ಆ್ಯಪ್ನಗರ

ಮೋದಿ ಜನ್ಮದಿನವನ್ನು 'ರಾಷ್ಟ್ರೀಯ ನಿರುದ್ಯೋಗ ದಿನ' ಎಂದವರಿಗೆ ಖಡಕ್‌ ತಿರುಗೇಟು ಕೊಟ್ಟ ಕಂಗನಾ!

ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನು ಕೆಲವರು 'ರಾಷ್ಟ್ರೀಯ ನಿರುದ್ಯೋಗ ದಿನ' ಎಂದು ಕರೆದಿದ್ದಾರೆ. ಅದಕ್ಕೆ ನಟಿ ಕಂಗನಾ ರಣಾವತ್‌ ಖಡಕ್ ತಿರುಗೇಟು ನೀಡಿದ್ದಾರೆ. ನಿಜಕ್ಕೂ ಉದ್ಯೋಗ ಕಿತ್ತುಕೊಂಡವರು ಯಾರು ಎಂಬುದನ್ನು ಅವರು ತಿಳಿಸಿದ್ದಾರೆ.

Vijaya Karnataka Web 17 Sep 2020, 2:04 pm
ದೇಶದಲ್ಲಿ ಇರುವ ನಿರುದ್ಯೋಗ ಸಮಸ್ಯೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ. ಮೋದಿ ಜನ್ಮದಿನವನ್ನು 'ರಾಷ್ಟ್ರೀಯ ನಿರುದ್ಯೋಗ ದಿನ' ಎಂದು ಕೆಲವರು ಕರೆಯುತ್ತಿದ್ದಾರೆ. ಇದು ಕಂಗನಾ ಕೋಪಕ್ಕೆ ಕಾರಣ ಆಗಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು ತಮ್ಮದೇ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.
Vijaya Karnataka Web ಕಂಗನಾ ರಣಾವತ್‌ ನರೇಂದ್ರ ಮೋದಿ


ಇತ್ತೀಚೆಗೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕಂಗನಾ ಕಣಾವತ್‌ ಅವರ ಕಚೇರಿಯನ್ನು ಒಡೆದು ಹಾಕಿದ್ದರು. ಆ ಫೋಟೋಗಳನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಳ್ಳುವ ಮೂಲಕ ಮಹಾರಾಷ್ಟ್ರ ಸರ್ಕಾರ ಮತ್ತು ಮೋದಿ ವಿರೋಧಿಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಕಂಗನಾ.

'ನನ್ನ ಕಾರ್ಯಕ್ಷೇತ್ರವನ್ನು ಸ್ಮಶಾನದ ರೀತಿ ಮಾಡಲಾಗಿದೆ. ಇದರಿಂದ ಅದೆಷ್ಟು ಜನರ ಉದ್ಯೋಗ ಕಳೆದುಹೋಯಿತೋ ಗೊತ್ತಿಲ್ಲ. ಒಂದು ಫಿಲ್ಮ್‌ ಯೂನಿಟ್‌ನಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಾರೆ. ಒಂದು ಸಿನಿಮಾ ತೆರೆಕಂಡರೆ, ಚಿತ್ರಮಂದಿರದಿಂದ ಹಿಡಿದು ಪಾಪ್‌ಕಾರ್ನ್‌ ಮಾರುವವನವರೆಗೆ ಎಷ್ಟೋ ಕುಟುಂಬಗಳು ನಡೆಯುತ್ತವೆ. ಅಂಥವರ ಕೆಲಸ ಕಿತ್ತುಕೊಂಡವರೆಲ್ಲ ಈಗ 'ರಾಷ್ಟ್ರೀಯ ನಿರುದ್ಯೋಗ ದಿನ' ಆಚರಿಸುತ್ತಿದ್ದಾರೆ' ಎಂದು ಕಂಗನಾ ಟೀಕಿಸಿದ್ದಾರೆ.

also read: ಮೋದಿಗೆ ಜನ್ಮದಿನದ ಶುಭಕೋರುತ್ತಾ ಕಾಂಟ್ರವರ್ಸಿ ನಟಿ ಕಂಗನಾ ರಣಾವತ್‌ ಹೇಳಿದ ಕಟು ಸತ್ಯ!

'ನನ್ನ ತಲೆ ಕಡಿದರೂ ಪರವಾಗಿಲ್ಲ. ನಾನು ತಲೆ ತಗ್ಗಿಸಲಾರೆ. ಈ ದೇಶದ ಗೌರವಕ್ಕಾಗಿ ನಾನು ಸದಾ ಧ್ವನಿ ಎತ್ತುತ್ತೇನೆ. ಗೌರವದಿಂದ ಬದುಕುತ್ತೇನೆ. ರಾಷ್ಟ್ರವಾದಿ ಎಂಬ ಹೆಮ್ಮೆಯಿಂದ ಬದುಕುತ್ತೇನೆ. ಮೌಲ್ಯಗಳ ವಿಚಾರದಲ್ಲಿ ಎಂದಿಗೂ ರಾಜಿ ಆಗುವುದಿಲ್ಲ. ಜೈ ಹಿಂದ್‌' ಎಂದು ಕಂಗನಾ ಟ್ವೀಟ್‌ ಮಾಡಿದ್ದಾರೆ.

also read: ಊರ್ಮಿಳಾ ಅವರನ್ನು ನೀಲಿ ಚಿತ್ರಗಳ ನಟಿ ಎಂದು ಕರೆದ ಕಂಗನಾ ರಣಾವತ್‌! ಕಾರಣ ಏನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌