ಆ್ಯಪ್ನಗರ

ಗೋವಾದಲ್ಲಿ ತಪ್ಪು ಮಾಡಿದ ಕರಣ್‌ ಜೋಹರ್‌ & ದೀಪಿಕಾ? ಬೇಜವಾಬ್ದಾರಿ ಕೆಲಸ ಕಂಡು ಕಂಗನಾ ಗರಂ!

ಬಾಲಿವುಡ್‌ ಎಂಬುದು ಈಗ ವಿವಾದಗಳ ಕೇಂದ್ರಸ್ಥಾನ ಆದಂತಿದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳ ವಿರುದ್ಧ ದಿನಕ್ಕೊಂದು ಹೊಸ ಆರೋಪ ಕೇಳಿಬರುತ್ತಿದೆ. ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ಮಾಪಕ ಕರಣ್‌ ಜೋಹರ್‌ ಹೊಸ ಸಂಕಷ್ಟದಲ್ಲಿ ಸಿಕ್ಕಿಕೊಂಡಿದ್ದಾರೆ.

Vijaya Karnataka Web 28 Oct 2020, 9:17 am
ನಟಿ ದೀಪಿಕಾ ಪಡುಕೋಣೆ ಅವರಿಗೆ ಸದ್ಯಕ್ಕೆ ಟೈಮ್‌ ಚೆನ್ನಾಗಿಲ್ಲ ಎನಿಸುತ್ತಿದೆ. ಅವರು ಏನೇ ಮಾಡಿದರೂ ವಿವಾದಕ್ಕೆ ಕಾರಣ ಆಗುತ್ತಿದೆ. ಮಾದಕ ವಸ್ತು ಸೇವನೆ ಆರೋಪದ ಮೇಲೆ ಇತ್ತೀಚೆಗಷ್ಟೇ ಅವರು ಎನ್‌ಸಿಬಿ ಅಧಿಕಾರಿಗಳಿಂದ ವಿಚಾರಣೆಗೆ ಒಳಪಟ್ಟಿದ್ದರು. ಈಗ ಕರಣ್‌ ಜೋಹರ್‌ ಜೊತೆಗೂಡಿ ಗೋವಾದಲ್ಲಿ ಮಾಡಿದ ತಪ್ಪಿಗಾಗಿ ಅವರು ಇನ್ನೊಂದು ತೊಂದರೆ ಎದುರಿಸುವಂತಾಗಿದೆ.
Vijaya Karnataka Web ಕರಣ್‌ ಜೋಹರ್‌, ದೀಪಿಕಾ ಪಡುಕೋಣೆ


ಎನ್‌ಸಿಬಿ ವಿಚಾರಣೆ ಸಲುವಾಗಿ ಮುಂಬೈಗೆ ಬರುವ ಮುನ್ನ ದೀಪಿಕಾ ಗೋವಾದಲ್ಲಿ ಶೂಟಿಂಗ್‌ ಮಾಡುತ್ತಿದ್ದರು. ಕರಣ್‌ ಜೋಹರ್‌ ನಿರ್ಮಾಣದ ಆ ಸಿನಿಮಾ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ ಅವರು ಕೂಡಲೇ ಮುಂಬೈ ವಿಮಾನ ಏರಬೇಕಾಯಿತು. ಶೂಟಿಂಗ್‌ ಸ್ಥಗಿತಗೊಂಡ ಬಳಿಕ ಇದೇ ಚಿತ್ರತಂಡ ಗೋವಾದ ಹಳ್ಳಿಯೊಂದರಲ್ಲಿ ಬೇಕಾಬಿಟ್ಟಿಯಾಗಿ ಕಸ ಎಸೆದಿದೆ ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಕೆಲವು ವಿಡಿಯೋಗಳು ಕೂಡ ಸಾಕ್ಷಿ ಒದಗಿಸುತ್ತಿವೆ.

ಗೋವಾದ ಪರಿಸರವನ್ನು ಹಾಳು ಮಾಡಿದ್ದಕ್ಕಾಗಿ ಈ ಚಿತ್ರತಂಡದ ವಿರುದ್ಧ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ನಟಿ ಕಂಗನಾ ರಣಾವತ್‌ ಕೂಡ ಕಿಡಿಕಾರಿದ್ದಾರೆ. 'ಚಿತ್ರೋದ್ಯಮವು ಕೇವಲ ದೇಶದ ನೈತಿಕ ಸ್ಥೈರ್ಯ ಮತ್ತು ಸಂಸ್ಕೃತಿಗೆ ಮಾತ್ರ ವೈರಸ್‌ ಆಗಿಲ್ಲ. ಅದು ಪರಿಸರಕ್ಕೂ ಸಹ ಹಾನಿಕಾರಕ ಆಗಿದೆ. ಪ್ರಕಾಶ್‌ ಜಾವ್ಡೇಕರ್‌ ಅವರೇ ಇಲ್ಲಿ ನೋಡಿ... ದೊಡ್ಡ ಪ್ರೊಡಕ್ಷನ್‌ ಕಂಪನಿಗಳು ಬೇಜವಾಬ್ದಾರಿತನದಿಂದ ಹೊಲಸು ಕೆಲಸ ಮಾಡಿವೆ. ದಯವಿಟ್ಟು ಸಹಾಯ ಮಾಡಿ' ಎಂದು ಕಂಗನಾ ಟ್ವೀಟ್‌ ಮಾಡಿದ್ದಾರೆ.

also read: ವಾಟ್ಸಪ್‌ನಲ್ಲಿ ಕೋಡ್‌ ವರ್ಡ್‌ ಬಳಸುತ್ತಿದ್ದ ದೀಪಿಕಾ! ತನಿಖೆಯಿಂದ ಮೆಸೇಜ್‌ ರಹಸ್ಯ ಬಹಿರಂಗ!

ಸದ್ಯ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಗೋವಾದ ಪರಿಸರ ಹಾಳು ಮಾಡಿದ್ದಕ್ಕಾಗಿ ಅಲ್ಲಿನ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕರಣ್ ಜೋಹರ್‌ ಅವರ ಮನೆ ಮುಂದೆ ಕಸ ತಂದು ಸುರಿಯುವುದಾಗಿ ಕೆಲವರು ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲ ಆದರೂ ಸಹ ದೀಪಿಕಾ ಪಡುಕೋಣೆ ಅವರಾಗಲಿ, ಕರಣ್‌ ಜೋಹರ್‌ ಅವರಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

also read: ಭಾರತೀಯ ವಾಯುಸೇನೆಗೆ ಮೋಸ ಮಾಡಿದ ಕರಣ್‌ ಜೋಹರ್‌! ನೆಪೋಟಿಸಂ ಬಳಿಕ ದೊಡ್ಡ ಕಿರಿಕ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌