ಆ್ಯಪ್ನಗರ

ಸ್ತ್ರೀಯರು ಮನೆಯಿಂದ ಹೊರಬರುವುದೇ Me Too ಸಮಸ್ಯೆಗೆ ಕಾರಣ: 'ಶಕ್ತಿಮಾನ್‌' ನಟನ ವಿವಾದಾತ್ಮಕ ಹೇಳಿಕೆ!

'ಶಕ್ತಿಮಾನ್‌' ಧಾರಾವಾಹಿ ಖ್ಯಾತಿಯ ನಟ ಮುಕೇಶ್‌ ಖನ್ನಾ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮಹಿಳೆಯರ ಬಗ್ಗೆ ಅವರು ಆಡಿರುವ ಒಂದು ಮಾತು ನೆಟ್ಟಿಗರ ಅಸಮಾಧಾನಕ್ಕೆ ಕಾರಣ ಆಗಿದೆ. ಆ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

Vijaya Karnataka Web 31 Oct 2020, 9:46 am
ಹಿರಿಯ ನಟ ಮುಖೇಶ್‌ ಖನ್ನಾ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ. 'ಮಹಿಳೆಯರು ಮನೆಯಿಂದ ಹೊರಬಂದು ಕೆಲಸ ಮಾಡುತ್ತಿರುವುದೇ ಮೀ ಟೂ ಸಮಸ್ಯೆ ಎದುರಾಗಲು ಕಾರಣ' ಎಂದು ಅವರು ಹೇಳಿದ್ದಾರೆ. ಈ ಮಾತಿಗೆ ಎಲ್ಲರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
Vijaya Karnataka Web ಮುಕೇಶ್‌ ಖನ್ನಾ


'ಮಹಿಳೆಯರು ಮತ್ತು ಪುರುಷರ ನಡುವೆ ವ್ಯತ್ಯಾಸ ಇದೆ. ಮನೆಯನ್ನು ನೋಡಿಕೊಳ್ಳುವುದು ಮಹಿಳೆಯರ ಕೆಲಸ. ಅವರು ಮನೆಯಿಂದ ಹೊರಬಂದು ಕೆಲಸ ಮಾಡಲು ಆರಂಭಿಸಿದ್ದೇ Me Too ಸಮಸ್ಯೆಗೆ ಕಾರಣ. ಪುರುಷರಿಗೆ ಸಮನಾಗಿ ನಿಲ್ಲುವ ಬಗ್ಗೆ ಇಂದು ಮಹಿಳೆಯರು ಮಾತನಾಡುತ್ತಿದ್ದಾರೆ' ಎಂದು ಮುಕೇಶ್‌ ಹೇಳಿದ್ದು, ಅವರ ಈ ಸಂದರ್ಶನದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ.

'ಶಕ್ತಿಮಾನ್‌' ಧಾರಾವಾಹಿಯಿಂದ ಮನೆಮಾತಾದ ನಟ ಮುಕೇಶ್‌ ಖನ್ನಾ ಇತ್ತೀಚೆಗೆ ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಈಗ ಅವರು ಮಹಿಳೆಯರ ಬಗ್ಗೆ ಇಂಥ ಹೇಳಿಕೆ ನೀಡಿರುವುದರಿಂದ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದ್ದಾರೆ ಎಂಬ ಕಾರಣಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗುತ್ತಿದೆ.

also read: ಅಕ್ಷಯ್‌ ಕುಮಾರ್‌ 'ಲಕ್ಷ್ಮೀ ಬಾಂಬ್‌' ಚಿತ್ರದ ವಿರುದ್ಧ ಗರಂ ಆದ 'ಶಕ್ತಿಮಾನ್‌' ನಟ ಮುಕೇಶ್‌ ಖನ್ನಾ!

ಅಕ್ಷಯ್‌ ಕುಮಾರ್‌ ನಟನೆಯ 'ಲಕ್ಷ್ಮೀ ಬಾಂಬ್' ಚಿತ್ರದ ಶೀರ್ಷಿಕೆ ಬದಲಾಗಬೇಕು ಎಂದು ಇತ್ತೀಚೆಗೆ ಮುಕೇಶ್‌ ಖನ್ನಾ ಪಟ್ಟು ಹಿಡಿದಿದ್ದರು. ಅದಕ್ಕೂ ಮುನ್ನ, 'ದಿ ಕಪಿಲ್‌ ಶರ್ಮಾ ಶೋ' ತುಂಬ ಅಶ್ಲೀಲವಾದ ಕಾರ್ಯಕ್ರಮ ಎಂದು ಹೇಳಿಕೆ ನೀಡಿದ್ದರು. ಆಗೆಲ್ಲ ಮುಕೇಶ್‌ಗೆ ಕೆಲವರು ಬೆಂಬಲ ಸೂಚಿಸಿದ್ದರು. ಆದರೆ ಈಗ ಮಹಿಳೆಯರ ಬಗ್ಗೆ ಇಂಥ ಹೇಳಿಕೆ ನೀಡಿರುವುದರಿಂದ ಎಲ್ಲರಿಂದಲೂ ಮುಕೇಶ್‌ ಮಾತಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

also read: 'ಆ ಕಾರ್ಯಕ್ರಮದಲ್ಲಿ ಇರೋದು ಅಶ್ಲೀಲ, ಡಬಲ್‌ ಮೀನಿಂಗ್‌ ಮಾತುಗಳು ಮಾತ್ರ' ಎಂದ ಮಹಾಭಾರತದ ಭೀಷ್ಮ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌