ಆ್ಯಪ್ನಗರ

'ದೋಸ್ತಾನ 2' ಚಿತ್ರದಿಂದ ಕಾರ್ತಿಕ್‌ ಆರ್ಯನ್‌ರನ್ನು ಕೈಬಿಟ್ಟಿದ್ದಕ್ಕೆ ಕರಣ್‌ಗೆ ಕೋಟಿಗಟ್ಟಲೇ ಲಾಸ್‌!

'ಪ್ಯಾರ್‌ ಕಾ ಪಂಚ್‌ನಾಮ', 'ಸೋನು ಕೆ ಟಿಟು ಕಿ ಸ್ವೀಟಿ' ಮುಂತಾದ ಸಿನಿಮಾಗಳಿಂದ ಫೇಮಸ್‌ ಆಗಿದ್ದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರನ್ನು 'ದೋಸ್ತಾನ 2' ಚಿತ್ರದಿಂದ ಹೊರಹಾಕಲಾಗಿದೆ. ಇದರಿಂದ ನಿರ್ಮಾಪಕರಿಗೆ ಆದ ನಷ್ಟ ಎಷ್ಟು?

Vijaya Karnataka Web 18 Apr 2021, 8:28 pm

ಹೈಲೈಟ್ಸ್‌:

  • ದೋಸ್ತಾನ 2 ಸಿನಿಮಾದಿಂದ ಕಾರ್ತಿಕ್‌ ಆರ್ಯನ್‌ರನ್ನು ಕಿತ್ತು ಹಾಕಿದ್ದ ಕರಣ್ ಜೋಹರ್‌
  • ಈ ಸಿನಿಮಾಕ್ಕೆ 20 ದಿನ ಶೂಟಿಂಗ್ ಕೂಡ ನಡೆದಿತ್ತು!
  • ಕಾರ್ತಿಕ್‌ರನ್ನು ಕಿಕ್‌ಔಟ್ ಮಾಡಿದ್ದಕ್ಕೆ ಧರ್ಮ ಪ್ರೊಡಕ್ಷನ್ಸ್‌ಗೆ ಆದ ನಷ್ಟ ಎಷ್ಟು?
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web karan johar
'ದೋಸ್ತಾನ 2' ಚಿತ್ರದಿಂದ ನಟ ಕಾರ್ತಿಕ್ ಆರ್ಯನ್‌ರನ್ನು ನಿರ್ಮಾಪಕರು ಕೈಬಿಟ್ಟಿರುವ ವಿಚಾರ ಈಗ ಭಾರಿ ಚರ್ಚೆಯಲ್ಲಿದೆ. ನಿರ್ಮಾಪಕ/ನಿರ್ದೇಶಕ ಕರಣ್ ಜೋಹರ್‌ ಒಡೆತನದ ಧರ್ಮ ಪ್ರೊಡಕ್ಷನ್ಸ್‌ ಸಂಸ್ಥೆಯು ತಮ್ಮ ಬ್ಯಾನರ್‌ನ 'ದೋಸ್ತಾನ 2' ಚಿತ್ರದಿಂದ ಕಾರ್ತಿಕ್‌ಗೆ ಕೋಕ್ ನೀಡಿತ್ತು. ಅದಕ್ಕೆ ಕೆಲವು ಕಾರಣಗಳನ್ನು ನೀಡಿತ್ತು. ಇದೀಗ ಚಿತ್ರೀಕರಣ ನಡೆಯುವಾಗಲೇ ಕಾರ್ತಿಕ್ ಆರ್ಯನ್‌ರನ್ನು ಕಿಕ್‌ ಔಟ್ ಮಾಡಿದ್ದರಿಂದ ನಿರ್ಮಾಪಕರಿಗೇ ದೊಡ್ಡ ಹೊರೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ!
ಕಾರ್ತಿಕ್ ಹೋಗಿದ್ದಕ್ಕೆ 20 ಕೋಟಿ ರೂ. ಲಾಸ್!
'ಪ್ಯಾರ್‌ ಕಾ ಪಂಚ್‌ನಾಮ', 'ಸೋನು ಕೆ ಟಿಟು ಕಿ ಸ್ವೀಟಿ', 'ಲುಖಾ ಚುಪ್ಪಿ' ಮುಂತಾದ ಸಿನಿಮಾಗಳಿಂದ ಫೇಮಸ್‌ ಆಗಿದ್ದ ಕಾರ್ತಿಕ್‌ಗೆ 'ದೋಸ್ತಾನ 2' ಚಿತ್ರದಲ್ಲಿ ಚಾನ್ಸ್ ನೀಡಲಾಗಿತ್ತು. ಜಾನ್ವಿ ಕಪೂರ್, ಅಭಿಷೇಕ್ ಬ್ಯಾನರ್ಜಿ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದರು. ಕಾಲಿನ್ ಡಿ ಕುನ್ನಾ ಇದರ ನಿರ್ದೇಶಕರು. ಧರ್ಮ ಪ್ರೊಡಕ್ಷನ್ಸ್‌ ಈಗ ಕಾರ್ತಿಕ್‌ಗೆ ಕೋಕ್ ಕೊಟ್ಟಿದ್ದರಿಂದ ನಿರ್ಮಾಪಕ ಕರಣ್‌ಗೆ ಬರೋಬ್ಬರಿ 20 ಕೋಟಿ ರೂ. ನಷ್ಟವಾಗಲಿದೆಯಂತೆ! ಅದ್ಹೇಗೆ ಅಂತೀರಾ...? ಅದಕ್ಕೆ ಇಲ್ಲಿದೆ ನೋಡಿ ಉತ್ತರ!

ದೋಸ್ತಾನ 2ಗೆ ನಡೆದಿದೆ 20 ದಿನ ಚಿತ್ರೀಕರಣ!
ಒಂದು ಸಿನಿಮಾ ಆರಂಭಕ್ಕೂ ಮುನ್ನ ಸಾಕಷ್ಟು ತಯಾರಿಗಳು ನಡೆದಿರುತ್ತವೆ. ಇದುವರೆಗೂ ಕಾರ್ತಿಕ್ ಆರ್ಯನ್‌ರನ್ನೇ ಗಮನದಲ್ಲಿಟ್ಟುಕೊಂಡು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವರ್ಷಗಟ್ಟಲೇ ಈ ಸಿನಿಮಾಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಇನ್ನು, 20 ದಿನಗಳ ಕಾಲ ಕಾರ್ತಿಕ್ ಆರ್ಯನ್ ಶೂಟಿಂಗ್‌ನಲ್ಲೂ ಭಾಗವಹಿಸಿದ್ದರು. ಇದೀಗ ಅವರನ್ನು ಸಿನಿಮಾದಿಂದ ಹೊರಹಾಕಿದ ಮೇಲೆ, ಅವರ ಜಾಗಕ್ಕೆ ಬೇರೊಬ್ಬ ನಟನನ್ನ ಆಯ್ಕೆ ಮಾಡಬೇಕಾಗುತ್ತದೆ. ಜೊತೆಗೆ 20 ದಿನಗಳ ಕಾಲ ಶೂಟಿಂಗ್ ಮಾಡಿದ್ದನ್ನು ರದ್ದು ಮಾಡಿ, ಮತ್ತೊಮ್ಮೆ ರೀ-ಶೂಟ್ ಮಾಡಬೇಕಾಗುತ್ತದೆ. ಇದೆಲ್ಲದರಿಂದ ಧರ್ಮ ಪ್ರೊಡಕ್ಷನ್ಸ್‌ಗೆ ಸುಮಾರು 20 ಕೋಟಿ ರೂ.ಗಳಷ್ಟು ಹಣ ನಷ್ಟವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ!

20 ದಿನ ಶೂಟಿಂಗ್ ಆದ್ಮೇಲೆ ಉದಯೋನ್ಮುಖ ನಟನನ್ನು ಸಿನಿಮಾದಿಂದಲೇ ಕಿತ್ತು ಹಾಕಿದ ಕರಣ್ ಜೋಹರ್‌!

ಕಾರ್ತಿಕ್‌ರನ್ನು ಕಿತ್ತುಹಾಕಲು ಕಾರಣವೇನು?
ಇದಕ್ಕೆ ಡೇಟ್ಸ್ ಸಮಸ್ಯೆಯೇ ಕಾರಣ ಎನ್ನಲಾಗಿತ್ತು. ನಂತರ ಕಾರ್ತಿಕ್ ಶೂಟಿಂಗ್‌ಗೆ ಸರಿಯಾಗಿ ಬರುತ್ತಿರಲಿಲ್ಲ, ಕಥೆ ವಿಚಾರಕ್ಕೂ ಅವರ ಕಡೆಯಿಂದ ಕಿರಿಕ್‌ ಶುರುವಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಹಾಗಾಗಿ, ಅವರನ್ನು ಸಿನಿಮಾದಿಂದ ಹೊರಹಾಕಲಾಯ್ತು ಎಂಬ ಮಾತಿದೆ. ಇನ್ನು, ಧರ್ಮ ಪ್ರೊಡಕ್ಷನ್ಸ್‌ನ ಈ ನಿರ್ಧಾರದ ಬಗ್ಗೆ ಕಂಗನಾ ರಣಾವತ್‌ ಕಿಡಿಕಾರಿದ್ದಾರೆ. 'ಕಾರ್ತಿಕ್ ಇದುವರೆಗೂ ಸ್ವಂತವಾಗಿ ಬೆಳೆದುಬಂದಿದ್ದಾರೆ. ಅದೇ ರೀತಿ ಅವರು ಮುಂದುವರಿಯಲಿದ್ದಾರೆ ಕೂಡ! ಕರಣ್ ಜೋಹರ್ ಮತ್ತು ಆತನ ನೆಪೋಟಿಸಂ ಗ್ಯಾಂಗ್ಗೆ ನನ್ನದು ಒಂದು ಮನವಿ ಇದೆ. ಅದೇನೆಂದರೆ, ದಯವಿಟ್ಟು ಕಾರ್ತಿತ್‌ರನ್ನು ಬಿಟ್ಟುಬಿಡಿ. ಸುಶಾಂತ್ ಸಿಂಗ್ ರೀತಿಯೇ ಇವರ ಬೆನ್ನುಹತ್ತಬೇಡಿ. ಕೊನೆಗೆ ನೇಣು ಹಾಕಿಕೊಳ್ಳುವಂತೆ ಒತ್ತಾಯ ಮಾಡಬೇಡಿ..' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸುಶಾಂತ್ ಸಾವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರಾ ಕಂಗನಾ? 'ತಲೈವಿ' ಮೇಲೆ ನೆಟ್ಟಿಗರು ಗರಂ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌