ಆ್ಯಪ್ನಗರ

ಬಾಲಿವುಡ್ ಅಂಗಳದಲ್ಲಿ ಸೌಂಡ್ ಮಾಡಲಿರುವ ಕನ್ನಡದ 'ಕಿರಿಕ್ ಪಾರ್ಟಿ'

'ಸೋನು ಕೇ ಟಿಟು ಸ್ವೀಟ್' ಬಳಿಕ ಲುಕಾ ಚುಪ್ಪಿ ಸಿನಿಮಾದ ಮೂಲಕ ತನ್ನ ಹೆಜ್ಜೆ ಗುರುತು ಮೂಡಿಸಿರುವ ಕಾರ್ತಿಕ್ ಆರ್ಯನ್ ಹಿಂದಿಯ ಕಿರಿಕ್ ಪಾರ್ಟಿ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಹಿಂದಿಯಲ್ಲಿ ಅಭಿಷೇಕ್ ಜೈನ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

Vijaya Karnataka Web 7 Apr 2019, 12:09 pm
ಕನ್ನಡದಲ್ಲಿ ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿದ್ದ 'ಕಿರಿಕ್ ಪಾರ್ಟಿ' ಚಿತ್ರದ ಹವಾ ಇನ್ನೂ ಕಡಿಮೆ ಆಗಿಲ್ಲ. ಈ ಚಿತ್ರವು ತಮಿಳು ಹಾಗೂ ತೆಲುಗಿನಲ್ಲಿ ರೀಮೇಕ್ ಆಗಿದ್ದು ಗೊತ್ತೇ ಇದೆ. ಇದೀಗ ಕನ್ನಡದ ಕಿರಿಕ್ ಪಾರ್ಟಿ ಚಿತ್ರವು ಬಾಲಿವುಡ್‌ನಲ್ಲಿ ರೀಮೇಕ್ ಆಗಲು ಹೊರಟಿದೆ. ಸಿಕ್ಕ ಸುದ್ದಿಯ ಪ್ರಕಾರ, ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ನಾಯಕನ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.
Vijaya Karnataka Web kirikparty0704


ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಜೋಡಿಯ 'ಕಿರಿಕ್ ಪಾರ್ಟಿ' ಚಿತ್ರವು 2016ರಲ್ಲಿ ತೆರೆಕಂಡು ಇಡೀ ಸ್ಯಾಂಡಲ್‌ವುಡ್ ಶೇಕ್ ಮಾಡಿತ್ತು. ಗಳಿಕೆಯಲ್ಲೂ ಸಹ ಸಖತ್ ಸೌಂಡ್ ಮಾಡಿದ್ದ ಈ ಸಿನಿಮಾ, ಹೊಸ ಟ್ರೆಂಡ್ ಬರೆದು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯೆ ಸ್ಥಾನ ಉಳಿಸಿಕೊಂಡಿದೆ. ಇದೀಗ ಈ ಚಿತ್ರವು ಹಿಂದಿಗೆ ರಿಮೇಕ್ ಆಗುತ್ತಿದೆ ಎಂಬುದು ಹೊಸ ಸುದ್ದಿಯಾಗಿದೆ. ರಕ್ಷಿತ್ ಶೆಟ್ಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಯಾರೆಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

'ಸೋನು ಕೇ ಟಿಟು ಸ್ವೀಟ್' ಬಳಿಕ ಲುಕಾ ಚುಪ್ಪಿ ಸಿನಿಮಾದ ಮೂಲಕ ತನ್ನ ಹೆಜ್ಜೆ ಗುರುತು ಮೂಡಿಸಿರುವ ಕಾರ್ತಿಕ್ ಆರ್ಯನ್ ಹಿಂದಿಯ ಕಿರಿಕ್ ಪಾರ್ಟಿ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಹಿಂದಿಯಲ್ಲಿ ಅಭಿಷೇಕ್ ಜೈನ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಕನ್ನಡ ಭಾಷೆಯಲ್ಲಿ ಬಂದ ಚಿತ್ರಕಥೆಯಂತೆ ಸ್ಕ್ರಿಪ್ಟ್ಸ್ ಸಿದ್ಧಗೊಳಿಸಲು ಅಭಿಷೇಕ್ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಕನ್ನಡದಲ್ಲಿ ಚಿತ್ರದ ಸಂಭಾಷಣೆ ಸಖತ್ ಕಚಗುಳಿ ಇಡುವಂತಿತ್ತು. ಅದೇ ರೀತಿಯಲ್ಲಿ ಹಿಂದಿಯಲ್ಲಿ ಕೂಡ ಬರಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದೆ.

ಕಾರ್ತಿಕ್ ಆರ್ಯನ್ ಸದ್ಯ 'ಇಮ್ತಿಯಾಜ್' ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ದೆಹಲಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ಸಾರಾ ಅಲಿಖಾನ್ ಕಾರ್ತಿಕ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ ಸಾನ್ವಿ ಪಾತ್ರಕ್ಕೆ ಜಾಕ್ವೇಲಿನ್ ಫರ್ನಾಂಡಿಸ್ ಹೆಸರು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಕನ್ನಡದ ಸಿನಿಮಾ ಕಂಪು ಇಡೀ ಇಂಡಿಯಾಗೆ ವ್ಯಾಪಿಸುವ ಕಾಲ ಬಂದಿದೆ, ಈಗಾಗಲೇ ಕನ್ನಡ ಕೆಜಿಎಫ್ ಚಿತ್ರದ ಮೂಲಕ ಕನ್ನಡದ ಸಿನಿಮಾಗಳು ಸಖತ್ ಸೌಂಡ್ ಮಾಡುತ್ತಿದ್ದು, ಇದರ ಬೆನ್ನಲ್ಲೇ ಕಿರಿಕ್ ಪಾರ್ಟಿ ಕೂಡ ಬಾಲಿವಿವುಡ್‌ನಲ್ಲಿ ರೀಮೇಕ್ ಆಗಲಿದೆ. ಬೇರೆ ಬೇರೆ ದಾರಿಗಳಲ್ಲಿ ಕನ್ನಡ ಸಿನಿಮಾಗಳು ದೇಶವ್ಯಾಪಿಯಾಗಿ ಸೌಂಡ್ ಮಾಡತೊಡಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌