ಆ್ಯಪ್ನಗರ

3ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಂಜಯ್‌ ದತ್‌ಗೆ ಧೈರ್ಯ ತುಂಬಿದ ಯುವರಾಜ್‌ ಸಿಂಗ್‌!

ಬಾಲಿವುಡ್‌ ನಟ ಸಂಜಯ್‌ ದತ್‌ ಅವರ ಅನಾರೋಗ್ಯದ ಮಾಹಿತಿ ತಿಳಿಯುತ್ತಿದ್ದಂತೆಯೇ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಧೈರ್ಯ ತುಂಬುವ ಮಾತುಗಳನ್ನು ಆಡಿದ್ದಾರೆ. ಅವರಿಗೂ ಕ್ಯಾನ್ಸರ್‌ನ ನೋವು ಏನೆಂಬುದು ಚೆನ್ನಾಗಿ ತಿಳಿದಿದೆ.

Vijaya Karnataka Web 12 Aug 2020, 9:00 am
ಖ್ಯಾತ ನಟ ಸಂಜಯ್‌ ದತ್‌ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಅವರ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಮಂಗಳವಾರ (ಆ.11) ರಾತ್ರಿ ಈ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಎಲ್ಲರೂ ಸೋಶಿಯಲ್‌ ಮೀಡಿಯಾ ಮೂಲಕ ಸಂಜಯ್‌ ದತ್‌ಗೆ ಧೈರ್ಯ ತುಂಬುತ್ತಿದ್ದಾರೆ.
Vijaya Karnataka Web kgf chapter 2 actor sanjay dutt diagnosed with lung cancer yuvraj singh prays for speedy recovery
3ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಂಜಯ್‌ ದತ್‌ಗೆ ಧೈರ್ಯ ತುಂಬಿದ ಯುವರಾಜ್‌ ಸಿಂಗ್‌!


ಸಂಜಯ್‌ ದತ್‌ ಅವರನ್ನು ಕಂಡರೆ ಕ್ರೀಡಾಪಟುಗಳಿಗೂ ಸಖತ್‌ ಅಭಿಮಾನ. ಅದಕ್ಕೆ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಬೆಸ್ಟ್‌ ಉದಾಹರಣೆ. ಸಂಜು ಬಾಬಾಗೆ ಕ್ಯಾನ್ಸರ್‌ ಎಂಬುದು ಗೊತ್ತಾಗುತ್ತಿದ್ದಂತೆಯೇ ಟ್ವಿಟರ್‌ ಮೂಲಕ ಯುವರಾಜ್‌ ಸಿಂಗ್ ಧೈರ್ಯ ತುಂಬಿದ್ದಾರೆ. 'ಸಂಜಯ್‌ ದತ್‌ ಅವರೇ.. ನೀವು ಎಂದೆಂದಿಗೂ ಫೈಟರ್‌. ಕ್ಯಾನ್ಸರ್‌ನ ನೋವು ಏನು ಎಂಬುದು ನನಗೂ ತಿಳಿದಿದೆ. ಆದರೆ ನೀವು ಅದನ್ನು ಎದುರಿಸುವಷ್ಟು ಸ್ಟ್ರಾಂಗ್‌ ಆಗಿದ್ದೀರಿ. ನೀವು ಬೇಗ ಗುಣಮುಖರಾಗಲಿ ಅಂತ ಪ್ರಾರ್ಥಿಸುತ್ತೇನೆ' ಎಂದು ಯುವರಾಜ್‌ ಸಿಂಗ್‌ ಬರೆದುಕೊಂಡಿದ್ದಾರೆ.

2011ರಲ್ಲಿ ಯುವರಾಜ್‌ ಸಿಂಗ್‌ ಕೂಡ ಕ್ಯಾನ್ಸರ್‌ಗೆ ಒಳಗಾಗಿದ್ದರು. ಅವರಿಗೂ ಕೂಡ ಶ್ವಾಸಕೋಶದ ಕ್ಯಾನ್ಸರ್‌ ಆಗಿತ್ತು. ಆದರೆ ಮೊದಲ ಹಂತದಲ್ಲೇ ಕಾಯಿಲೆ ಪತ್ತೆ ಆಗಿದ್ದರಿಂದ ಗುಣಮುಖರಾಗಲು ಸಾಧ್ಯವಾಯಿತು. ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ಅವರು ಕಿಮೋಥೆರಪಿ ಪಡೆದುಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಕ್ಯಾನ್ಸರ್‌ ಕಾಟ ಶುರುವಾಗಿದ್ದಕ್ಕೆ ಅಭಿಮಾನಿಗಳು ನೊಂದುಕೊಂಡಿದ್ದರು. ಕೊನೆಗೂ ಅವರು ಗುಣಮುಖರಾಗಿ ಮತ್ತೆ ಕ್ರಿಕೆಟ್‌ ಮೈದಾನದಲ್ಲಿ ಬ್ಯಾಟ್‌ ಬೀಸಿದರು.

also read: 'ಕೆಜಿಎಫ್‌ 2' ಸಿನಿಮಾದ ಅಧೀರ ಪಾತ್ರಧಾರಿ ಬಾಲಿವುಡ್ ನಟ ಸಂಜಯ್ ದತ್‌ಗೆ ಕ್ಯಾನ್ಸರ್!

ಸಂಜಯ್‌ ದತ್‌ ಅವರ ಕ್ಯಾನ್ಸರ್‌ ಮೂರನೇ ಸ್ಟೇಜ್‌ನಲ್ಲಿ ಇದ್ದರೂ ಕೂಡ ಅವರು ಗುಣಮುಖರಾಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಲಾಗುತ್ತಿದೆ. ಅವರು ಬೇಗ ಈ ಕಾಯಿಲೆಯನ್ನು ಗೆದ್ದು ಬರಲಿ ಎಂದು ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ಕನ್ನಡದಲ್ಲಿ ಯಶ್‌ ನಾಯಕತ್ವದ 'ಕೆಜಿಎಫ್ ಚಾಪ್ಟರ್‌ 2' ಸಿನಿಮಾದಲ್ಲಿ ಸಂಜಯ್‌ ದತ್ ಅವರು ಅಧೀರ ಎಂಬ ಪಾತ್ರ ಮಾಡುತ್ತಿದ್ದು, ಅದರ ಪೋಸ್ಟರ್‌ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ.

also read: ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ ನಟ ಸಂಜಯ್‌ ದತ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌