ಆ್ಯಪ್ನಗರ

ಶೂಟಿಂಗ್‌ನಲ್ಲಿ ಕಂಗನಾ ರನೌತ್‌ ಹಣೆ ಸೀಳಿದ ಕತ್ತಿ

ಬಾಲಿವುಡ್ ನಟಿ ಕಂಗನಾ ರನೌತ್ ಕತ್ತಿ ವರಸೆ ಸನ್ನಿವೇಶದ ಚಿತ್ರೀಕರಣದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಟಾಲಿವುಡ್ ನಿರ್ದೇಶಕ ಕ್ರಿಷ್ ಆಕ್ಷನ್ ಕಟ್ ಹೇಳುತ್ತಿರುವ ಬಾಲಿವುಡ್ ಸಿನಿಮಾ ಮಣಿಕರ್ಣಿಕ ಶೂಟಿಂಗ್‌ನಲ್ಲಿ ಈ ಘಟನೆ ನಡೆದಿದೆ.

Indiatimes 20 Jul 2017, 3:40 pm
ಬಾಲಿವುಡ್ ನಟಿ ಕಂಗನಾ ರನೌತ್ ಕತ್ತಿ ವರಸೆ ಸನ್ನಿವೇಶದ ಚಿತ್ರೀಕರಣದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಟಾಲಿವುಡ್ ನಿರ್ದೇಶಕ ಕ್ರಿಷ್ ಆಕ್ಷನ್ ಕಟ್ ಹೇಳುತ್ತಿರುವ ಬಾಲಿವುಡ್ ಸಿನಿಮಾ ಮಣಿಕರ್ಣಿಕ ಶೂಟಿಂಗ್‌ನಲ್ಲಿ ಈ ಘಟನೆ ನಡೆದಿದೆ.
Vijaya Karnataka Web kangana ranaut hospitalised after being injured during manikarnika shoot
ಶೂಟಿಂಗ್‌ನಲ್ಲಿ ಕಂಗನಾ ರನೌತ್‌ ಹಣೆ ಸೀಳಿದ ಕತ್ತಿ


ತನ್ನ ಸಹನಟ ನಿಹಾರ್ ಪಾಂಡ್ಯ ಜತೆಗೆ ಕತ್ತಿವರಸೆ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾಗ ಟೈಮಿಂಗ್ ಮಿಸ್ ಆಗಿ ನಿಹಾರ್ ಪಾಂಡ್ಯ ಬೀಸಿದ ಕತ್ತಿ ಕಂಗನಾ ಹಣೆಯನ್ನು ಸೀಳಿಕೊಂಡು ಹೋಗಿದೆ. ಇದರಿಂದ ಹಣೆ ಮೇಲೆ ಗಂಭೀರವಾಗಿ ಗಾಯವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂಗನಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಣೆ ಮೇಲೆ ಆಗಿರುವ ಗಾಯಕ್ಕೆ 15 ಹೊಲಿಗೆ ಹಾಕಿರುವುದಾಗಿ ತಿಳಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಭಾರಿ ಅವಘಡ ತಪ್ಪಿದೆ ಎಂದು, ಇಲ್ಲದಿದ್ದರೆ ಮೂಳೆಗೆ ಬಲವಾಗಿ ಗಾಯವಾಗಿರುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕಮಲ್ ಜೈನ್, 'ಈ ಸನ್ನಿವೇಶವನ್ನು ಈಗಾಗಲೆ ಬಹಳಷ್ಟು ಸಲ ರಿಹರ್ಸಲ್ ಮಾಡಿದ್ದರು, ಡ್ಯೂಪ್ ಇಟ್ಟುಕೊಳ್ಳಲು ಸೂಚಿಸಿದ್ದರು ಕಂಗನಾ ರಿಸ್ಕ್ ತೆಗೆದುಕೊಂಡು ಈ ಕತ್ತಿವರಸೆಯನ್ನು ಸ್ವತಃ ಮಾಡಿದರೆಂದು ತಿಳಿಸಿದರು. ಕಂಗನಾಗೆ ಗಾಯವಾಗಲು ತಾನೇ ಕಾರಣ ಎಂದು ನಾಯಕ ನಟ ನಿಹಾರ್ ಆಕೆಗೆ ಕ್ಷಮೆ ಕೋರಿದ್ದಾಗಿ' ಹೇಳಿದ್ದಾರೆ.

Kangana Ranaut got injured on the sets of #Manikarnika. We wish the actor speedy recovery! @KanganaRanautFC pic.twitter.com/NBqQnhPaYk — Hyderabad Times (@HydTimes) July 20, 2017 Actress Kangana Ranaut has suffered an injury while shooting "Manikarnika - The Queen of Jhansi" in Hyderabad and has been advised rest for five days.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌