ಆ್ಯಪ್ನಗರ

ಅಜಯ್ ದೇವಗನ್ ಜೊತೆ ರೊಮಾನ್ಸ್ ಮಾಡಲಿರುವ ಕೀರ್ತಿ ಸುರೇಶ್

ಬಧಾಯಿ ಹೋ ಚಿತ್ರವನ್ನು ನಿರ್ದೇಶಿಸಿ ಯಶಸ್ಸು ಕಂಡಿರುವ ನಿರ್ದೇಶಕ ಅಮಿತ್ ಶರ್ಮಾರ ಹೊಸ ಚಿತ್ರವು ಫುಟ್ಬಾಲ್​ ಆಟಗಾರನ ಬಯೋಪಿಕ್ ಆಗಿರಲಿದ್ದು, ಈ ಚಿತ್ರವನ್ನು ಭಾರೀ ವೆಚ್ಚ ಹಾಗೂ ಅದ್ದೂರಿ ಮೇಕಿಂಗ್ ಮೂಲಕ ತೆರೆಗೆ ತರಲು ನಿರ್ಧರಿಸಲಾಗಿದೆ.

Vijaya Karnataka Web 15 Mar 2019, 9:15 pm
ಮಹಾನಟಿ ಚಿತ್ರದ ಖ್ಯಾತಿಯ ನಟಿ ಕೀರ್ತಿ ಸುರೇಶ್ ಅವರು ಬಾಲಿವುಡ್‌ಗೆ ಬಲಗಾಲಿಟ್ಟು ಪ್ರವೇಶ ಪಡೆದಿದ್ದಾರೆ. ನಟ ಅಜಯ್ ದೇವಗನ್ ಜೊತೆ ನಟಿಸುವ ಅವಕಾಶ ಕೀರ್ತಿ ಸುರೇಶ್ ಅವರಿಗೆ ಸಿಕ್ಕಿದೆ. ಈಗಾಗಲೇ ಮಹಾನಟಿ ಕೀರ್ತಿ ಅವರು ಸೌತ್ ಇಂಡಿಯಾದಿಂದ ಬಾಲಿವುಡ್‌ಗೆ ಹಾರಲಿರುವುದು ಪಕ್ಕಾ ಎನ್ನಲಾಗಿತ್ತು. ಆದರೆ, ಯಾವ ಚಿತ್ರ, ಯಾರ ಜೋಡಿಯಾಗಿ ನಟನೆ ಎಂಬುದು ಪಕ್ಕಾ ಆಗಿರಲಿಲ್ಲ.
Vijaya Karnataka Web mahanati1503


ಇದೀಗ ಬಂದ ಸುದ್ದಿಯ ಪ್ರಕಾರ, ನಟಿ ಕೀರ್ತಿ ಸುರೇಶ್ ಅವರು ಅಜಯ್ ದೇವಗನ್ ನಾಯಕತ್ವದ ಮುಂಬರುವ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವು ಸೈಯದ್ ಅಬ್ದುಲ್ ರಹೀಂ ಎನ್ನುವ ಫುಟ್ಬಾಲ್ ಆಟಗಾರನ ಬಯೋಪಿಕ್ ಆಗಿರಲಿದ್ದು, ಚಿತ್ರದಲ್ಲಿ ನಟ ಅಜಯ್ ದೇವಗನ್ ಅವರು ನಾಯಕರಾಗಿ ನಟಿಸಲಿದ್ದಾರೆ. ಚಿತ್ರದ ನಾಯಕಿ ಪಾತ್ರಕ್ಕೆ ನಟಿ ಕೀರ್ತಿ ಸುರೇಶ್ ಅವರಿಗೆ ಆಫರ್ ನೀಡಲಾಗಿದೆಯಂತೆ. ಸಿಕ್ಕ ಮಾಹಿತಿ ಪ್ರಕಾರ, ನಟಿ ಕೀರ್ತಿ ಸುರೇಶ್ ಅವರು ತಮಗೆ ಬಂದ ಈ ಬಾಲಿವುಡ್ ಅವಕಾಶವನ್ನು ಖುಷಿಯಿಂದ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಬಧಾಯಿ ಹೋ ಚಿತ್ರವನ್ನು ನಿರ್ದೇಶಿಸಿ ಯಶಸ್ಸು ಕಂಡಿರುವ ನಿರ್ದೇಶಕ ಅಮಿತ್ ಶರ್ಮಾರ ಹೊಸ ಚಿತ್ರವು ಫುಟ್ಬಾಲ್ ಆಟಗಾರನ ಬಯೋಪಿಕ್ ಆಗಿರಲಿದ್ದು, ಈ ಚಿತ್ರವನ್ನು ಭಾರೀ ವೆಚ್ಚ ಹಾಗೂ ಅದ್ದೂರಿ ಮೇಕಿಂಗ್ ಮೂಲಕ ತೆರೆಗೆ ತರಲು ನಿರ್ಧರಿಸಲಾಗಿದೆ. ಈ ಚಿತ್ರದ ಮೂಲಕ ಬಾಲಿವುಡ್‌ನಲ್ಲಿನ ಬಯೋಪಿಕ್ ಪರಂಪರೆ ಮುಂದುವರಿಯಲಿದೆ. ಇತ್ತೀಚಿಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಕೂಡ ತೆರೆಗೆ ಬರಲಿದೆ ಎಂಬ ಸುದ್ದಿ ಬಂದಿದೆ. ಇತ್ತೀಚಿಗೆ ಬಾಲಿವುಡ್‌ನಲ್ಲಿ ಬಯೋಪಿಕ್‌ ಚಿತ್ರಗಳ ಟ್ರೆಂಡ್ ಜೋರಾಗಿದೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌