ಆ್ಯಪ್ನಗರ

ರಾಜಕೀಯದಲ್ಲಿ ಆಸಕ್ತಿ ಇಲ್ಲ: ಮಾಧವನ್‌

ತಾವೊಬ್ಬ ನಟ ಮಾತ್ರ, ನಟಿಸುವುದಷ್ಟೇ ನನ್ನ ಕೆಲಸ, ರಾಜಕೀಯ ಇತ್ಯಾದಿಗಳಲ್ಲಿ ನನಗೆ ಆಸಕ್ತಿಯಿಲ್ಲ ಎಂದು ಬಾಲಿವುಡ್‌ ನಟ ಆರ್‌ಮಾಧವನ್‌ ಸ್ಪಷ್ಟಪಡಿಸಿದ್ದಾರೆ...

Vijaya Karnataka 19 Jan 2018, 5:30 am

ತಾವೊಬ್ಬ ನಟ ಮಾತ್ರ, ನಟಿಸುವುದಷ್ಟೇ ನನ್ನ ಕೆಲಸ, ರಾಜಕೀಯ ಇತ್ಯಾದಿಗಳಲ್ಲಿ ನನಗೆ ಆಸಕ್ತಿಯಿಲ್ಲ ಎಂದು ಬಾಲಿವುಡ್‌ ನಟ ಆರ್‌.ಮಾಧವನ್‌ ಸ್ಪಷ್ಟಪಡಿಸಿದ್ದಾರೆ. ದಕ್ಷಿಣದ ಸೂಪರ್‌ ಸ್ಟಾರ್‌ಗಳಾದ ರಜನೀಕಾಂತ್‌ ಮತ್ತು ಕಮಲ್‌ ಹಾಸನ್‌ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಕೆಲವು ಪತ್ರಕರ್ತರು ಮಾಧವನ್‌ರಿಗೆ ರಾಜಕೀಯ ಸೇರಲು ಆಸಕ್ತಿಯಿದೆಯೇ ಎಂದು ಕೇಳಿದ ಪ್ರಶ್ನೆಗೆ ಮಾಧವನ್‌ ಈ ಉತ್ತರ ನೀಡಿದ್ದಾರೆ. ಇಬ್ಬರು ಮಹಾನಟರು ರಾಜಕೀಯ ಸೇರಿರುವುದನ್ನು ನಾನು ಸ್ವಾಗತಿಸುತ್ತೇನೆ. ಈ ಮೂಲಕ ಜನರ ಸೇವೆ ಮಾಡಲು ನಿರ್ಧರಿಸಿರುವ ಅವರ ತೀರ್ಮಾನ ಒಳ್ಳೆಯದೇ. ಆದರೆ ನನಗೆ ರಾಜಕೀಯ ಸೇರಲು ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌