ಬೆಟ್ಟದಷ್ಟು ಅನುಮಾನ ಇದ್ದರೂ ಸುಶಾಂತ್ ಸಾವಿನ ವಿಚಾರಣೆಯಿಂದ ಸಲ್ಮಾನ್ ಖಾನ್ ಸೇಫ್!
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಮುಂಬೈ ಪೊಲೀಸರು ಹೇಳಿಕೆ ನೀಡಿರುವುದು ಎಲ್ಲರ ಅಚ್ಚರಿಗೆ ಕಾರಣ ಆಗಿದೆ.
Vijaya Karnataka Web 15 Jul 2020, 2:38 pm
ಮುಂಬೈನ ತಮ್ಮ ಅಪಾರ್ಟ್ಮೆಂಟ್ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಜೂ.14ರಂದು ಆತ್ಮಹತ್ಯೆ ಮಾಡಿಕೊಂಡರು. ಆ ಘಟನೆ ನಂತರ ಬಾಲಿವುಡ್ನ ಅನೇಕರ ಮೇಲೆ ಅನುಮಾನ ಮೂಡಿತು. ಸುಶಾಂತ್ ಇಂಥ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದರ ಹಿಂದೆ ಯಾರ ಕೈವಾಡ ಇರಬಹುದು ಎಂಬ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಯಿತು. ಅದರಲ್ಲಿ ಸಲ್ಮಾನ್ ಖಾನ್ ಹೆಸರು ಕೂಡ ಕೇಳಿಬಂದಿತ್ತು.
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಸಾಕಷ್ಟು ಜನರನ್ನು ಮುಂಬೈ ಪೊಲೀಸರು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದಾರೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ರಿಯಾ ಚಕ್ರವರ್ತಿ, ಅಂಕಿತಾ ಲೋಖಂಡೆ, ಸಂಜನಾ ಸಂಘಿ ಸೇರಿದಂತೆ ಅನೇಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಸುಶಾಂತ್ ಅಭಿಮಾನಿಗಳ ವಲಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಎಲ್ಲರಿಗೂ ಗೊತ್ತಿರುವಂತೆ ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಅವರ ಪ್ರಾಬಲ್ಯ ಜೋರಾಗಿಯೇ ಇದೆ. ಹಿಂದಿ ಚಿತ್ರರಂಗದ ವ್ಯಾಪಾರ ವಹಿವಾಟಿನ ಮೇಲೆ ಅವರು ಹಿಡಿತ ಇಟ್ಟುಕೊಂಡಿದ್ದಾರೆ. ಸುಶಾಂತ್ಗೆ ಎಷ್ಟೋ ಸಿನಿಮಾಗಳು ತಪ್ಪಿಹೋಗಲು ಸಲ್ಮಾನ್ ಕಾರಣ ಎಂಬ ಆರೋಪ ಕೂಡ ಇದೆ. ಹಾಗಿದ್ದರೂ ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಹಿಂದೇಟು ಹಾಕಿರುವುದು ಅಚ್ಚರಿಗೆ ಕಾರಣ ಆಗಿದೆ. ಕೆಲವೇ ದಿನಗಳ ಹಿಂದೆ ಸಲ್ಮಾನ್ ಖಾನ್ರ ಮಾಜಿ ಮ್ಯಾನೇಜರ್ ರೇಷ್ಮಾ ಶೆಟ್ಟಿ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಸಲ್ಲು ಕೂಡ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು.
also read: ನನ್ನ ಮಗಳ ಸಾವಿನ ಪ್ರಕರಣ ಮುಚ್ಚಿಹಾಕಿದ್ದೇ ಸಲ್ಮಾನ್ ಖಾನ್; ನಟಿ ಜಿಯಾ ಖಾನ್ ತಾಯಿ ಆರೋಪ!
ಸಲ್ಮಾನ್ ಖಾನ್ ಮೇಲೆ ಇರುವ ಆರೋಪಗಳು ಒಂದೆರಡಲ್ಲ. ಸುಶಾಂತ್ ನಿಧನದ ನಂತರ ಬಾಲಿವುಡ್ನಲ್ಲಿ ಒಂದು ಬಗೆಯ ಆಂದೋಲನವೇ ಶುರು ಆಗಿದೆ. ಇಷ್ಟು ದಿನಗಳ ಕಾಲ ಅನ್ಯಾಯ ಸಹಿಸಿಕೊಂಡಿದ್ದ ಅನೇಕರು ತಮ್ಮ ನೋವನ್ನು ಈಗ ಹೊರಹಾಕುತ್ತಿದ್ದಾರೆ. ಇತ್ತೀಚೆಗೆ 'ದಬಂಗ್' ಸಿನಿಮಾ ನಿರ್ದೇಶಕ ಅಭಿನವ್ ಕಶ್ಯಪ್ ಕೂಡ ಸಲ್ಮಾನ್ ಕುಟುಂಬದ ವಿರುದ್ಧ ಸರಣಿ ಆರೋಪ ಮಾಡಿದ್ದರು. ತಮಗೆ ಸತತ 10 ವರ್ಷಗಳಿಂದ ಸಲ್ಮಾನ್ ಕುಟುಂಬದವರು ಹೇಗೆಲ್ಲ ಕಿರುಕುಳ ಕೊಡುತ್ತಿದ್ದಾರೆ ಎಂಬುದನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ವಿವರಿಸಿದ್ದರು.
also read: ಸತ್ತ ಮೇಲೂ ದಾಖಲೆ ಬರೆಯುವುದು ನಿಲ್ಲಿಸಿಲ್ಲ ಸುಶಾಂತ್! ಇದು ಹಾಲಿವುಡ್ ಮಂದಿಗೂ ಸಾಧ್ಯವಾಗಿಲ್ಲ!
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಸಾಕಷ್ಟು ಜನರನ್ನು ಮುಂಬೈ ಪೊಲೀಸರು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದಾರೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ರಿಯಾ ಚಕ್ರವರ್ತಿ, ಅಂಕಿತಾ ಲೋಖಂಡೆ, ಸಂಜನಾ ಸಂಘಿ ಸೇರಿದಂತೆ ಅನೇಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಸುಶಾಂತ್ ಅಭಿಮಾನಿಗಳ ವಲಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಎಲ್ಲರಿಗೂ ಗೊತ್ತಿರುವಂತೆ ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಅವರ ಪ್ರಾಬಲ್ಯ ಜೋರಾಗಿಯೇ ಇದೆ. ಹಿಂದಿ ಚಿತ್ರರಂಗದ ವ್ಯಾಪಾರ ವಹಿವಾಟಿನ ಮೇಲೆ ಅವರು ಹಿಡಿತ ಇಟ್ಟುಕೊಂಡಿದ್ದಾರೆ. ಸುಶಾಂತ್ಗೆ ಎಷ್ಟೋ ಸಿನಿಮಾಗಳು ತಪ್ಪಿಹೋಗಲು ಸಲ್ಮಾನ್ ಕಾರಣ ಎಂಬ ಆರೋಪ ಕೂಡ ಇದೆ. ಹಾಗಿದ್ದರೂ ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಹಿಂದೇಟು ಹಾಕಿರುವುದು ಅಚ್ಚರಿಗೆ ಕಾರಣ ಆಗಿದೆ. ಕೆಲವೇ ದಿನಗಳ ಹಿಂದೆ ಸಲ್ಮಾನ್ ಖಾನ್ರ ಮಾಜಿ ಮ್ಯಾನೇಜರ್ ರೇಷ್ಮಾ ಶೆಟ್ಟಿ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಸಲ್ಲು ಕೂಡ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು.
also read: ನನ್ನ ಮಗಳ ಸಾವಿನ ಪ್ರಕರಣ ಮುಚ್ಚಿಹಾಕಿದ್ದೇ ಸಲ್ಮಾನ್ ಖಾನ್; ನಟಿ ಜಿಯಾ ಖಾನ್ ತಾಯಿ ಆರೋಪ!
ಸಲ್ಮಾನ್ ಖಾನ್ ಮೇಲೆ ಇರುವ ಆರೋಪಗಳು ಒಂದೆರಡಲ್ಲ. ಸುಶಾಂತ್ ನಿಧನದ ನಂತರ ಬಾಲಿವುಡ್ನಲ್ಲಿ ಒಂದು ಬಗೆಯ ಆಂದೋಲನವೇ ಶುರು ಆಗಿದೆ. ಇಷ್ಟು ದಿನಗಳ ಕಾಲ ಅನ್ಯಾಯ ಸಹಿಸಿಕೊಂಡಿದ್ದ ಅನೇಕರು ತಮ್ಮ ನೋವನ್ನು ಈಗ ಹೊರಹಾಕುತ್ತಿದ್ದಾರೆ. ಇತ್ತೀಚೆಗೆ 'ದಬಂಗ್' ಸಿನಿಮಾ ನಿರ್ದೇಶಕ ಅಭಿನವ್ ಕಶ್ಯಪ್ ಕೂಡ ಸಲ್ಮಾನ್ ಕುಟುಂಬದ ವಿರುದ್ಧ ಸರಣಿ ಆರೋಪ ಮಾಡಿದ್ದರು. ತಮಗೆ ಸತತ 10 ವರ್ಷಗಳಿಂದ ಸಲ್ಮಾನ್ ಕುಟುಂಬದವರು ಹೇಗೆಲ್ಲ ಕಿರುಕುಳ ಕೊಡುತ್ತಿದ್ದಾರೆ ಎಂಬುದನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ವಿವರಿಸಿದ್ದರು.
also read: ಸತ್ತ ಮೇಲೂ ದಾಖಲೆ ಬರೆಯುವುದು ನಿಲ್ಲಿಸಿಲ್ಲ ಸುಶಾಂತ್! ಇದು ಹಾಲಿವುಡ್ ಮಂದಿಗೂ ಸಾಧ್ಯವಾಗಿಲ್ಲ!