ಆ್ಯಪ್ನಗರ

ಸದ್ಯದಲ್ಲೇ ಮಾವಿನ ಕಾಯಿ ತಿನ್ನಲಿರುವ ದೀಪಿಕಾ ಪಡುಕೋಣೆ

ಚಿತ್ರದ ನಾಯಕಿ, ಲಕ್ಷ್ಮೀ ಅಗರ್‌ವಾಲ್ ಪಾತ್ರಧಾರಿ ದೀಪಿಕಾ ಪಡುಕೋಣೆ ಅವರಿಗೆ ತೆರೆಯ ಮೇಲೆ ಜೋಡಿಯಾಗಿ ಬಾಲಿಕಾ ವಧು ಖ್ಯಾತಿಯ ವಿಕ್ರಾಂತ್ ಮಾಸಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಸದ್ಯದಲ್ಲೇ ಪ್ರಾರಂಭವಾಗಲಿದ್ದು ಚಿತ್ರದ ಬಗ್ಗೆ ಸಹಜವಾಗಿ ನಿರೀಕ್ಷೆ ಹೆಚ್ಚಿದೆ.

Vijaya Karnataka Web 3 Mar 2019, 4:09 pm
ನಟಿ, ಇತ್ತೀಚಿಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿರುವ ಮದುಮಗಳು ದೀಪಿಕಾ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಈ ಚಿತ್ರದಲ್ಲಿ ಅವರು ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ ಸಂತ್ರಸ್ತೆ 'ಲಕ್ಷ್ಮೀ ಅಗರ್‌ವಾಲ್' ಪಾತ್ರವನ್ನು ಮಾಡಲಿದ್ದಾರೆ. ಈ ಚಿತ್ರವನ್ನು ರಾಜಿ ಖ್ಯಾತಿಯ ಮೇಘನಾ ಗುಲ್ಜಾರ್ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ 'ಚಪ್ಪಕ್' ಎಂದು ಹೆಸರಿಡಲಾಗಿದೆ.
Vijaya Karnataka Web deepika0303


ಚಪ್ಪಕ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಆಸಿಡ್ ದಾಳಿಗೆ ಒಳಗಾಗಿ ಲೈಫ್ ಎದುರಿಸುವ ಹೆಣ್ಣಾಗಿ ತೆರೆಯ ಮೇಲೆ ಮಿಂಚಲಿದ್ದಾರೆ. ಅಂಥ ಪರಿಸ್ಥಿತಿಯಲ್ಲಿ ಜೀವನ ಎದುರಿಸಲು ತುಂಬಾ ಧೈರ್ಯ, ಸ್ಥೈರ್ಯಗಳು ಬೇಕಾಗುತ್ತವೆ. ಇಂಥದ್ದೊಂದು ವಿಭಿನ್ನ ಕಥೆಯನ್ನು ತೆರೆಗೆ ತರುವ ಧೈರ್ಯವನ್ನು ನಿರ್ದೇಶಕಿ ಮೇಘಮಾ ಗುಲ್ಜಾರ್ ಮಾಡಿದ್ದಾರೆ. "ಈ ಚಿತ್ರದ ಪಾತ್ರಕ್ಕೆ ನಟಿ ದೀಪಿಕಾ ಅವರೇ ಸೂಕ್ತ ಎನಿಸಿದೆ. ಹೀಗಾಗಿ ಅವರನ್ನೇ ಮಾತನಾಡಿ ಆಯ್ಕೆ ಮಾಡಿದ್ದೇವೆ" ಎಂದಿದ್ದಾರೆ ಚಿತ್ರದ ನಿರ್ದೇಶಕಿ.

ಚಿತ್ರದ ನಾಯಕಿ, ಲಕ್ಷ್ಮೀ ಅಗರ್‌ವಾಲ್ ಪಾತ್ರಧಾರಿ ದೀಪಿಕಾ ಪಡುಕೋಣೆ ಅವರಿಗೆ ತೆರೆಯ ಮೇಲೆ ಜೋಡಿಯಾಗಿ ಬಾಲಿಕಾ ವಧು ಖ್ಯಾತಿಯ ವಿಕ್ರಾಂತ್ ಮಾಸಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಸದ್ಯದಲ್ಲೇ ಪ್ರಾರಂಭವಾಗಲಿದ್ದು ಚಿತ್ರದ ಬಗ್ಗೆ ಸಹಜವಾಗಿ ನಿರೀಕ್ಷೆ ಹೆಚ್ಚಿದೆ. ರಾಝಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮಾತ್ರವಲ್ಲ, ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಆ ಚಿತ್ರದ ಮೂಲಕ ನಿರ್ದೇಶಕಿ ಮೇಘನಾ ಗುಲ್ಜಾರ್ ಕೂಡ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿಸಿದ್ದಾರೆ. ದೀಪಿಕಾ ನಟಿಸುತ್ತಿದ್ದಾರೆ ಎಂದ ಮೇಲಂತೂ ಬಾಲಿವುಡ್ ಸೇರಿದಂತೆ ಇಡೀ ಭಾರತವೇ ಈ ಚಿತ್ರಕ್ಕೆ ಕಾಯುವುದರಲ್ಲಿ ಸಂದೇಹವೇ ಇಲ್ಲ.

ಈ ಚಿತ್ರದಲ್ಲಿ 'ನಾಯಕಿ ಮಾವಿನಕಾಯಿ ತಿನ್ನವು ದೃಶ್ಯವಿದೆಯಂತೆ. ದೀಪಿಕಾ ಅವರು ಈ ಬಗ್ಗೆ "ಈ ಚಿತ್ರದಲ್ಲಿ ಮಾವಿನ ಕಾಯಿಗೆ ಉಪ್ಪು. ಮೆಣಸಿನ ಪುಡಿ ಹಾಕಿಕೊಂಡು ತಿನ್ನುವ ಸೀನ್ ಇದೆ ನಿಜ ಹೇಳಬೇಕೆಂದರೆ, ನಾನು ಈ ಚಿತ್ರವನ್ನು ಒಪ್ಪಿಕೊಂಡಿದ್ದೇ ಮಾವಿನ ಕಾಯಿ ತಿನ್ನಲಿಕ್ಕಾಗಿ" ಎಂದಿದ್ದಾರೆ. ದೀಪಿಕಾರ ಈ ಮಾತನ್ನು ಕೇಳಿ ಬಾಲಿವುಡ್ ಹಾಗೂ ಸಿನಿಪ್ರೇಕ್ಷಕರು ನಗೆಗಡಲಿನಲ್ಲಿ ತೇಲುತ್ತಿದ್ದಾರೆ. ಕಾರಣ, ಬಹಳಷ್ಟು ಜನರಿಗೆ ಗೊತ್ತಿರುವಂತೆ, ಇತ್ತೀಚಿಗಷ್ಟೇ ದೀಪಿಕಾ ಮತ್ತು ರಣವೀರ್ ಸಿಂಗ್ ಮದುವೆಯಾಗಿದ್ದಾರೆ. ದೀಪಿಕಾಗೆ ಮಾವಿನಕಾಯಿ ತಿನ್ನುವ ಆಸೆ ಆಗಿದೆ ಎಂದರೆ ರಣವೀರ್ ಸಿಂಗ್ ಸುಮ್ಮನೆ ಕುಳಿತಿಲ್ಲ ಎಂದು ಆಡಿಕೊಂಡು ಎಲ್ಲರೂ ಮುಸಿಮುಸಿ ನಗುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌