ಆ್ಯಪ್ನಗರ

ಚಿತ್ರಮಂದಿರಗಳ ಉಳಿವಿಗಾಗಿ ದೊಡ್ಡ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್!

ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಅವರ 'ದಬಂಗ್ 3' ಚಿತ್ರವು ಹೇಳಿಕೊಳ್ಳುವಂತಹ ಗೆಲುವು ಪಡೆಯಲಿಲ್ಲ. ಆನಂತರ ಅವರ ಫ್ಯಾನ್ಸ್‌ ಗಮನ 'ರಾಧೆ' ಚಿತ್ರದ ಮೇಲಿತ್ತು. ಇದೀಗ ಆ ಸಿನಿಮಾದ ಬಗ್ಗೆ ದೊಡ್ಡ ಅಪ್‌ಡೇಟ್ ಸಿಕ್ಕಿದೆ.

Vijaya Karnataka Web 19 Jan 2021, 9:24 pm

ಹೈಲೈಟ್ಸ್‌:

  • ಸಲ್ಮಾನ್ ಖಾನ್‌ ನಟನೆಯ ಹೊಸ ಸಿನಿಮಾ 'ರಾಧೆ'
  • ಚಿತ್ರಮಂದಿರದ ಮಾಲೀಕರಿಗಾಗಿ ಸಲ್ಲು ಧೃಡ ನಿರ್ಧಾರ
  • ಈದ್‌ ಪ್ರಯುಕ್ತ ರಿಲೀಸ್ ಆಗಲಿದೆ ರಾಧೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Salman Khan
ಎಲ್ಲ ಅಂದುಕೊಂಡಂತೆ ಆಗಿದ್ದರೆ ನಟ ಸಲ್ಮಾನ್‌ ಖಾನ್‌ ಅವರ 'ರಾಧೆ: ಯುವರ್ ಮೋಸ್ಟ್‌ ವಾಂಟೆಡ್ ಭಾಯ್‌' ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ, ಕೊರೊನಾ ವೈರಸ್ ಕಾಟದಿಂದಾಗಿ ಸಿನಿಮಾವನ್ನು ಸರಿಯಾದ ಸಮಯಕ್ಕೆ ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ, 2020ರ ಈದ್ ಹಬ್ಬದಂದು ಈ ಸಿನಿಮಾವನ್ನು ವಿಶ್ವಾದ್ಯಂತ ತೆರೆಗೆ ತರುವುದಕ್ಕೆ ಸಲ್ಲು ಪ್ಲ್ಯಾನ್ ಮಾಡಿಕೊಂಡಿದ್ದರು. ಸದ್ಯ ಅವರೀಗ 'ರಾಧೆ' ಚಿತ್ರದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಶೇ.50 ಆಸನ ಭರ್ತಿಗೆ ಮಾತ್ರ ಸರ್ಕಾರ ಅವಕಾಶ ನೀಡಿದ್ದರೂ, ಸಲ್ಮಾನ್ ಮಾತ್ರ ಧೈರ್ಯದಿಂದ ಸಿನಿಮಾ ರಿಲೀಸ್ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದ ಹಿಂದೆ ಚಿತ್ರಮಂದಿರಗಳ ಮೇಲಿನ ಕಾಳಜಿ ಇದೆ ಅನ್ನೋದು ವಿಶೇಷ.
ಥಿಯೇಟರ್‌ನಲ್ಲೇ ರಾಧೆ ರಿಲೀಸ್‌
'ಕ್ಷಮಿಸಿ, ಥಿಯೇಟರ್ ಮಾಲೀಕರಿಗೆ ಪ್ರತಿಕ್ರಿಯಿಸಲು ಬಹಳ ಸಮಯ ಹಿಡಿಯಿತು. ಈ ಸಮಯದಲ್ಲಿ ಇಂಥದ್ದೊಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ನಿಜಕ್ಕೂ ಸವಾಲೇ ಸರಿ. ಆದರೆ, ನನಗೆ ಚಿತ್ರಮಂದಿರಗಳ ಮಾಲೀಕರ ಹಾಗೂ ವಿತಕರು ಆರ್ಥಿಕ ಸಮಸ್ಯೆಗಳ ಕುರಿತು ತಿಳಿದಿದೆ. ಹಾಗಾಗಿ, ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ನನ್ನ ನಟನೆಯ 'ರಾಧೆ' ಸಿನಿಮಾವನ್ನು ಥಿಯೇಟರ್‌ಗಳಲ್ಲೇ ಬಿಡುಗಡೆ ಮಾಡಬೇಕೆಂದು ನಿರ್ಧಾರ ಮಾಡಿದ್ದೇನೆ' ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಕೆಲವರು ಓಟಿಟಿಯತ್ತ ಮುಖ ಮಾಡುತ್ತಿರುವ ಈ ಸಂದರ್ಭದಲ್ಲಿ ಸಲ್ಮಾನ್‌ರ ಈ ನಿರ್ಧಾರ ಚಿತ್ರಮಂದಿರಗಳ ಮಾಲೀಕರಿಗೆ ಖುಷಿ ನೀಡಿದೆ.

ಮುನ್ನೆಚ್ಚರಿಕೆ ಅಗತ್ಯ
ಇನ್ನು, ಸಿನಿಮಾ ವೀಕ್ಷಣೆ ಮಾಡಲು ಬರುವ ಪ್ರೇಕ್ಷಕರ ಬಗ್ಗೆಯೂ ಸಲ್ಮಾನ್ ಕಾಳಜಿ ತೋರಿದ್ದಾರೆ. 'ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಹೆಚ್ಚಿನ ಕಾಳಜಿ ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಈ ಸಿನಿಮಾ ಮುಂದಿನ ಈದ್ ಹಬ್ಬದಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಆನಂದಿಸಿ' ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸಲ್ಮಾನ್ ಖಾನ್‌ ಬರೆದುಕೊಂಡಿದ್ದಾರೆ. 'ವಾಂಟೆಡ್', 'ದಬಂಗ್ 3' ನಂತರ ನಿರ್ದೇಶಕ ಪ್ರಭುದೇವ ಜೊತೆ ಸಲ್ಮಾನ್ ಖಾನ್ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ.

ಸಲ್ಮಾನ್‌ ಖಾನ್‌ ಹತ್ಯೆಗೆ ಸಂಚು ರೂಪಿಸಿದ್ದ ಶಾರ್ಪ್‌ಶೂಟರ್‌ ಬಂಧನ! ಲಾಕ್‌ಡೌನ್‌ನಿಂದ ಉಳಿಯಿತು ಸಲ್ಲು ಪ್ರಾಣ!

ರಿಲೀಸ್ ಡೇಟ್ ಘೋಷಣೆ ಮಾಡಿದ ಮೊದಲ ಹಿಂದಿ ಸಿನಿಮಾ
ಲಾಕ್‌ಡೌನ್‌ ನಂತರ ದಕ್ಷಿಣ ಭಾರತ ಚಿತ್ರರಂಗ ದೊಡ್ಡದಾಗಿ ಎದ್ದು ನಿಂತಿದೆ. ಈಗಾಗಲೇ 'ಮಾಸ್ಟರ್', 'ಕ್ರ್ಯಾಕ್‌', 'ಸೋಲೋ ಬ್ರದುಕೇ ಸೋ ಬೆಟರ್' ಸಿನಿಮಾಗಳು ಉತ್ತಮ ಗಳಿಕೆ ಮಾಡುತ್ತಿವೆ. ಯುವರತ್ನ, ಪೊಗರು, ರಾಬರ್ಟ್ ಸಿನಿಮಾಗಳು ರಿಲೀಸ್‌ ಡೇಟ್ ಘೋಷಣೆ ಮಾಡಿವೆ. ಆದರೆ, ಈವರೆಗೂ ಬಾಲಿವುಡ್‌ನ ಯಾವ ದೊಡ್ಡ ಸಿನಿಮಾ ಕೂಡ ರಿಲೀಸ್ ಡೇಟ್ ಘೋಷಣೆ ಮಾಡಿರಲಿಲ್ಲ. ಇದೀಗ ಸಲ್ಮಾನ್ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸೂರ್ಯವಂಶಿ, 83 ಮುಂತಾದ ಸಿನಿಮಾಗಳು ಸರದಿಯಲ್ಲಿವೆ.

ಬೆಟ್ಟದಷ್ಟು ಅನುಮಾನ ಇದ್ದರೂ ಸುಶಾಂತ್‌ ಸಾವಿನ ವಿಚಾರಣೆಯಿಂದ ಸಲ್ಮಾನ್‌ ಖಾನ್‌ ಸೇಫ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌