಯಿಸಲು ಬಾಲಿವುಡ್‌ಗೆ ಸಾಧ್ಯವಿಲ್ಲ. ಯಾಕಂದ್ರೆ, ಹಲವು ನಿರ್ಮಾಪಕರು ಮಹೇಶ್ ಬಾಬು ಅವರಿಗೆ ಆಫರ್ ನೀಡಿದ್ದಾರೆ, ಮಹೇಶ್ ಬಾಬು ಮತ್ತವರ ಪೀಳಿಗೆ ತೆಲುಗು ಚಿತ್ರರಂಗವನ್ನು ಭಾರತದಲ್ಲಿ ನಂಬರ್.1 ಆಗುವ ಹಾಗೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತು. ಹೀಗಾಗಿ, ಬಾಲಿವುಡ್‌ ಕೈಯಲ್ಲಿ ಅವರನ್ನು ಭರಿಸುವ ಶಕ್ತಿ ಇಲ್ಲ’’

‘’ಚಿಕ್ಕ ಪುಟ್ಟ ವಿಷಯಗಳಿಗೆ ವಿವಾದ ಸೃಷ್ಟಿಸುವ ಅವಶ್ಯಕತೆ ಏನಿದೆ? ಅವರು ಆ ಹೇಳಿಕೆಯನ್ನ ಯಾವುದೋ ಸಂದರ್ಭದಲ್ಲಿ, ಅರ್ಥದಲ್ಲಿ ಹೇಳಿರಬಹುದು. ಆದರೆ, ಅದರಲ್ಲೂ ಒಂದು ವಿಷಯವಿದೆ. ಅವರು ತಮ್ಮ ಕೆಲಸಕ್ಕೆ ಮತ್ತು ಉದ್ಯಮಕ್ಕೆ ಗೌರವ ನೀಡಿದ್ದಾರೆ. ಇದೇ ಕಾರಣಕ್ಕೆ ಅವರು ಎತ್ತರಕ್ಕೆ ಬೆಳೆದಿದ್ದಾರೆ. ಇದನ್ನ ನಾವು ಅಲ್ಲಗೆಳೆಯುವಂತಿಲ್ಲ. ಅವರಿಂದ ನಾವೆಲ್ಲ ಕಲಿಯುವುದು ಬಹಳಷ್ಟಿದೆ’’ ಎಂದು ನಟಿ ಕಂಗನಾ ರನೌತ್ ಹೇಳಿದ್ದಾರೆ.

'ಸರ್ಕಾರು ವಾರಿ ಪಾಟ' ಚಿತ್ರ ನೋಡಿದ ಸೆನ್ಸಾರ್ ಅಧಿಕಾರಿಗಳು; ಮಹೇಶ್ ಬಾಬು, ಕೀರ್ತಿ ಸುರೇಶ್ ಸಿನಿಮಾ ಹೇಗಿದೆಯಂತೆ?

ಸರ್ಕಾರಿ ವಾರು ಪಾಟ
ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಅಭಿನಯದ ‘ಸರ್ಕಾರಿ ವಾರು ಪಾಟ’ ಸಿನಿಮಾ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲ ದಿನವೇ 75 ಕೋಟಿ ರೂಪಾಯಿ ಗಳಿಸುವಲ್ಲಿ ‘ಸರ್ಕಾರಿ ವಾರು ಪಾಟ’ ಸಿನಿಮಾ ಯಶಸ್ವಿಯಾಗಿದೆ. ‘ಸರ್ಕಾರಿ ವಾರು ಪಾಟ’ ಚಿತ್ರಕ್ಕೆ ಪರಶುರಾಮ್ ಆಕ್ಷನ್ ಕಟ್ ಹೇಳಿದ್ದಾರೆ.

Fill this survey and get a chance to win an attractive gift
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌