ಆ್ಯಪ್ನಗರ

ಸಲ್ಮಾನ್‌ ಖಾನ್‌ ಹತ್ಯೆಗೆ ಸಂಚು ರೂಪಿಸಿದ್ದ ಶಾರ್ಪ್‌ಶೂಟರ್‌ ಬಂಧನ! ಲಾಕ್‌ಡೌನ್‌ನಿಂದ ಉಳಿಯಿತು ಸಲ್ಲು ಪ್ರಾಣ!

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದ ಶಾರ್ಪ್‌ಶೂಟರ್‌ನನ್ನು ಹರಿಯಾಣದಲ್ಲಿ ಬಂಧಿಸಲಾಗಿದೆ. ಬೇರೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆತ, ಸಲ್ಲು ಹತ್ಯೆಯ ಸಂಚಿನ ಬಗ್ಗೆ ಬಾಯಿಬಿಟ್ಟಿದ್ದಾನೆ.

Vijaya Karnataka Web 19 Aug 2020, 1:09 pm
ಸಲ್ಮಾನ್‌ ಖಾನ್‌ ಅವರನ್ನು ಹತ್ಯೆ ಮಾಡಬೇಕು ಎಂಬ ಕಾರಣಕ್ಕೆ ರಾಹುಲ್‌ ಎಂಬ ಶಾರ್ಪ್‌ಶೂಟರ್‌ ಜನವರಿ ತಿಂಗಳಲ್ಲೇ ಪ್ಲ್ಯಾನ್‌ ಮಾಡಿದ್ದ. ಆದಕ್ಕಾಗಿ ಮುಂಬೈಗೆ ಬಂದಿದ್ದ ಆತ ಸಲ್ಮಾನ್ ಖಾನ್‌ರ ಅಪಾರ್ಟ್‌ಮೆಂಟ್‌ ಬಳಿಕ ತಿರುಗಾಡಿ ಅವರ ಚಲನಚಲನ ಅಧ್ಯಯನ ಮಾಡಿದ್ದ. ಆದರೆ ನಂತರದ ದಿನಗಳಲ್ಲಿ ಲಾಕ್‌ಡೌನ್‌ ಜಾರಿ ಆಗಿದ್ದರಿಂದ ಹತ್ಯೆ ಮಾಡಲು ಸಾಧ್ಯವಾಗಿಲ್ಲ ಎಂಬ ವಿಚಾರ ಈಗ ಬಯಲಾಗಿದೆ.
Vijaya Karnataka Web salman khan assassination bid faridabad police arrested sharpshooter
ಸಲ್ಮಾನ್‌ ಖಾನ್‌ ಹತ್ಯೆಗೆ ಸಂಚು ರೂಪಿಸಿದ್ದ ಶಾರ್ಪ್‌ಶೂಟರ್‌ ಬಂಧನ! ಲಾಕ್‌ಡೌನ್‌ನಿಂದ ಉಳಿಯಿತು ಸಲ್ಲು ಪ್ರಾಣ!


ಹರಿಯಾಣದಲ್ಲಿ ಸಕ್ರಿಯವಾಗಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಕಡೆಯವನೇ ಈ ಶಾರ್ಪ್‌ಶೂಟರ್‌ ರಾಹುಲ್‌ ಎಂಬುದು ಗೊತ್ತಾಗಿದೆ. ಕೃಷ್ಣಮೃಗ ಭೇಟಿ ಪ್ರಕರಣದ ಹಿನ್ನೆಲೆಯಲ್ಲಿ ಲಾರೆನ್ಸ್‌ ಬಿಷ್ಣೋಯಿ ಮತ್ತು ಸಲ್ಮಾನ್‌ ಖಾನ್‌ ನಡುವೆ ದ್ವೇಷ ಮೂಡಿತ್ತು. ಅದೇ ಕಾರಣಕ್ಕಾಗಿ ಸಲ್ಮಾನ್‌ರನ್ನು ಹತ್ಯೆ ಮಾಡಲು ಶಾರ್ಪ್‌ಶೂಟರ್‌ ರಾಹುಲ್‌ಗೆ ಲಾರೆನ್ಸ್‌ ಬಿಷ್ಣೋಯಿ ಆದೇಶಿಸಿದ್ದ ಎನ್ನಲಾಗಿದೆ.

ಫರಿದಾಬಾದ್‌ನ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದ ರಾಹುಲ್‌ನನ್ನು ಆ.15ರಂದು ಉತ್ತರಖಂಡದಲ್ಲಿ ಬಂಧಿಸಲಾಯಿತು. ಆ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ಸಲ್ಮಾನ್‌ ಹತ್ಯೆಯ ಸಂಚಿನ ಬಗ್ಗೆ ಆತ ಬಾಯಿ ಬಿಟ್ಟಿದ್ದಾನೆ. ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಆದೇಶದಂತೆ ಈಗಾಗಲೇ ನಾಲ್ಕು ಜನರನ್ನು ರಾಹುಲ್‌ ಹತ್ಯೆ ಮಾಡಿದ್ದಾನೆ! ಪ್ರಸ್ತುತ ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

also read: ಬೆಟ್ಟದಷ್ಟು ಅನುಮಾನ ಇದ್ದರೂ ಸುಶಾಂತ್‌ ಸಾವಿನ ವಿಚಾರಣೆಯಿಂದ ಸಲ್ಮಾನ್‌ ಖಾನ್‌ ಸೇಫ್‌!

ಈ ಶಾಕಿಂಗ್‌ ಸಂಗತಿ ಹೊರಬಂದ ಬಳಿಕ ಸಲ್ಮಾನ್‌ ಖಾನ್‌ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿದೆ. ಮೂಲಗಳ ಪ್ರಕಾರ ರಾಹುಲ್‌ನ ಬಂಧನದ ನಂತರ ಸಲ್ಮಾನ್‌ ಖಾನ್‌ಗೆ ಭದ್ರತೆ ಹೆಚ್ಚಿಸಲು ಪೊಲೀಸರು ನಿರ್ಧರಿಸಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಸಲ್ಲು ಕಾಲ ಕಳೆದಿದ್ದರು. ಈಗ ಅವರು ಹಿಂದಿ ಬಿಗ್‌ ಬಾಸ್‌ ನಿರೂಪಣೆಯ ತಯಾರಿಯಲ್ಲಿದ್ದಾರೆ. ಅದಕ್ಕಾಗಿ ಪ್ರೋಮೋ ಚಿತ್ರೀಕರಣ ಕೂಡ ನಡೆದಿದೆ.

also read: ಅಂದು ಸುಳ್ಳು ಎಂದವರಿಗೆ ಇಂದು ಸತ್ಯದ ದರ್ಶನ ಮಾಡಿಸಿದ ಸಲ್ಮಾನ್ ಖಾನ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌