ಆ್ಯಪ್ನಗರ

ಕಾವೇರಿ ನದಿ ಉಳಿಸಿ ಅಭಿಯಾನಕ್ಕೆ ಸಾಥ್‌

ಕಾವೇರಿ ನದಿ ಉಳಿಸಿ ಅಭಿಯಾನಕ್ಕೆ ಸಾಥ್‌ ನೀಡಿದ ಸಲ್ಮಾನ್‌ ಕರ್ನಾಟಕದ ಜೀವನದಿ ಕಾವೇರಿ ನದಿ ಉಳಿಸಿ ಅಭಿಯಾನಕ್ಕೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಕೂಡಾ ಸಾಥ್‌ ನೀಡಿದ್ದಾರೆ...

Vijaya Karnataka Web 22 Aug 2017, 8:00 am

ಕರ್ನಾಟಕದ ಜೀವನದಿ ಕಾವೇರಿ ನದಿ ಉಳಿಸಿ ಅಭಿಯಾನಕ್ಕೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಕೂಡಾ ಸಾಥ್‌ ನೀಡಿದ್ದಾರೆ. ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತಾದ ಸಣ್ಣ ವಿಡಿಯೊ ದೃಶ್ಯಾವಳಿಯನ್ನು ಹಾಕಿರುವ ಅವರು, ಕಾವೇರಿ, ಗಂಗಾ, ಕೃಷ್ಣಾ, ನರ್ಮದಾ ಮುಂತಾದ ನಮ್ಮ ದೇಶದ ನದಿಗಳು ಸಾವಿರಾರು ವರ್ಷಗಳಿಂದ ನಮ್ಮನ್ನು ಉತ್ತಮವಾಗಿ ನೋಡಿಕೊಳ್ಳುತ್ತಿವೆ.

Vijaya Karnataka Web salman and rishi kapoor are supporting rally for rivers campaign
ಕಾವೇರಿ ನದಿ ಉಳಿಸಿ ಅಭಿಯಾನಕ್ಕೆ ಸಾಥ್‌


ಆದರೆ ಇತ್ತೀಚೆಗೆ ಅವು ಮಾನವ ಸಂಬಂಧಿ ಚಟುವಟಿಕೆಗಳಿಂದಾಗಿ ಬತ್ತಿ ಹೋಗುತ್ತಿವೆ. ಈ ನದಿಗಳೇ ನಮ್ಮ ದೇಶದ ಜೀವನಾಡಿಗಳು. ನದಿಗಳು ಇಲ್ಲದಿದ್ದರೆ ನಾವು ಇರುವುದಿಲ್ಲ. ಆದ್ದರಿಂದ ನಮಗಾಗಿ ನಮ್ಮ ನದಿಗಳನ್ನು ಉಳಿಸಿ ಎಂದು ಮನವಿ ಮಾಡಿದ್ದಾರೆ. ಈ ಕುರಿತ ರಾರ‍ಯಲಿಯಲ್ಲಿಯೂ ಪಾಲ್ಗೊಂಡಿರುವ ಅವರು ತಮ್ಮ ಅಭಿಮಾನಿಗಳಿಗೆ ಮತ್ತು ಫಾಲೋವರ್‌ಗಳಿಗೆ, ನಮ್ಮ ದೇಶದ ನದಿಗಳನ್ನು ಮುಂದಿನ ಪೀಳಿಗೆಗೆ ಉಳಿಸುವಂತೆ ಕರೆ ನೀಡಿದ್ದಾರೆ.

ಈ ನದಿ ಉಳಿಸಿ ಅಭಿಯಾನವನ್ನು ಮೊದಲ ಬಾರಿ ಆರಂಭಿಸಿದ್ದು ಅಧ್ಯಾತ್ಮಿಕ ಗುರುಗಳಾದ ಜಗ್ಗಿ ವಾಸುದೇವ ಅವರು. ರಾರ‍ಯಲಿ ಫಾರ್‌ ರಿವರ್ಸ್‌ ಎಂಬ ಹೆಸರಿನ ಅಭಿಯಾನ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗಿನ ನದಿಗಳನ್ನು ಉಳಿಸುವ ಗುರಿ ಹೊಂದಿದೆ. ಈ ಅಭಿಯಾನಕ್ಕೆ ನಟರಾದ ರಿಷಿ ಕಪೂರ್‌, ಅನುಪಮ್‌ ಖೇರ್‌, ಅರ್ಬಾಜ್‌ ಖಾನ್‌ ಮುಂತಾದವರೂ ಬೆಂಬಲ ನೀಡಿದ್ದಾರೆ.

'ನಮ್ಮ ದೇಶದ ನದಿಗಳು ಬತ್ತಿ ಹೋಗುತ್ತಿರುವುದನ್ನು ನೋಡಿದರೆ ಖೇದವೆನಿಸುತ್ತದೆ. ಇವುಗಳನ್ನು ಉಳಿಸುವುದು ನಮ್ಮ ಕರ್ತವ್ಯ. ನದಿ ಉಳಿಸಿ ಅಭಿಯಾನದಲ್ಲಿ ನೀವೂ ಪಾಲ್ಗೊಳ್ಳಿ.'

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌