ಆ್ಯಪ್ನಗರ

ಖಿಲ್ಜಿಯಂಥ ಪಾತ್ರ ಇನ್ನು ಮಾಡಲ್ಲ: ರಣವೀರ್‌ ಸಿಂಗ್‌

ಪದ್ಮಾವತ್‌ ಸಿನಿಮಾದಲ್ಲಿ ತಾವು ಮಾಡಿದ ಅಲ್ಲಾವುದ್ದೀನ್‌ ಖಿಲ್ಜಿಯಂಥ ವಿಕೃತ ಪಾತ್ರಗಳನ್ನು ಇನ್ನು ಮುಂದೆ ಮಾಡುವುದಿಲ್ಲ ಎಂದು ನಟ ರಣವೀರ್‌ ಸಿಂಗ್‌

Vijaya Karnataka 31 Jul 2018, 5:00 am
ಪದ್ಮಾವತ್‌ ಸಿನಿಮಾದಲ್ಲಿ ತಾವು ಮಾಡಿದ ಅಲ್ಲಾವುದ್ದೀನ್‌ ಖಿಲ್ಜಿಯಂಥ ವಿಕೃತ ಪಾತ್ರಗಳನ್ನು ಇನ್ನು ಮುಂದೆ ಮಾಡುವುದಿಲ್ಲ ಎಂದು ನಟ ರಣವೀರ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ಇಂಥ ಡಾರ್ಕ್‌ ಶೇಡ್‌ನ ಪಾತ್ರಗಳು ಕೆಲವೊಮ್ಮೆ ನಟನಿಗೂ ಕ್ಷೋಭೆಯನ್ನುಂಟು ಮಾಡುತ್ತದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
Vijaya Karnataka Web Bengaluru: Bollywood actor Ranveer Singh during the second day of the 3rd Editio...
Bollywood actor Ranveer Singh during the second day of the 3rd Edition of IIMBue-Annual Leadership Conclave, in Bengaluru on Saturday, July 21, 2018.Photo)


ಹಾಗಾದರೆ ಖಿಲ್ಜಿ ಪಾತ್ರ ಮಾಡಲು ಯಾಕೆ ಒಪ್ಪಿಕೊಂಡ್ರಿ ಎಂದು ಕೇಳಿದ ಪ್ರಶ್ನೆಗೆ ಅವರು, ಒಂದು ಪಾತ್ರದೊಳಗೆ ನಾನು ಎಷ್ಟು ಆಳವಾಗಿ ಪರಕಾಯ ಪ್ರವೇಶ ಮಾಡುತ್ತೇನೆ ಎಂಬುದನ್ನು ತಿಳಿದುಕೊಳ್ಳಲು ಖಿಲ್ಜಿ ಪಾತ್ರದ ಸವಾಲನ್ನು ಸ್ವೀಕರಿಸಿದೆ. ಆ ನಿಟ್ಟಿನಲ್ಲಿ ನನಗೆ ತೃಪ್ತಿ ಸಿಕ್ಕಿದೆ. ನಾನು ಆ ಪಾತ್ರದಲ್ಲಿ ಸಂಪೂರ್ಣ ಲೀನವಾಗಿದ್ದೆ. ಇದರಿಂದ ನನಗೆ ಹೊರಬರಲು ತುಂಬಾ ಕಷ್ಟವಾಗಿತ್ತು. ಆಗಲೇ ನಾನು ಮುಂದೆ ಇಂಥ ಭಯಾನಕ ಪಾತ್ರ ಮಾಡಲಾರೆ ಎಂದು ನಿರ್ಧರಿಸಿಬಿಟ್ಟೆ ಎಂದು ರಣವೀರ್‌ ಸಿಂಗ್‌ ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌