ಆ್ಯಪ್ನಗರ

ಮೆಗಾ ಸ್ಟಾರ್ ಚಿರಂಜೀವಿ 152ನೇ ಸಿನಿಮಾ ಹೆಸರು 'ಗೋವಿಂದ ಹರಿ ಗೋವಿಂದ'?

ಮೆಗಾ ಸ್ಟಾರ್ ಚಿರಂಜೀವಿ ತಮ್ಮ ಮುಂದಿನ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಈ ಚಿತ್ರವನ್ನು ಭರತ್ ಅನೇ ನೇನು ಸಿನಿಮಾ ನಿರ್ದೇಶಿಸಿರುವ ಕೊರಟಾಲ ಶಿವ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಗೋವಿಂದ ಹರಿ ಗೋವಿಂದ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ ಎಂದಿವೆ ಮೂಲಗಳು.

Vijaya Karnataka 16 Nov 2019, 3:43 pm
ಇತ್ತೀಚೆಗೆ ಬಂದ ಸೈರಾ ನರಸಿಂಹ ರೆಡ್ಡಿ ಚಿತ್ರದ ನಂತರ ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ ಇದೀಗ ತಮ್ಮ 152ನೇ ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ಭರತ್‌ ಅನೇ ನೇನು ಸೇರಿ ಹಲವಾರು ಹಿಟ್‌ ಚಿತ್ರಗಳನ್ನು ಕೊಟ್ಟಿದ್ದ ಕೊರಟಾಲ ಶಿವ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
Vijaya Karnataka Web ಚಿರಂಜೀವಿ


ಸಾಮಾಜಿಕ ಅಂಶಗಳನ್ನೇ ಕಥೆಯಾಗಿಸಿಕೊಂಡು ಚಿತ್ರಕಥೆ ಬರೆದಿರುವುದಾಗಿ ಹೇಳಿರುವ ಶಿವ, ಕಥೆಯ ಎಳೆಯನ್ನು ರಿವೀಲ್‌ ಮಾಡಲು ನಿರಾಕರಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ನಟಿಸಲು ತುಂಬಾ ಕಾತುರದಿಂದ ಇರುವುದಾಗಿ ಚಿರು ಈಗಾಗಲೇ ಹೇಳಿದ್ದಾರೆ.

ಅಲ್ಲು ಅರ್ಜುನ್ ಮೇಲೆ ಕೋಪಗೊಂಡ 'ಮೆಗಾ ಸ್ಟಾರ್'

ಇನ್ನೊಂದೆಡೆ ಚಿತ್ರಕ್ಕೆ ಎಂಥ ಹೆಸರು ಇಡಬೇಕು ಎಂಬ ಬಗ್ಗೆಯೂ ಚಿತ್ರತಂಡ ತಲೆಕೆಡಿಸಿಕೊಳ್ಳುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 'ಗೋವಿಂದ ಹರಿ ಗೋವಿಂದ' ಎಂಬ ಟೈಟಲ್‌ ಅನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಈ ನಡುವೆ ಕಥೆಯ ಒಂದು ಲೈನ್‌ ಲೀಕ್‌ ಆಗಿದೆ ಎಂಬ ಮಾತಿದೆ. ದೇವಾಲಯವೊಂದರ ನೇಪಥ್ಯದಲ್ಲಿಕಥೆ ಸಾಗಲಿದ್ದು, ದೇವಾಲಯಗಳಲ್ಲಿನಡೆಯುವ ಅಕ್ರಮಗಳ ಬಗ್ಗೆ ಸಿನಿಮಾ ಇರುತ್ತದೆ ಎಂದು ಹೇಳಲಾಗಿದೆ.

ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ

ಇನ್ನು ಸೈ ರಾ ನರಸಿಂಹ ರೆಡ್ಡಿ ಸಿನಿಮಾ ಬಗ್ಗೆ ಹೇಳಬೇಕು ಎಂದರೆ ಈ ಸಿನಿಮಾವನ್ನು ಸುಮಾರು ₹ 270ರಿಂದ 300 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು ಬಾಕ್ಸ್ ಆಫೀಸ್‌ನಲ್ಲಿ ಅಂದಾಜು ₹ 230 ಕೋಟಿ ಗಳಿಕೆ ಮಾಡಿದೆ.

ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಸ್ಫೂರ್ತಿದಾಯಕ ಕಥೆಯನ್ನು ರಾಣಿ ಲಕ್ಷ್ಮೀಬಾಯಿ ಹೇಳುತ್ತ 'ಸೈರಾ ನರಸಿಂಹ ರೆಡ್ಡಿ' ಚಿತ್ರ ಆರಂಭವಾಗುತ್ತದೆ. ಮೇಕಿಂಗ್‌ನಿಂದಲೇ ಈ ಚಿತ್ರ ಸಾಕಷ್ಟು ಸುದ್ದಿ ಮಾಡಿತ್ತು. ತೆಲುಗು, ಹಿಂದಿ, ಕನ್ನಡ, ಮಲಯಾಳಂ, ತಮಿಳಿನಲ್ಲಿ ಈ ಚಿತ್ರ ಬಿಡುಗಡೆಯಾಗಿದೆ.

ಕರ್ನಾಟಕದಲ್ಲಿ ಕನ್ನಡ ವರ್ಷನ್ 'ಸೈ ರಾ..'ಗೆ ಶೋಗಳೇ ಇಲ್ಲ?!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌