ನಾನು ಓರ್ವ ನಟ, ನಟಿಸುವುದು ನನ್ನ ಕೆಲಸ, ಅದು ಯಾವ ಪಾತ್ರವೇ ಆಗಿರಲಿ ಅದನ್ನು ಚೆನ್ನಾಗಿ ಅಭಿನಯಿಸುವುದೇ ನನ್ನ ಗುರಿ ಎಂದು ನಟ ನವಾಜುದ್ದೀನ್ ಸಿದ್ದಿಕಿ ಸ್ಪಷ್ಟಪಡಿಸಿದ್ದಾರೆ. ಶಿವಸೇನೆಯ ಸ್ಥಾಪಕ ದಿವಂಗತ ಬಾಳ್ ಠಾಕ್ರೆ ಬಯೋಪಿಕ್ನಲ್ಲಿ ಸಿದ್ದಿಕ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಈ ವಿರುದ್ಧ ಅವರಿಗೆ ಸಿಕ್ಕಾಪಟ್ಟೆ ಟೀಕೆಗಳು ವ್ಯಕ್ತವಾಗಿವೆ. ಇದಕ್ಕೆ ಕಾರ್ಯಕ್ರಮವೊಂದರಲ್ಲಿ ಉತ್ತರ ನೀಡಿರುವ ಅವರು, ನಮ್ಮ ರಾಜಕೀಯ ದೃಷ್ಟಿಕೋನಗಳು ಬೇರೆಯಿರಬಹುದು, ಆದರೆ ಓರ್ವ ನಟನಾಗಿ ನಾನು ಆ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕಾದ್ದು ನನ್ನ ಮೊದಲ ಕರ್ತವ್ಯ. ಇದನ್ನೇ ನಾನು ಮಾಡುತ್ತಿದ್ದೇನೆ. ಈ ಕುರಿತ ಯಾವುದೇ ಟೀಕೆಗಳಿಗೂ ನಾನು ಹೆದರುವುದಿಲ್ಲ ಎಂದು ಸಿದ್ದಿಕಿ ಹೇಳಿದ್ದಾರೆ.
ಟೀಕೆಗಳಿಗೆ ಹಿಂಜರಿಯಲ್ಲ ಎಂದ ನವಾಜುದ್ದೀನ್
ನಾನು ಓರ್ವ ನಟ, ನಟಿಸುವುದು ನನ್ನ ಕೆಲಸ, ಅದು ಯಾವ ಪಾತ್ರವೇ ಆಗಿರಲಿ ಅದನ್ನು ಚೆನ್ನಾಗಿ ಅಭಿನಯಿಸುವುದೇ ನನ್ನ ಗುರಿ ಎಂದು ನಟ ...
Vijaya Karnataka 1 Feb 2018, 5:30 am