ಆ್ಯಪ್ನಗರ

ಶಾರುಖ್ ಕೆನ್ನೆಗೆ ಬಾರಿಸುತ್ತಿದ್ದೆ: ಜಯಾ ಬಚ್ಚನ್ ಹೇಳಿಕೆ ವೈರಲ್

ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವಿನ ನಡೆದ ಜಗಳ ಹೆಚ್ಚು ಕಡಿಮೆ ಎಲ್ಲರನ್ನೂ ತಲುಪಿತ್ತು. ಈ ಕಾರಣಕ್ಕೆ ಐಶ್ವರ್ಯಾ ರೈ ಬಹಳಷ್ಟು ಅವಕಾಶಗಳನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು. ಆದರೆ ಐಶ್ವರ್ಯಾ ರೈ ಅವೆಲ್ಲವನ್ನೂ ಧೈರ್ಯವಾಗಿ ಎದುರಿಸಿ ಬಾಲಿವುಡ್‌ನಲ್ಲಿ ತಮ್ಮ ಸ್ಥಾನ ಅಲ್ಲಾಡದಂತೆ ನೋಡಿಕೊಂಡಿದ್ದರು.

Vijaya Karnataka Web 23 Feb 2019, 7:18 pm
ಸಲ್ಮಾನ್ ಖಾನ್ ಜೋಡಿಯಾಗಿ ಐಶ್ವರ್ಯಾ ರೈ ನಟಿಸುತ್ತಿದ್ದ ಚಿತ್ರವೊಂದರ ಶೂಟಿಂಗ್ ವೇಳೆ 'ಸಲ್ಮಾನ್ ಖಾನ್ ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರು' ಎಂದು ಐಶ್ವರ್ಯಾ ರೈ ಆರೋಪಿಸಿದ್ದರು. ಐಶ್ಯರ್ಯಾ ರೈ ತಮ್ಮ ಮೇಲಾದ ಹಲ್ಲೆ ಪ್ರಕರಣವನ್ನು ಧೈರ್ಯವಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಈ ಕಾರಣಕ್ಕೆ ಶಾರುಖ್ ಖಾನ್ ಜತೆ ಐಶ್ಯರ್ಯಾ ರೈ ನಟಿಸಬೇಕಿದ್ದ 'ಚಲ್ತೆ ಚಲ್ತೆ' ಚಿತ್ರದಿಂದ ಐಶ್ವರ್ಯಾ ರೈ ಅವರನ್ನು ಹೊರಹಾಕಿ ನಟಿ ರಾಣಿ ಮುಖರ್ಜಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
Vijaya Karnataka Web jayabachchan23


ಆ ಸಮಯದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವಿನ ನಡೆದ ಜಗಳ ಹೆಚ್ಚು ಕಡಿಮೆ ಎಲ್ಲರನ್ನೂ ತಲುಪಿತ್ತು. ಈ ಕಾರಣಕ್ಕೆ ಐಶ್ವರ್ಯಾ ರೈ ಬಹಳಷ್ಟು ಅವಕಾಶಗಳನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು. ಆದರೆ ಐಶ್ವರ್ಯಾ ರೈ ಅವೆಲ್ಲವನ್ನೂ ಧೈರ್ಯವಾಗಿ ಎದುರಿಸಿ ಬಾಲಿವುಡ್‌ನಲ್ಲಿ ತಮ್ಮ ಸ್ಥಾನ ಅಲ್ಲಾಡದಂತೆ ನೋಡಿಕೊಂಡಿದ್ದರು. ಆದರೆ ಆ ಘಟನೆಗಳು ಬಾಲಿವುಡ್‌ನಲ್ಲಿ ನಂತರದ ಬಹಳಷ್ಟು ಜನರ ಸಂದರ್ಶನಗಳಲ್ಲಿ ಸಾಕಷ್ಟು ಸೌಂಡ್ ಮಾಡಿತ್ತು.

ಆ ಘಟನೆ ಹಾಗೂ ಸಂದರ್ಶನಗಳಿಗೆ ಜಯಾ ಬಚ್ಚನ್ ಕೂಡ ಹೊರತಾಗಿರಲಿಲ್ಲ. ಆದರೆ, ಜಯಾ ಬಚ್ಚನ್ ತಮ್ಮ ಹೃದಯದಾಳದಿಂದ ಆಡಿರುವ ಮಾತು ಮೇಲ್ನೋಟಕ್ಕೆ ಬೇರೆ ಅರ್ಥವನ್ನು ಹೇಳುವಂತಿತ್ತು. ಆದರೆ, ಜಯಾ ಬಚ್ಚನ್ ಹಾಗೂ ಶಾರುಖ್ ಖಾನ್ ಮಧ್ಯೆ ಇದ್ದ ಆತ್ಮೀಯತೆಯ 'ಅಮ್ಮ-ಮಗನ' ಸಂಬಂಧ ತಿಳಿದ ಬಾಲಿವುಡ್ ಈ ಸಂದರ್ಶನವನ್ನು ಸಖತ್ ಎಂಜಾಯ್ ಮಾಡಿತ್ತು. ಈಗ ಅದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚರಿಸುತ್ತ ಸದ್ದುಗದ್ದಲ ಮಾಡುತ್ತಿದೆ.

ಹಾಗಿದ್ದರೆ ಅಂದು ಜಯಾ ಬಚ್ಚನ್ ಅವರು ಹೇಳಿದ್ದೇನು ಗೊತ್ತೇ? ಸಂದರ್ಶನದಲ್ಲಿ ಕುಳಿತಿದ್ದ ಜಯಾ ಬಚ್ಚನ್ ಅವರು ತಮಗೆ ಕೇಳಲಾದ ಪ್ರಶ್ನೆಗೆ " ನನ್ನ ಮಗ ಅಭಿಷೇಕ್ ಬಚ್ಚನ್ ತನ್ನ ದ್ರೋಣ ಚಿತ್ರದ ಪ್ರೀಮಿಯರ್ ಶೋಗೆ ಶಾರುಖ್ ಖಾನ್ ಅವರನ್ನು ಇನ್ವೈಟ್ ಮಾಡಿದ್ದ. ಶಾರುಖ್ ಬಂದರೆ ಆ ಕಾರ್ಯಕ್ರಮದ ಕಳೆಯೇ ಬೇರೆ ಎಂದು ನನಗೆ ಗೊತ್ತಿತ್ತು. ಹೀಗಾಗಿ ನಾನು ಶಾರುಖ್ ಬರುವುದನ್ನೇ ಕಾತರದಿಂದ ಕಾಯುತ್ತಿದ್ದೆ. ನನಗೆ ಶಾರುಖ್ ಬರಲೇಬೇಕೆಂದು ತುಂಬಾ ಆಸೆಯಿತ್ತು" ಎಂದಿದ್ದಾರೆ.

ನಂತರ, ಮಾಧ್ಯಮದಲ್ಲಿ ತೂರಿಬಂದ 'ಐಶ್ವರ್ಯಾ ಬಗ್ಗೆ ಶಾರುಖ್ ಖಾನ್ ಏನು ಹೇಳಿದರು' ಎಂಬ ಪ್ರಶ್ನೆಗೆ ಉತ್ತರಿಸುತ್ತ "ಆತ ಏನೇ ಹೇಳಿದ್ದರೂ ನಾನು ಶಾರುಖ್ ವಿರುದ್ಧವೇ ಮಾತನಾಡುತ್ತಿದ್ದೆ. ಆತ ಸಹಜವಾಗಿ ಐಶ್ವರ್ಯಾ ರೈ ವಿರುದ್ಧ ಮಾತನಾಡಿದ. ನಾನು ಆತನ ಮಾತಿನ ವಿರುದ್ಧವೇ ಇದ್ದೆ. ಆದರೆ, ಶಾರುಖ್ ಏನಾದರೂ ಅಂದು ನಮ್ಮ ಮನೆಯಲ್ಲಿ ಇದ್ದಿದ್ದರೆ ನಾನು ಅವನ ಕೆನ್ನೆಗೆ ನನ್ನ ಮಗನಿಗೆ ಭಾರಿಸಿದಂತೆ ಭಾರಿಸುತ್ತಿದ್ದೆ. ಹೇಗಿದ್ದರೂ ಆತ ನನ್ನ ಹೃದಯದಲ್ಲಿ ನನ್ನ ಮಗನಷ್ಟೇ ಪ್ರಮುಖ ಸ್ಥಾನ ಪಡೆದಿದ್ದಾನೆ; ಹೀಗಾಗಿ ನಾನು ಹೊಡೆದರೂ ಏನೂ ತೊಂದರೆಯಿಲ್ಲ ಎಂದು ನನಗೆ ಗೊತ್ತಿತ್ತು" ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌