ಆ್ಯಪ್ನಗರ

ರಾಮ್ ಗೋಪಾಲ್ ವರ್ಮಾ ಹೊಸ ವೆಬ್ ಸೀರೀಸ್ 'ಡಿ ಕಂಪೆನಿ'

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಣ್ಣು ಇದೀಗ ವೆಬ್‍ ಸೀರೀಸ್ ಮೇಲೆ ಬಿದ್ದಿದೆ. ಒಂದು ಕಡೆ ಸಿನಿಮಾಗಳನ್ನು ಮಾಡುತ್ತಾ ಇನ್ನೊಂದು ಕಡೆ ವೆಬ್ ಸಿರೀಸ್ ಕಾರ್ಯಕ್ಕೂ ಕೈಹಾಕಿದ್ದಾರೆ.

Vijaya Karnataka Web 26 Jul 2018, 2:32 pm
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಣ್ಣು ಇದೀಗ ವೆಬ್‍ ಸೀರೀಸ್ ಮೇಲೆ ಬಿದ್ದಿದೆ. ಒಂದು ಕಡೆ ಸಿನಿಮಾಗಳನ್ನು ಮಾಡುತ್ತಾ ಇನ್ನೊಂದು ಕಡೆ ವೆಬ್ ಸೀರೀಸ್ ಕಾರ್ಯಕ್ಕೂ ಕೈಹಾಕಿದ್ದಾರೆ. ಈಗಾಗಲೆ ಅವರು ಕಡಪ, ಗನ್ಸ್ ಅಂಡ್ ತೈಸ್ ಎಂಬ ವೆಬ್ ಸೀರೀಸ್ ಘೋಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಟ್ರೇಲರ್‌ಗಳನ್ನೂ ಬಿಡುಗಡೆ ಮಾಡಿ ವಿವಾದಕ್ಕೆ ಸಿಕ್ಕಿದ್ದಾರೆ.
Vijaya Karnataka Web rgv


ಇದೀಗ ಮತ್ತೊಂದು ವೆಬ್ ಸೀರೀಸ್ ಮಾಡುವುದಾಗಿ ಫೇಸ್‍ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಜೀವನ ಬಗ್ಗೆ ವೆಬ್ ಸೀರೀಸ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ವೆಬ್ ಸೀರೀಸ್ ಮುಂಬೈ ಅಂಡರ್‌ವರ್ಲ್ಡ್ ಬಗ್ಗೆ ಹೇಳುವ ಅದ್ಭುತವಾದ ಕಾವ್ಯವಾಗಲಿದೆ ಎಂದು ವರ್ಮಾ ಬಣ್ಣಿಸಿದ್ದಾರೆ. ಬಹಳಷ್ಟು ಗ್ಯಾಪ್ ಬಳಿಕ ಮಧು ಮಂತೆನ ಜತೆಗೆ ಕೈಜೋಡಿಸುತ್ತಿದ್ದೇನೆ. ಇಬ್ಬರೂ 'ಡಿ ಕಂಪೆನಿ' ಹೆಸರಿನಲ್ಲಿ ವೆಬ್ ಸೀರೀಸ್ ತೆಗೆಯುತ್ತಿದ್ದೇವೆ ಎಂದಿದ್ದಾರೆ. 'ರಕ್ತ ಚರಿತ್ರೆ' ಬಳಿಕ ಇವರಿಬ್ಬರೂ ಮತ್ತೊಮ್ಮೆ ಕೈ ಜೋಡಿಸಿರುವುದು ವಿಶೇಷ.

ತಾನು ತೆಗೆಯುತ್ತಿರುವ ವೆಬ್ ಸೀರೀಸ್ ಕೇವಲ ದಾವೂದ್ ಇಬ್ರಾಹಿಂ ಜೀವನವನ್ನಷ್ಟೇ ಅಲ್ಲದೆ ಡಿ ಕಂಪೆನಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನೂ ಕೆದಕಿ ತೋರಿಸುತ್ತೇವೆ. ಡಿ ಕಂಪೆನಿ ಅತ್ಯಂತ ಭಯಾನಕವಾಗಿ ಬೆಳೆದ ರೀತಿ, ಭಾರತ ಅಪರಾದ ಇತಿಹಾಸದಲ್ಲಿ ಅದರ ಸ್ಥಾನದ ಬಗ್ಗೆ ವಿವರವಾಗಿ ಬಿಚ್ಚಿಡುವುದಾಗಿ ಹೇಳಿದ್ದಾರೆ.


ಗ್ಯಾಂಗ್ ಒಂದರಲ್ಲಿ ಸಾಮಾನ್ಯ ಅಪರಾಧಿಯಂತೆ ಇದ್ದ ದಾವೂದ್ ಇಬ್ರಾಹಿಂ, ಪಠಾಣ್ ಗ್ಯಾಂಗನ್ನು ಹೇಗೆ ಮುಗಿಸಿದ, ಆ ಬಳಿಕ ದುಬೈಗೆ ಪರಾರಿಯಾಗಿ ಅಲ್ಲಿಂದಲೇ ಆಪರೇಟ್ ಮಾಡುತ್ತಾ ಡಿ ಕಂಪೆನಿಗೆ ಕಾರ್ಪೊರೇಟ್ ಸ್ಥಾನಮಾನವನ್ನು ಹೇಗೆ ತಂದ, ಇದರಲ್ಲಿ ಸಿನಿಮಾ ತಾರೆಗಳ ಕೈವಾಡ ಎಲ್ಲವನ್ನೂ ತೋರಿಸುತ್ತೇನೆ ಎಂದಿದ್ದಾರೆ. ಬಾಬರಿ ಮಸೀದಿ ನೆಲಸಮ ಮಾಡಿದ್ದು, 1993ರ ಸರಣಿ ಬಾಂಬ್ ಸ್ಫೋಟ, ಚೋಟಾ ರಾಜನ್ ತಿರುಗಿಬಿದ್ದದ್ದು, ಹೀಗೆ ಪ್ರತಿ ವಿಷಯವನ್ನೂ ಕಣ್ಣಿಗೆ ಕಟ್ಟುವಂತೆ ತೋರಿಸುವುದಾಗಿ ಮಾಹಿತಿ ನೀಡಿದ್ದಾರೆ.

ಒಂದು ಸೀರೀನ್‌ನಲ್ಲಿ 10 ಎಪಿಸೋಡ್ ಇರುವಂತೆ ಒಟ್ಟು ಐದು ಸೀರೀಸ್ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ದಾವೂದ್ ಇಬ್ರಾಹಿಂ, ಚೋಟಾ ಶಕೀಲ್, ಚೋಟಾ ರಾಜನ್, ಹೀಗೆ ಮೂಲ ಹೆಸರುಗಳಲ್ಲೇ ಪಾತ್ರಗಳಿರುತ್ತವೆ ಎಂದಿದ್ದಾರೆ. ಸತ್ಯ, ಕಂಪೆನಿ ಸಿನಿಮಾಗಳ ಸಂದರ್ಭದಲ್ಲೇ ತಾನು ಒಟ್ಟಾರೆ ಮಾಹಿತಿ ಸಂಗ್ರಹಿಸಿದ್ದೇನೆ, ಅದರ ಆಧಾರವಾಗಿ ಡಿ ಕಂಪೆನಿ ತೆಗೆಯುತ್ತಿದ್ದೇನೆ. ಸ್ಕ್ರಿಪ್ಟ್ ರೆಡಿಯಾಗಿದೆ, ಶೀಘ್ರದಲ್ಲೇ ಶೂಟಿಂಗ್ ಆರಂಭಿಸುತ್ತೇನೆ. ತಾರಾಗಣ ಇನ್ನಿತರ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌