ಆ್ಯಪ್ನಗರ

ಬಾಹುಬಲಿ ಬೆನ್ನಿಗೆ ಇರಿದ ಮತ್ತೊಬ್ಬ ಕಟ್ಟಪ್ಪ!

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ ಬೆನ್ನಿಗೆ ಕತ್ತಿ ಇರಿದು ಕಟ್ಟಪ್ಪ ಕೊಂದ ದೃಶ್ಯವನ್ನು ಯಾರು ತಾನೇ ಮರೆಯಲು ಸಾಧ್ಯ?

Mumbai Mirror 20 Jun 2017, 2:34 pm
ಎಸ್‌.ಎಸ್‌. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ ಬೆನ್ನಿಗೆ ಕತ್ತಿ ಇರಿದು ಕಟ್ಟಪ್ಪ ಕೊಂದ ದೃಶ್ಯವನ್ನು ಯಾರು ತಾನೇ ಮರೆಯಲು ಸಾಧ್ಯ? ಅಷ್ಟೇ ಅಲ್ಲದೆ 'ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?' ಎಂಬ ಯಕ್ಷ ಪ್ರಶ್ನೆಗೆ ಏಪ್ರಿಲ್‌ 28ರಂದು ಉತ್ತರ ಕೂಡ ಸಿಕ್ಕಿತು.
Vijaya Karnataka Web recreate iconic kattappa baahubli moment
ಬಾಹುಬಲಿ ಬೆನ್ನಿಗೆ ಇರಿದ ಮತ್ತೊಬ್ಬ ಕಟ್ಟಪ್ಪ!


ಆದರೆ ಬಾಲಿವುಡ್‌ ನಟ ವರುಣ್‌ ಧವನ್‌ ಯಾಕೆ ಪ್ರಭಾಸ್‌ ಬೆನ್ನಿಗೆ ಇರಿದರು ಅನ್ನೋದು ಸದ್ಯಕ್ಕೆ ಚರ್ಚೆಯಾಗುತ್ತಿರುವ ಪ್ರಶ್ನೆ. ಇದು ಜಸ್ಟ್‌ ಫನ್‌ ಅಷ್ಟೇ. ಬಾಹುಬಲಿಯನ್ನು ಕಟ್ಟಪ್ಪ ಕೊಲ್ಲುವ ದೃಶ್ಯವನ್ನು ಪ್ರಭಾಸ್‌ ಮತ್ತು ವರುಣ್‌ ಮರುಸೃಷ್ಟಿ ಮಾಡುವ ಮೂಲಕ ಸಿಕ್ಕಾಪಟ್ಟೆ ಟಾಕ್‌ ಕ್ರಿಯೇಟ್‌ ಮಾಡಿದ್ದಾರೆ.

#bahubali . Did only what #katappa did before this. #Prabhas is really cool and down to earth more power to him but iv got his sword now. pic.twitter.com/2EtAl98b1D — Varun Dhawan (@Varun_dvn) 20 June 2017 ಈ ಪೋಟೋವನ್ನು ವರುಣ್‌ ಧವನ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದೇ ತಡ, ಒಂದೇ ಗಂಟೆಯಲ್ಲಿ 800ಕ್ಕೂ ಹೆಚ್ಚು ರಿಟ್ವೀಟ್‌ ಮತ್ತು 3100 ಲೈಕ್ಸ್‌ಗಳು ಬಂದಿವೆ . ಫೋಟೋ ಜತೆ ಈ ಮೊದಲು ಕಟ್ಟಪ್ಪ ಮಾಡಿದ್ದನ್ನೇ ನಾನೂ ಮಾಡಿದ್ದೇನೆ. ಉತ್ತಮ ವ್ಯಕ್ತಿತ್ವವುಳ್ಳ ಪ್ರಭಾಸ್‌ ವಿನಮ್ರತೆಯಿಂದ ನಡೆದುಕೊಳ್ಳುತ್ತಾರೆ ಎಂದು ವರುಣ್‌ ಕೊಂಡಾಡಿದ್ದಾರೆ.

ಬಾಹುಬಲಿ ಪ್ರಭಾಸ್‌ ಮುಂಬೈನಲ್ಲಿ ವರುಣ್‌ ಧವನ್‌ರನ್ನು ಭೇಟಿ ಮಾಡಿದಾಗ ಕ್ಲಿಕ್ಕಿಸಿದ ಫೋಟೋ ಇದು. ಸದ್ಯಕ್ಕೆ ವರುಣ್‌, 'ಜುಡ್ವಾ 2' ಚಿತ್ರದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌