ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಕೇಸರಿ ಚಿತ್ರ ಬಾಕ್ಸ್ ಆಫೀಸಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಗುರುವಾರ ಬಿಡುಗಡೆಯಾದ ಈ ಸಿನಿಮಾ ಮೊದಲ ದಿನವೇ ಭಾರತದಲ್ಲಿ ಸುಮಾರು ₹ 22 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಿನಿಮಾ ವಿಶ್ಲೇಷಕರು ತಿಳಿಸಿದ್ದಾರೆ.
2019ರ ಬಿಗ್ಗೆಸ್ಟ್ ಬಾಕ್ಸ್ ಆಫೀಸ್ ಓಪನರ್ ಆಗಿ ಹೊರಹೊಮ್ಮಿರುವ ಮೊದಲ ಬಾಲಿವುಡ್ ಸಿನಿಮಾ ಇದು ಎಂಬ ವಿಶೇಷಣಕ್ಕೆ ಪಾತ್ರವಾಗಿದೆ. ದೇಶದಲ್ಲೇ ಅತಿ ದೊಡ್ಡ ನಿರ್ಮಾಣ ಸಂಸ್ಥೆಯಾದ ಧರ್ಮ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಿಸಿದೆ. ಬಿಡುಗಡೆಯಾದ ಮೊದಲ ದಿನವೇ ಇಷ್ಟೆಲ್ಲಾ ಕೋಟಿ ಕಲೆಕ್ಷನ್ ಮಾಡಿದ ಧರ್ಮ ಪ್ರೊಡಕ್ಷನ್ ಸಿನಿಮಾ ಸಹ ಇದಾಗಿರುವುದು ಇನ್ನೊಂದು ವಿಶೇಷ.
1897ರಲ್ಲಿ ನಡೆದ ಸಾರಾಗಡಿ ಯುದ್ಧದ ಹಿನ್ನೆಲೆಯಲ್ಲಿ ತೆರೆಗೆ ತಂದಿರುವ ಸಿನಿಮಾ ಇದು. ಇದರಲ್ಲಿ ಅಕ್ಷಯ್ ಕುಮಾರ್, ಹವಾಲ್ದಾರ್ ಇಷಾರ್ ಸಿಂಗ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಒನ್ ಮ್ಯಾನ್ ಆರ್ಮಿಯಾಗಿ ನಿಂತಿದ್ದಾರೆ. ಅಕ್ಷಯ್ಗೆ ಜೋಡಿಯಾಗಿ ಪರಿಣೀತಿ ಚೋಪ್ರಾ ನಟಿಸಿದ್ದಾರೆ. ಅನುರಾಗ್ ಸಿಂಗ್ ತೆರೆಗೆ ಗಂದ ಕೇಸರಿ ಸಿನಿಮಾವನ್ನು ಅಭಿಮಾನಿಗಳಿಗಷ್ಟೇ ಅಲ್ಲ ಸಿನಿಮಾ ಪ್ರಮುಖರಿಗೂ ಇಷ್ಟವಾಗಿದೆ.
ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರಂತೂ ಸಿನಿಮಾಗೆ ನಾಲ್ಕು ಸ್ಟಾರ್ ರೇಟಿಂಗ್ ನೀಡಿದ್ದಾರೆ. ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ತರಣ್ ಆದರ್ಶ್ ಟ್ವೀಟ್ಗಳು ಯಾವುದೇ ಪೂರ್ವಾಗ್ರಹ ಪೀಡಿತ ಅಲ್ಲದೆ ಸತ್ಯಕ್ಕೆ ತುಂಬಾ ಹತ್ತಿರವಾಗಿರುತ್ತವೆ ಎಂಬ ಅಭಿಪ್ರಾಯವೂ ಇದೆ. 'ಗೋಲ್ಡ್' (₹ 25 ಕೋಟಿ) ಸಿನಿಮಾ ಬಳಿಕ ಎರಡನೇ ಅತಿದೊಡ್ಡ ಓಪನರ್ ಎನ್ನಿಸಿಕೊಂಡಿದೆ ಕೇಸರಿ.
2019ರ ಬಿಗ್ಗೆಸ್ಟ್ ಬಾಕ್ಸ್ ಆಫೀಸ್ ಓಪನರ್ ಆಗಿ ಹೊರಹೊಮ್ಮಿರುವ ಮೊದಲ ಬಾಲಿವುಡ್ ಸಿನಿಮಾ ಇದು ಎಂಬ ವಿಶೇಷಣಕ್ಕೆ ಪಾತ್ರವಾಗಿದೆ. ದೇಶದಲ್ಲೇ ಅತಿ ದೊಡ್ಡ ನಿರ್ಮಾಣ ಸಂಸ್ಥೆಯಾದ ಧರ್ಮ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಿಸಿದೆ. ಬಿಡುಗಡೆಯಾದ ಮೊದಲ ದಿನವೇ ಇಷ್ಟೆಲ್ಲಾ ಕೋಟಿ ಕಲೆಕ್ಷನ್ ಮಾಡಿದ ಧರ್ಮ ಪ್ರೊಡಕ್ಷನ್ ಸಿನಿಮಾ ಸಹ ಇದಾಗಿರುವುದು ಇನ್ನೊಂದು ವಿಶೇಷ.
1897ರಲ್ಲಿ ನಡೆದ ಸಾರಾಗಡಿ ಯುದ್ಧದ ಹಿನ್ನೆಲೆಯಲ್ಲಿ ತೆರೆಗೆ ತಂದಿರುವ ಸಿನಿಮಾ ಇದು. ಇದರಲ್ಲಿ ಅಕ್ಷಯ್ ಕುಮಾರ್, ಹವಾಲ್ದಾರ್ ಇಷಾರ್ ಸಿಂಗ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಒನ್ ಮ್ಯಾನ್ ಆರ್ಮಿಯಾಗಿ ನಿಂತಿದ್ದಾರೆ. ಅಕ್ಷಯ್ಗೆ ಜೋಡಿಯಾಗಿ ಪರಿಣೀತಿ ಚೋಪ್ರಾ ನಟಿಸಿದ್ದಾರೆ. ಅನುರಾಗ್ ಸಿಂಗ್ ತೆರೆಗೆ ಗಂದ ಕೇಸರಿ ಸಿನಿಮಾವನ್ನು ಅಭಿಮಾನಿಗಳಿಗಷ್ಟೇ ಅಲ್ಲ ಸಿನಿಮಾ ಪ್ರಮುಖರಿಗೂ ಇಷ್ಟವಾಗಿದೆ.
ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರಂತೂ ಸಿನಿಮಾಗೆ ನಾಲ್ಕು ಸ್ಟಾರ್ ರೇಟಿಂಗ್ ನೀಡಿದ್ದಾರೆ. ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ತರಣ್ ಆದರ್ಶ್ ಟ್ವೀಟ್ಗಳು ಯಾವುದೇ ಪೂರ್ವಾಗ್ರಹ ಪೀಡಿತ ಅಲ್ಲದೆ ಸತ್ಯಕ್ಕೆ ತುಂಬಾ ಹತ್ತಿರವಾಗಿರುತ್ತವೆ ಎಂಬ ಅಭಿಪ್ರಾಯವೂ ಇದೆ. 'ಗೋಲ್ಡ್' (₹ 25 ಕೋಟಿ) ಸಿನಿಮಾ ಬಳಿಕ ಎರಡನೇ ಅತಿದೊಡ್ಡ ಓಪನರ್ ಎನ್ನಿಸಿಕೊಂಡಿದೆ ಕೇಸರಿ.