ಆ್ಯಪ್ನಗರ

'ಪದ್ಮಾವತಿ'ಗೆ ಬೆಂಬಲ ಸೂಚಿಸಿದ ವಿಶ್ವಸುಂದರಿ ಮಾನುಷಿ

'ಪದ್ಮಾವತಿ ' ಚಿತ್ರದ ವಿವಾದ ಇನ್ನೂ ತಣ್ಣಗಾಗಿಲ್ಲ. ಪದ್ಮಾವತಿ ಪಾತ್ರ ಪೋಷಿಸಿರುವ ದೀಪಿಕಾ ಪಡುಕೋಣೆ ತಲೆಕಡಿಯುತ್ತೇವೆ ಎಂಬ ಬೆದರಿಕೆಗಳ ಹಿನ್ನೆಲೆಯಲ್ಲಿ ಬಾಲಿವುಡ್ ಚಿತ್ರೋದ್ಯಮ ಸೇರಿದಂತೆ ರಾಜಕೀಯ ವಲಯದಲ್ಲೂ ಭಾರಿ ಚರ್ಚೆ ನಡೆಯುತ್ತಿದೆ.

Times Now 29 Nov 2017, 1:13 pm
'ಪದ್ಮಾವತಿ ' ಚಿತ್ರದ ವಿವಾದ ಇನ್ನೂ ತಣ್ಣಗಾಗಿಲ್ಲ. ಪದ್ಮಾವತಿ ಪಾತ್ರ ಪೋಷಿಸಿರುವ ದೀಪಿಕಾ ಪಡುಕೋಣೆ ತಲೆಕಡಿಯುತ್ತೇವೆ ಎಂಬ ಬೆದರಿಕೆಗಳ ಹಿನ್ನೆಲೆಯಲ್ಲಿ ಬಾಲಿವುಡ್ ಚಿತ್ರೋದ್ಯಮ ಸೇರಿದಂತೆ ರಾಜಕೀಯ ವಲಯದಲ್ಲೂ ಭಾರಿ ಚರ್ಚೆ ನಡೆಯುತ್ತಿದೆ.
Vijaya Karnataka Web miss world 2017 manushi chhillar gives a shout out to deepika padukone for her bravery
'ಪದ್ಮಾವತಿ'ಗೆ ಬೆಂಬಲ ಸೂಚಿಸಿದ ವಿಶ್ವಸುಂದರಿ ಮಾನುಷಿ


ಈಗಾಗಲೆ ಹಲವು ಸಿನಿಮಾ ಹಾಗೂ ರಾಜಕೀಯ ಗಣ್ಯರು ದೀಪಿಕಾ ಪಡುಕೋಣೆ ವಿರುದ್ಧ ನೀಡಿರುವ ಹೇಳಿಕೆಗಳನ್ನು ಖಂಡಿಸಿದ್ದಾರೆ. ಇದೀಗ ವಿಶ್ವಸುಂದರಿ ಮಾನುಷಿ ಚಿಲ್ಲರ್ ಸಹ ಪದ್ಮಾವತಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಮಾಧ್ಯಮಗಳ ಜತೆಗೆ ಮಾತನಾಡುತ್ತಿದ್ದ ಅವರು 'ಮಹಿಳೆಯರು ಯಾವುದೇ ಸಮಸ್ಯೆ ಇದ್ದರೂ ಧೈರ್ಯವಾಗಿ ಎದುರಿಸಬೇಕು' ಎಂದಿದ್ದಾರೆ.

ದೀಪಿಕಾ ಪಡುಕೋಣೆ ವಿರುದ್ಧದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಾನುಷಿ, 'ಇಂತಹ ಪರಿಸ್ಥಿತಿಗಳು ಎದುರಾದಾಗ ಸಮಾಜ ಮಹಿಳೆಯರನ್ನು ಕೀಳಾಗಿ ಕಾಣುತ್ತದೆ. ಈ ಸಮಾಜ ಇಷ್ಟೆ ಎಂದು ಧೃತಿಗೆಡದೆ ಇನ್ನಷ್ಟು ಆತ್ಮವಿಶ್ವಾಸದಿಂದ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲಬೇಕು' ಎಂದಿದ್ದಾರೆ ಮಾನುಷಿ.

ಡಿಸೆಂಬರ್ 1ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಅನಿರ್ದಿಷ್ಟ ಕಾಲವಧಿಗೆ ಮುಂದೂಡಿದೆ. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರಿಗೂ ಜೀವ ಬೆದರಿಕೆ ಒಡ್ಡಲಾಗಿದೆ. ಭಾರತದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣ ಪತ್ರ ನೀಡುವ ತನಕ ವಿದೇಶಗಳಲ್ಲೂ ತಮ್ಮ ಚಿತ್ರವನ್ನು ಬಿಡುಗಡೆ ಮಾಡಲ್ಲ ಎಂದು ಭನ್ಸಾಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌