ಆ್ಯಪ್ನಗರ

ಚೂರುಚೂರಾಯಿತು ನಟ ನವಾಜುದ್ದೀನ್ ಸಿದ್ದಿಕಿ ದಾಂಪತ್ಯ ಬದುಕು, ವಿಚ್ಛೇದನಕ್ಕೆ ಪತ್ನಿ ಮೊರೆ

ದಾಂಪತ್ಯ ಜೀವನ ನೂರ್ಕಾಲ ನಿಲ್ಲಬೇಕಾದರೆ ಗಂಡ ಹೆಂಡತಿ ನಡುವೆ ಸಾಮರಸ್ಯ ಅಗತ್ಯ. ಅದು ಇಲ್ಲದೆ ಇದ್ದಾಗ ಸಾಂಸಾರಿಕ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಈಗ ನಟ ನವಾಜುದ್ದೀನ್ ಸಿದ್ದಿಕಿ ಬದುಕಿನಲ್ಲೂ ಅದೇ ರೀತಿ ಆಗಿದೆ. ಪತ್ನಿ ವಿಚ್ಛೇದನಕ್ಕೆ ಮೊರೆ ಹೋಗಿದ್ದಾರೆ.

Vijaya Karnataka Web 19 May 2020, 2:31 pm
ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಸಿದ್ಧಿಕಿ ಜೊತೆಗೆ ಬಾಂಬೆ ಟೈಮ್ಸ್ ನಡೆಸಿದ ಮಾತುಕತೆಯಲ್ಲಿ ಶಾಕಿಂಗ್ ಸಂಗತಿಯೊಂದು ಬಯಲಾಗಿದೆ. ಹತ್ತು ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ತೆರೆ ಬೀಳುತ್ತಿದೆ. ವಿವಾಹ ವಿಚ್ಛೇದನ ನೀಡುವಂತೆ ತನ್ನ ವಕೀಲರ ಮೂಲಕ ನವಾಜುದ್ದೀನ್ ಸಿದ್ದಿಕಿಗೆ ನೋಟಿಸ್ ರವಾನಿಸಿದ್ದಾರೆ ಆಲಿಯಾ.
Vijaya Karnataka Web nawazuddin siddiquis wife aaliya siddiqui sends legal notice to nawaz asks for divorce
ಚೂರುಚೂರಾಯಿತು ನಟ ನವಾಜುದ್ದೀನ್ ಸಿದ್ದಿಕಿ ದಾಂಪತ್ಯ ಬದುಕು, ವಿಚ್ಛೇದನಕ್ಕೆ ಪತ್ನಿ ಮೊರೆ


ಸೋಮವಾರ ಆಲಿಯಾ ಪರ ವಕೀಲರಾದ ಅಭಯ್ ಸಹಯ್ ಬಾಂಬೆ ಟೈಮ್ಸ್ ಜೊತೆಗೆ ಮಾತನಾಡಿದ್ದು, "ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಪರವಾಗಿ ಅವರಿಗೆ ಲೀಗಲ್ ನೋಟೀಸ್ ಕಳುಹಿಸಿದ್ದೇವೆ. ಅವರಿಂದ ಆಲಿಯಾ ವಿಚ್ಛೇದನ ಹಾಗೂ ಜೀವನಾಂಶವನ್ನು ಬಯಸಿದ್ದಾರೆ" ಎಂದು ತಿಳಿಸಿದ್ದಾರೆ.

ಈ ಬಗ್ಗೆ ಅವರ ವಕೀಲರು ಮಾಹಿತಿ ನೀಡಿದ್ದು, "ಅವರು ತುಂಬಾ ಕಷ್ಟ ಕೋಟಲೆಗಳನ್ನು ಅನುಭವಿಸಿದ್ದಾರೆ" ಎಂದಿದ್ದಾರೆ. ಸ್ವತಃ ಈ ಬಗ್ಗೆ ಮಾತನಾಡಿರುವ ಉದಯೋನ್ಮುಖ ನಿರ್ಮಾಪಕಿಯೂ ಆಗಿರುವ ಆಲಿಯಾ, "ಹೇಳಿಕೊಳ್ಳಲು ಆಗದಂತಹ ಹಲವಾರು ಸಂಗತಿಗಳಿವೆ. ಮುಖ್ಯವಾಗಿ ಇವೆಲ್ಲವನ್ನೂ ನಾನು ಸಾರ್ವಜನಿಕಗೊಳಿಸುವುದು ಇಷ್ಟವಿಲ್ಲ. ಹತ್ತು ವರ್ಷಗಳ ಹಿಂದೆ ಮದುವೆಯಾದ ದಿನದಿಂದಲೇ ನನಗೆ ಸಮಸ್ಯೆಗಳು ಶುರುವಾದವು" ಎಂದಿದ್ದಾರೆ.
ನವಾಜುದ್ದೀನ್‌ ಸಿದ್ದಿಕಿ ಜತೆ ರೊಮ್ಯಾನ್ಸ್‌ ಮಾಡಲಿರುವ ತಮನ್ನಾ

'ನಾನು ಅಂಜನಾ ಕಿಶೋರ್ ಪಾಂಡೆಯಾಗಲು ಬಯಸುತ್ತೇನೆ'

ಎರಡು ತಿಂಗಳ ಲಾಕ್‍ಡೌನ್ ಸಮಯ ನನ್ನನ್ನು ನಾನು ಅರಿಯಲು ತುಂಬಾ ಸಹಕಾರಿ ಆಯಿತು. ಯಾವುದೇ ದಾಂಪತ್ಯ ಜೀವನ ನಿಲ್ಲವೇಕಾದರೆ ಆತ್ಮಗೌರವ ತುಂಬಾ ಮುಖ್ಯ. ಆದರೆ ನನಗದು ಸಿಗಲಿಲ್ಲ. ಸದಾ ಏಕಾಂಗಿ ಎಂಬ ಭಾವನೆ ಬರುತ್ತಿತ್ತು. ಇವರ ಸಹೋದರ ಶಮಾಸ್‌ದು ಇನ್ನೊಂದು ಸಮಸ್ಯೆ ಇದೆ. ನಾನು ನನ್ನ ಮೂಲ ಹೆಸರು ಅಂಜನಾ ಕಿಶೋರ್ ಪಾಂಡೆಯಾಗಲು ಬಯಸುತ್ತೇನೆ. ಇನ್ನೊಬ್ಬರ ಹೆಸರನ್ನು ನನ್ನೊಂದಿಗೆ ಸೇರಿಸಿಕೊಂಡು ಬದುಕಲು ಇಷ್ಟವಿಲ್ಲ" ಎಂದಿದ್ದಾರೆ.

ಜೀವನ ಹೇಗೆ ನಡೆಸಿಕೊಂಡು ಹೋಗುತ್ತದೋ ಹಾಗೆ ನಡೆಯಬೇಕೆಂದಿದ್ದೇನೆ. ಭವಿಷ್ಯದ ಬಗ್ಗೆ ಹೆಚ್ಚಾಗಿ ಏನೂ ಯೋಚಿಸಲ್ಲ. ಆದರೆ ಈ ಮದುವೆ ಮಾತ್ರ ನನಗೆ ಸಾಕಾಗಿ ಹೋಗಿದೆ. ಇನ್ನು ಅವರ ಜೊತೆಗೆ ಬಾಳಲು ನನಗಿಷ್ಟವಿಲ್ಲ. ಮತ್ತೆ ಒಂದಾಗುವ ಯಾವ ದಾರಿಗಳೂ ಇಲ್ಲ ಎಂದಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳೂ ಇದ್ದಾರೆ. ಮಕ್ಕಳನ್ನು ತನ್ನ ಸುಪರ್ದಿಗೆ ತೆಗೆಕೊಳ್ಳುವುದಾಗಿ ತಿಳಿಸಿದ್ದಾರೆ ಆಲಿಯಾ.

ಸಿದ್ಧಿಕಿ ವಿರುದ್ಧ ಗಂಭೀರ ಹಾಗೂ ಸೂಕ್ಷ್ಮ ಆರೋಪಗಳಿವೆ

ಆಲಿಯಾ ಪರ ವಕೀಲರು ಮಾತನಾಡುತ್ತಾ, "ಮೇ 7, 2020ರಂದು ನವಾಜುದ್ದೀನ್ ಸಿದ್ದಿಕಿ ಅವರಿಗೆ ಲೀಗಲ್ ನೋಟಿಸ್‌ನ್ನು ಇ-ಮೇಲ್ ಹಾಗೂ ವಾಟ್ಸಪ್ ಮೂಲಕ ಕಳುಹಿಸಿದ್ದೇವೆ. ಲಾಕ್‍ಡೌನ್ ಕಾರಣ ಪೋಸ್ಟ್ ಮುಖಾಂತರ ಕಳುಹಿಸಲು ಸಾಧ್ಯವಾಗಲಿಲ್ಲ. ನಮ್ಮ ಕಕ್ಷಿದಾರರಾದ ಶ್ರೀಮತಿ ಸಿದ್ಧಿಕಿ ಅವರು ನೋಟಿಸ್ ಕಳುಹಿಸಿದ್ದು ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಡಿವೋರ್ಸ್ ಹಾಗೂ ಜೀವನಾಂಶ ಬಯಸಿರುವುದಾಗಿ ನೋಟಿಸ್ ನಲ್ಲಿ ತಿಳಿಸಲಾಗಿದೆ. ನೋಟಿಸ್‌ನಲ್ಲಿ ಏನೆಲ್ಲಾ ಮಾಹಿತಿ ಇದೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನೋಟಿಸ್‌ನಲ್ಲಿ ಅವರ ಕುಟುಂಬದ ಬಗ್ಗೆ ಗಂಭೀರ ಹಾಗೂ ಸೂಕ್ಷ್ಮ ಆರೋಪಗಳಿವೆ" ಎಂದಿದ್ದಾರೆ. ಈ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

ಆಲಿಯಾ ಈಗ ಒಂಟಿಯಾಗಿದ್ದು ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದಾರೆ

ಆಲಿಯಾ ಅವರು ತುಂಬಾ ನರಳಿದ್ದಾರೆ. ಇಬ್ಬರು ಮಕ್ಕಳನ್ನೂ ಇವರೇ ನೋಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಮುಂಬೈನಲ್ಲಿ ವಾಸವಾಗಿದ್ದು, ಮಕ್ಕಳನ್ನು ನೋಡಿಕೊಂಡು ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ಒಂದು ವೇಳೆ ತಂದೆಯೂ ಜೊತೆಗಿದ್ದರೆ ಆ ಸಂಸಾರಕ್ಕೆ ಆಧಾರಸ್ತಂಭದಂತೆ ಇರುತ್ತಿದ್ದರು. ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೂ ನೋಟಿಸ್ ಕಳುಹಿಸಬಹುದು. ಇದಕ್ಕೆ ಮಾನ್ಯತೆಯೂ ಇದೆ. ನೋಟಿಸ್ ಸ್ವೀಕರಿಸಿದ ಹದಿನೈದು ದಿನಗಳಲ್ಲಿ ನವಾಜುದ್ದೀನ್ ಉತ್ತರಿಸಬೇಕಾಗಿದೆ ಎಂದು ಆಲಿಯಾ ಪರ ವಕೀಲರು ತಿಳಿಸಿದ್ದಾರೆ. ಒಟ್ಟಾರೆ ಬಾಲಿವುಡ್‌ನ ಮತ್ತೊಂದು ತಾರಾ ಜೋಡಿ ಡಿವೋರ್ಸ್‌ಗೆ ಮುಂದಾಗಿದೆ.

ಈದ್‌ ಆಚರಿಸಲು ಊರೂರು ಸುತ್ತಿದ ನವಾಜುದ್ದೀನ್ ಸಿದ್ದಿಕಿ! ಇಡೀ ಕುಟುಂಬವೇ ಈಗ ಕ್ವಾರಂಟೈನ್‌ನಲ್ಲಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌