ಆ್ಯಪ್ನಗರ

ಚಿರಂಜೀವಿ ಸೈರಾದಲ್ಲಿ ಅಪ್ಪಟ ಖಾದಿ ಬಳಕೆ

ಚಿರು ಧರಿಸಿದ ಉಡುಪು ಅಪ್ಪಟ ಖಾದಿ ಅದರಲ್ಲೂ ಮುಖ್ಯವಾಗಿ ಸ್ಥಳೀಯ ನೇಕಾರರಿಂದಲೇ ಸಿದ್ಧವಾದ ಖಾದಿ ಉಡುಪು ಎಂದು ಸಿನಿಮಾದ ಕಾಸ್ಟ್ಯೂಮ್‌ ಡಿಸೈನ್‌ ಕೂಡ ಆಗಿರುವ ಅವರ ಮಗಳು ಸುಶ್ಮಿತಾ ಕೊನಿದೆಲಾ ತಿಳಿಸಿದ್ದಾರೆ.

Vijaya Karnataka Web 25 Aug 2018, 11:48 am
ಮೆಗಾ ಸ್ಟಾರ್‌ ಚಿರಂಜೀವಿಯ 151ನೇ ಸಿನಿಮಾ ಸೈರಾ ನರಸಿಂಹ ರೆಡ್ಡಿ ಹತ್ತು ಹಲವು ಕಾರಣಗಳಿಂದ ಭಾರೀ ಸುದ್ದಿಯಲ್ಲಿದೆ. ಈ ವಾರವಷ್ಟೇ ಅದರ ಮೊದಲ ಟೀಸರ್‌ ಬಿಡುಗಡೆಯಾಗಿದ್ದು, ಮೊದಲ ಎರಡು ದಿನಗಳಲ್ಲೇ ದಾಖಲೆ ಸಂಖ್ಯೆಯ 74 ಲಕ್ಷ ಹಿಟ್‌ಗಳನ್ನು ಪಡೆದಿರುವುದು ಒಂದು ಕಡೆಯಾದರೆ, ಇದರಲ್ಲಿ ಚಿರಂಜೀವಿ ಧರಿಸಿದ ಉಡುಪು ಬಗ್ಗೆ ಚರ್ಚೆ ನಡೆಯುತ್ತಿದೆ.
Vijaya Karnataka Web saira


ಇದರಲ್ಲಿ ಚಿರು ಧರಿಸಿದ ಉಡುಪು ಅಪ್ಪಟ ಖಾದಿ ಅದರಲ್ಲೂ ಮುಖ್ಯವಾಗಿ ಸ್ಥಳೀಯ ನೇಕಾರರಿಂದಲೇ ಸಿದ್ಧವಾದ ಖಾದಿ ಉಡುಪು ಎಂದು ಸಿನಿಮಾದ ಕಾಸ್ಟ್ಯೂಮ್‌ ಡಿಸೈನ್‌ ಕೂಡ ಆಗಿರುವ ಅವರ ಮಗಳು ಸುಶ್ಮಿತಾ ಕೊನಿದೆಲಾ ತಿಳಿಸಿದ್ದಾರೆ. 1800ರಲ್ಲಿದ್ದ ಉಜ್ಜಲವಾಡ ನರಸಿಂಹ ರೆಡ್ಡಿಯ ಬ್ರಿಟಿಷರ ವಿರುದ್ಧದ ಹೋರಾಟದ ಕಥೆಯನ್ನು ಹೊಂದಿರುವ ಈ ಸಿನಿಮಾದ ಕಾಸ್ಟ್ಯೂಮ್‌ ವಿನ್ಯಾಸದ ಸಂಶೋಧನೆಗೆ ಎಂಟು ತಿಂಗಳು ಹಿಡಿಯಿತು. ಬಳಿಕ ಆರು ತಿಂಗಳು ಅದರ ಡಿಸೈನ್‌ಗೆ ಸಮಯ ಹಿಡಿಯಿತು. ಇಲ್ಲಿ ಯಾವುದೇ ರಾಸಾಯನಿಕ ಬಳಕೆಯ ಬಟ್ಟೆಯನ್ನು ಬಳಸಲಾಗಿಲ್ಲ. ಬದಲಾಗಿ ಸ್ಥಳೀಯ ನೇಕಾರರಿಂದಲೇ ಬಟ್ಟೆ ಖರೀದಿಸಿ ಚಿರು ದಿರಿಸಿನ ವಿನ್ಯಾಸ ಮಾಡಿದ್ದೇವೆ ಎಂದರು.

ಇನ್ನೊಂದು ಪ್ರಮುಖ ವಿಷಯವೆಂದರೆ, ಈ ಸಿನಿಮಾ ಚಿರಂಜೀವಿ ಅವರ ಎರಡು ದಶಕಗಳ ಹಿಂದಿನ ಕನಸು ಅಂತೆ. ಇದಕ್ಕಾಗಿ ಪರುಚುರಿ ಸಹೋದರರು 2006ರಲ್ಲಿ ಇದರ ಚಿತ್ರಕಥೆಯನ್ನು 2016ರಲ್ಲೇ ಬರೆಯಲು ಆರಂಭಿಸಿದ್ದರು. ಸುಮಾರು 12 ವರ್ಷಗಳ ಬಳಿಕ ಚಿತ್ರಕಥೆ ಪೂರ್ಣಗೊಂಡಿತು ಎಂದು ನಿರ್ದೇಶಕಕ ಸುರೇಂದ್ರ ರೆಡ್ಡಿ ತಿಳಿಸಿದರು.

ಸಾಮಾನ್ಯವಾಗಿ 1857ರಲ್ಲಿ ನಡೆದ ಸಿಪಾಯಿ ದಂಗೆಯೇ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂಬ ಮಾತಿದೆ. ಆದರೆ ಅದಕ್ಕೆ ದಶಕ ಮೊದಲೇ ಅಂದರೆ 1846ರಲ್ಲಿ ಬ್ರಿಟಿಷ್‌ ಆಡಳಿತದ ವಿರುದ್ಧ ಮೊದಲ ನಾಗರಿಕ ದಂಗೆಯನ್ನು ನರಸಿಂಹ ರೆಡ್ಡಿ ಸಂಘಟಿಸಿದ್ದ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌