ಆ್ಯಪ್ನಗರ

ಸಂಕ್ರಾಂತಿಗೆ ಮಹೇಶ್‌ಬಾಬು-ರಶ್ಮಿಕಾ ಮಂದಣ್ಣ ಜೋಡಿ ಸಿನಿಮಾ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಸರಿಲೇರು ನೀಕೆವ್ವರು ಸಿನಿಮಾ ಸಂಕ್ರಾಂತಿಗೆ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಸದ್ಯದಲ್ಲೇ ಶೂಟಿಂಗ್ ಕಂಪ್ಲೀಟ್ ಮಾಡುವುದಾಗಿ ನಿರ್ದೇಶಕ ಅನಿಲ್ ರಾವಿಪುಡಿ ಹೇಳಿದ್ದಾರೆ.

Vijaya Karnataka 5 Aug 2019, 5:51 pm
ಮಹೇಶ್‌ಬಾಬು ಮತ್ತು ರಶ್ಮಿಕಾ ಮಂದಣ್ಣ ನಟನೆಯ ಸರಿಲೇರು ನಿಕೇವರು ಸಿನಿಮಾ ಸಂಕ್ರಾಂತಿಗೆ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಅನಿಲ್‌ ರಾವಿಪುಡಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಈಗಾಗಲೇ ಎರಡನೇ ಶೆಡ್ಯೂಲ್‌ ಆರಂಭವಾಗಿದ್ದು ಸದ್ಯದಲ್ಲೇ ಚಿತ್ರೀಕರಣವನ್ನು ಕಂಪ್ಲೀಟ್‌ ಮಾಡಲಿದ್ದಾರಂತೆ ನಿರ್ದೇಶಕರು.
Vijaya Karnataka Web rashmika


ಈ ಸಿನಿಮಾದಲ್ಲಿ ಮಹೇಶ್‌ಬಾಬು ಸೈನ್ಯಾಧಿಕಾರಿಯ ಪಾತ್ರದಲ್ಲಿನಟಿಸುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕರು ಈ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿಶೇರ್‌ ಮಾಡಿದ್ದ ಪೋಸ್ಟ್‌ನಿಂದ ಗೊತ್ತಾಗಿದೆ. [ಮಹೇಶ್ ಬಾಬು ಜತೆ ರೊಮ್ಯಾನ್ಸ್‌ಗೆ ರೆಡಿಯಾದ ರಶ್ಮಿಕಾ ಮಂದಣ್ಣ]

ಸಂಕ್ರಾಂತಿ ಅಲ್ಲುಅರ್ಜುನ್‌ ಮತ್ತು ತ್ರಿವಿಕ್ರಮ್‌ ಅವರ ಸಿನಿಮಾ ಸಹ ಬಿಡುಗಡೆಯಾಗುತ್ತದೆ ಎಂಬ ಸುದ್ದಿಗಳು ಓಡಾಡುತ್ತಿದೆ. ಹಾಗೇನಾದ್ರು ಆದರೆ ಸೂಪರ್‌ ಸ್ಟಾರ ಮಹೇಶ್‌ಬಾಬು ಮತ್ತು ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್‌ ನಡುವೆ ಬಾಕ್ಸ್‌ ಆಫೀಸ್‌ ವಾರ್‌ ನಡೆಯಲಿದೆ.

'ಸರಿಲೇರು ನೀಕೆವ್ವರು' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್ ಎಂಬ ಸುದ್ದಿ ಮೊದಲೇ ಲೀಕ್ ಆಗಿತ್ತು. ಮಹೇಶ್ ಬಾಬು ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ಎಗ್ಜೈಟ್ ಆಗಿದ್ದೇನೆ. ಸಿನಿಮಾ ನಿಮ್ಮೆಲ್ಲರಿಗೂ ಇಷ್ಟವಾಗುತ್ತದೆ ಎಂಬ ಆಶಾಭಾವನೆಯಲ್ಲಿದ್ದೇನೆ ಎಂದಿದ್ದಾರೆ ರಶ್ಮಿಕಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌