ಆ್ಯಪ್ನಗರ

shilpa shetty ನಾನು ಸರಿ-ತಪ್ಪು ಏನೇ ಮಾಡಿದ್ರೂ ಪತ್ನಿಯಾಗಿ ಶಿಲ್ಪಾ ಶೆಟ್ಟಿ ಸಹಿಸಿಕೊಳ್ಳಬೇಕು ಎಂದಿದ್ದ ರಾಜ್ ಕುಂದ್ರಾ!

ಅಶ್ಲೀಲ ಸಿನಿಮಾ ತೆಗೆಯುತ್ತಿದ್ದಾರೆ ಎಂಬ ಆರೋಪದಡಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಕೂಡ ರಾಜ್ ಕುಂದ್ರಾ ಕಾಂಟ್ರವರ್ಸಿ ಮಾಡಿಕೊಂಡಿದ್ದರು. ಆ ವೇಳೆ ತಾನು ಏನೇ ಮಾಡಿದರೂ ಕೂಡ ಶಿಲ್ಪಾ ಹೆಸರು ಕೇಳಿ ಬರುತ್ತದೆ ಎಂದು ಹೇಳಿದ್ದರು.

THE TIMES OF INDIA NEWS SERVICE 22 Jul 2021, 3:25 pm
ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿವಾದಕ್ಕೀಡಾಗಿದ್ದಾರೆ. ಇದೇನು ಹೊಸದಲ್ಲ. ಈ ಹಿಂದೆ ಕೂಡ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿ ಅಮಾನತುಗೊಂಡಿದ್ದರು. ತಾನು ಮಾಡುವ ಕಾಂಟ್ರವರ್ಸಿಗಳಿಂದ ಪತ್ನಿ ಶಿಲ್ಪಾ ಶೆಟ್ಟಿಯ ಇಮೇಜ್ ಏನಾಗುವುದು ಎಂದು ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು. ಪ್ರಸ್ತುತ ರಾಜ್ ಕುಂದ್ರಾ ಪೊಲೀಸ್ ಕಸ್ಟಡಿಯಲ್ಲಿ ಇರೋದಕ್ಕೆ ಈ ಹಿಂದೆ ಮಾತನಾಡಿದ ಸಂದರ್ಶನವೊಂದು, ಈಗ ವೈರಲ್ ಆಗುತ್ತಿದೆ.
Vijaya Karnataka Web raj kundra spoke about shilpa shettys image because of his controversies
shilpa shetty ನಾನು ಸರಿ-ತಪ್ಪು ಏನೇ ಮಾಡಿದ್ರೂ ಪತ್ನಿಯಾಗಿ ಶಿಲ್ಪಾ ಶೆಟ್ಟಿ ಸಹಿಸಿಕೊಳ್ಳಬೇಕು ಎಂದಿದ್ದ ರಾಜ್ ಕುಂದ್ರಾ!


ಕ್ರಿಕೆಟ್ ಬೆಟ್ಟಿಂಗ್
ಇಂಡಿಯನ್ ಪ್ರೀಮಿಯರ್ ಲೀಗ್‌ನ ತಂಡಗಳಲ್ಲಿ ಒಂದಾದ ರಾಜಸ್ಥಾನ್ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರ ತಂಡದ ಮೇಲೆ ಹಣ ಪಣಕ್ಕಿಟ್ಟಿದ್ದರು. ಅಷ್ಟೇ ಅಲ್ಲದೆ ಆ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು 2013ರಲ್ಲಿ ರಾಜ್‌ರನ್ನು ಅಮಾನತುಗೊಳಿಸಿತ್ತು.

ಅಶ್ಲೀಲ ಸಿನಿಮಾ ದಂಧೆ ಕೇಸ್; ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಂಪಾದಿಸಿದ ಆಸ್ತಿ ಮೌಲ್ಯವೆಷ್ಟು?

ನಮ್ಮಿಬ್ಬರಿಗೂ ಸರಿ-ತಪ್ಪು ಗೊತ್ತಿದೆ

"ಜೀವನದಲ್ಲಿ ನಾನು ಏನೇ ಮಾಡಿದರೂ ಶಿಲ್ಪಾ ಹೆಸರಿನ ಜೊತೆ ನನ್ನ ಹೆಸರು ಇರುತ್ತದೆ. ಅದು ಸಹಜ. ಸತಿ-ಪತಿಗಳಾಗಿರುವುದಕ್ಕೆ ನಾವು ಜೀವನದಲ್ಲಿ ಏನೇ ಮಾಡಿದರೂ ಕೂಡ ನಾವು ಇದನ್ನೆಲ್ಲ ಸಹಿಸಿಕೊಳ್ಳಬೇಕಾಗುತ್ತದೆ. ಶಿಲ್ಪಾ ತುಂಬ ಪ್ರೋತ್ಸಾಹ, ಬೆಂಬಲ ನೀಡುವ ಪತ್ನಿ. ಯಾವುದು ತಪ್ಪು? ಯಾವುದು ಸರಿ? ಎಂಬುದರ ವ್ಯತ್ಯಾಸ ನಮ್ಮಿಬ್ಬರಿಗೂ ತಿಳಿದಿದೆ" ಎಂದು ರಾಜ್ ಕುಂದ್ರಾ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಭವಿಷ್ಯದಲ್ಲಿ ನೀಲಿ ಚಿತ್ರದ ನೇರ ಪ್ರಸಾರಕ್ಕೆ ಯೋಜನೆ ರೂಪಿಸಿದ್ದ ರಾಜ್‌ ಕುಂದ್ರಾ; ಪೊಲೀಸರ ಮಾಹಿತಿ

ಹಣಕ್ಕೆ ಬೆಲೆಯೇ ಇಲ್ಲ ಎಂದಿದ್ದ ರಾಜ್ ಕುಂದ್ರಾ

"ಹಣಕ್ಕೆ ಬೆಲೆಯೇ ಇಲ್ಲ ಎಂದು ನಾನು ತಿಳಿದುಕೊಂಡಿರುವೆ. ನನಗೆ ಪೂರ್ವಜರು ಯಾರೂ ಇರಲಿಲ್ಲ, ಹೀಗಾಗಿ ನಾನೇ ಹಣ ದುಡಿದೆ, ನನಗ್ಯಾರೂ ಬೆಳ್ಳಿ ತಟ್ಟೆಯಲ್ಲಿ ಏನೂ ನೀಡಿರಲಿಲ್ಲ. ನಾನು ಯಾವಾಗ ಬೇಕಿದ್ದರೂ ಹಣ ದುಡಿಯುವೆ, ಆದರೆ ಗೌರವ ಕಳೆದುಕೊಳ್ಳಲು ಬಯಸೋದಿಲ್ಲ" ಎಂದು ರಾಜ್ ಹೇಳಿದ್ದರು.

ಏನಿದು ಹೊಸ ಘಟನೆ?
ಇತ್ತೀಚೆಗೆ ಅಶ್ಲೀಲ ಸಿನಿಮಾ ತೆಗೆದು ಆಪ್‌ನಲ್ಲಿ ಪಬ್ಲಿಶ್ ಮಾಡುತ್ತಿದ್ದಾರೆ ಎಂಬ ಆರೋಪದಡಿ ರಾಜ್ ಕುಂದ್ರಾರನ್ನು ಬಂಧಿಸಲಾಗಿದೆ. ಜುಲೈ 23ರವರೆಗೆ ರಾಜ್ ಕುಂದ್ರಾರನ್ನು ಮುಂಬೈ ಕೋರ್ಟ್‌ ಪೊಲೀಸ್ ಕಸ್ಟಡಿಗೆ ನಿಡಿದೆ. ಈ ಕೇಸ್‌ನಲ್ಲಿ ರಾಜ್ ಕುಂದ್ರಾ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌