ಹಿಂದಿಯ ಪ್ರಸಿದ್ಧ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಅವರು ನಟ ರಣ್ವೀರ್ ಸಿಂಗ್ ಎದುರು ಕುಳಿತಾಗ ಫುಲ್ ನರ್ವಸ್ ಆಗಿದ್ದರಂತೆ. ಈ ವಿಷಯವನ್ನು ಸ್ವತಃ ಕರಣ್ ಜೋಹರ್ ಹೇಳಿಕೊಂಡಿದ್ದಾರೆ. ಕರಣ್ ಹೇಳಿಕೆಯನ್ನು ನೋಡಿದ ರಣ್ವೀರ್ ಸಿಂಗ್ ಅದನ್ನು ಸಮರ್ಥಿಸಿಕೊಂಡು 'ಹೌದು, ಕರಣ್ ಜೋಹರ್ ನನ್ನ ಎದುರು ಕುಳಿತು ಕಥೆ ಹೇಳುತ್ತಿರುವಾಗ ಫುಲ್ ನರ್ವಸ್ ಆಗಿದ್ದರು" ಎಂದು ಹೇಳಿ ನಕ್ಕಿದ್ದಾರೆ.
ಹಾಗಿದ್ದರೆ ಆಗಿದ್ದೇನು ಗೊತ್ತೇ? ಆಗಿದ್ದಿಷ್ಟು. ಕರಣ್ ಜೋಹರ್ ನಿರ್ಮಾಣದಲ್ಲಿ ತಖ್ತ್' ಎಂಬ ಸಿನಿಮಾ ಈಗಾಗಲೇ ಸೆಟ್ಟೇರಿದೆ. ಈ ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿರುವ ರಣ್ವೀರ್ ಸಿಂಗ್ ಅವರಿಗೆ ಕಥೆ ಹೇಳಲು ಹೋಗಿದ್ದ ನಿರ್ಮಾಪಕ ಕರಣ್ ಜೋಹರ್ ಫುಲ್ ನರ್ವಸ್ ಆಗಿದ್ದರಂತೆ. ಅದನ್ನು ಕರಣ್ ಹೀಗೆ ಹೇಳಿದ್ದಾರೆ. " ನಾನು ತಖ್ತ್ ಸಿನಿಮಾ ಕಥೆಯನ್ನು ರಣ್ವೀರ್ ಸಿಂಗ್ ಅವರಿಗೆ ಹೇಳಲು ಹೋಗಿದ್ದೆ. ಕಾರಣ, ಆ ಕಥೆಗೆ ರಣ್ವೀರ್ ಸಿಂಗ್ ಅವರೇ ನನ್ನ ಮೊದಲ ಆಯ್ಕೆಯಾಗಿತ್ತು. ಅವರನ್ನು ಬಿಟ್ಟು ನಾನು ಆ ಪಾತ್ರಕ್ಕೆ ಬೇರೊಬ್ಬರನ್ನು ನನ್ನಿಂದ ಊಹಿಸಲೂ ಸಾಧ್ಯವಿರಲಿಲ್ಲ.
ಆದರೆ, ರಣ್ವೀರ್ ನನ್ನ ಕಥೆಯನ್ನು ಒಪ್ಪುವ ಬಗ್ಗೆ ನನಗೆ ಸಂದೇಹವಿತ್ತು. ಹೀಗಾಗಿ ನಾನು ಅವರ ಮುಂದೆ ಕುಳಿತು ಕಥೆ ಹೇಳುತ್ತಿರುವಾಗ ತುಂಬಾ ಒತ್ತಡಕ್ಕೆ ಒಳಗಾಗಿದ್ದೆ. ನಾನು ಅದೆಷ್ಟು ನರ್ವಸ್ ಆಗಿದ್ದೆ ಎಂದರೆ, ಅದನ್ನು ಸ್ವತಃ ರಣ್ವೀರ್ ಗುರುತಿಸಿದ್ದಾರೆ ಎಂಬುದು ನನಗೆ ತಿಳಿದು ಹೋಗಿತ್ತು. ಆದರೆ, ಬೇರೆ ದಾರಿಯಿಲ್ಲದೇ ನಾನು ಅವರಿಗೆ ನನ್ನ ಕಥೆ ಹೇಳಿದೆ. ಅಚ್ಚರಿ ಎಂಬಂತೆ ರಣ್ವೀರ್ ನನ್ನ ಕಥೆಯನ್ನು ಒಪ್ಪಿಕೊಂಡು ಗ್ರೀನ್ ಸಿಗ್ನಲ್ ಕೊಟ್ಟರು. ನನಗೆ ಆಗ ನಿಜವಾಗಿಯೂ ಅಚ್ಚರಿಯಾಯ್ತು" ಎಂದಿದ್ದಾರೆ.
ಈಗ ಕರಣ್ ಜೋಹರ್ ನಿರ್ಮಾಣ ಹಾಗೂ ನಿರ್ದೇಶನದ ತಖ್ತ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ನಾಯಕರಾಗಿ ರಣ್ವೀರ್ ಸಿಂಗ್ ನಟಿಸುತ್ತಿದ್ದರೆ ಅವರ ಪತ್ನಿ ಪಾತ್ರದಲ್ಲಿ ನಾಯಕಿಯಾಗಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಉಳಿದಂತೆ, ಪ್ರಮುಖ ಪಾತ್ರಗಳಲ್ಲಿ ಕರೀನಾ ಕಪೂರ್, ಜಾನ್ಹವಿ ಕಪೂರ್, ಮತ್ತು ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ಅದ್ದೂರಿ ಮೇಕಿಂಗ್ ಮೂಲಕ ತೆರೆಗೆ ತರಲು ಸಿದ್ಧಗೊಳಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಮತ್ತೆ 'ಗಲ್ಲಿ ಬಾಯ್' ಜೋಡಿ ತೆರೆಯ ಮೇಲೆ ರೊಮಾನ್ಸ್ ಮಾಡಲು ಬರುತ್ತಿದ್ದಾರೆ.
ಹಾಗಿದ್ದರೆ ಆಗಿದ್ದೇನು ಗೊತ್ತೇ? ಆಗಿದ್ದಿಷ್ಟು. ಕರಣ್ ಜೋಹರ್ ನಿರ್ಮಾಣದಲ್ಲಿ ತಖ್ತ್' ಎಂಬ ಸಿನಿಮಾ ಈಗಾಗಲೇ ಸೆಟ್ಟೇರಿದೆ. ಈ ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿರುವ ರಣ್ವೀರ್ ಸಿಂಗ್ ಅವರಿಗೆ ಕಥೆ ಹೇಳಲು ಹೋಗಿದ್ದ ನಿರ್ಮಾಪಕ ಕರಣ್ ಜೋಹರ್ ಫುಲ್ ನರ್ವಸ್ ಆಗಿದ್ದರಂತೆ. ಅದನ್ನು ಕರಣ್ ಹೀಗೆ ಹೇಳಿದ್ದಾರೆ. " ನಾನು ತಖ್ತ್ ಸಿನಿಮಾ ಕಥೆಯನ್ನು ರಣ್ವೀರ್ ಸಿಂಗ್ ಅವರಿಗೆ ಹೇಳಲು ಹೋಗಿದ್ದೆ. ಕಾರಣ, ಆ ಕಥೆಗೆ ರಣ್ವೀರ್ ಸಿಂಗ್ ಅವರೇ ನನ್ನ ಮೊದಲ ಆಯ್ಕೆಯಾಗಿತ್ತು. ಅವರನ್ನು ಬಿಟ್ಟು ನಾನು ಆ ಪಾತ್ರಕ್ಕೆ ಬೇರೊಬ್ಬರನ್ನು ನನ್ನಿಂದ ಊಹಿಸಲೂ ಸಾಧ್ಯವಿರಲಿಲ್ಲ.
ಆದರೆ, ರಣ್ವೀರ್ ನನ್ನ ಕಥೆಯನ್ನು ಒಪ್ಪುವ ಬಗ್ಗೆ ನನಗೆ ಸಂದೇಹವಿತ್ತು. ಹೀಗಾಗಿ ನಾನು ಅವರ ಮುಂದೆ ಕುಳಿತು ಕಥೆ ಹೇಳುತ್ತಿರುವಾಗ ತುಂಬಾ ಒತ್ತಡಕ್ಕೆ ಒಳಗಾಗಿದ್ದೆ. ನಾನು ಅದೆಷ್ಟು ನರ್ವಸ್ ಆಗಿದ್ದೆ ಎಂದರೆ, ಅದನ್ನು ಸ್ವತಃ ರಣ್ವೀರ್ ಗುರುತಿಸಿದ್ದಾರೆ ಎಂಬುದು ನನಗೆ ತಿಳಿದು ಹೋಗಿತ್ತು. ಆದರೆ, ಬೇರೆ ದಾರಿಯಿಲ್ಲದೇ ನಾನು ಅವರಿಗೆ ನನ್ನ ಕಥೆ ಹೇಳಿದೆ. ಅಚ್ಚರಿ ಎಂಬಂತೆ ರಣ್ವೀರ್ ನನ್ನ ಕಥೆಯನ್ನು ಒಪ್ಪಿಕೊಂಡು ಗ್ರೀನ್ ಸಿಗ್ನಲ್ ಕೊಟ್ಟರು. ನನಗೆ ಆಗ ನಿಜವಾಗಿಯೂ ಅಚ್ಚರಿಯಾಯ್ತು" ಎಂದಿದ್ದಾರೆ.
ಈಗ ಕರಣ್ ಜೋಹರ್ ನಿರ್ಮಾಣ ಹಾಗೂ ನಿರ್ದೇಶನದ ತಖ್ತ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ನಾಯಕರಾಗಿ ರಣ್ವೀರ್ ಸಿಂಗ್ ನಟಿಸುತ್ತಿದ್ದರೆ ಅವರ ಪತ್ನಿ ಪಾತ್ರದಲ್ಲಿ ನಾಯಕಿಯಾಗಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಉಳಿದಂತೆ, ಪ್ರಮುಖ ಪಾತ್ರಗಳಲ್ಲಿ ಕರೀನಾ ಕಪೂರ್, ಜಾನ್ಹವಿ ಕಪೂರ್, ಮತ್ತು ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ಅದ್ದೂರಿ ಮೇಕಿಂಗ್ ಮೂಲಕ ತೆರೆಗೆ ತರಲು ಸಿದ್ಧಗೊಳಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಮತ್ತೆ 'ಗಲ್ಲಿ ಬಾಯ್' ಜೋಡಿ ತೆರೆಯ ಮೇಲೆ ರೊಮಾನ್ಸ್ ಮಾಡಲು ಬರುತ್ತಿದ್ದಾರೆ.