ಆ್ಯಪ್ನಗರ

ಸುಶಾಂತ್‌ ಸಾವನ್ನು ವೈಯಕ್ತಿಕ ದ್ವೇಷಕ್ಕಾಗಿ ಬಳಸಿಕೊಂಡ ನಟಿ ಯಾರು? ಕೇಳಿಬಂತು ಗಂಭೀರ ಆರೋಪ!

ಸುಶಾಂತ್‌ ಸಿಂಗ್‌ ರಜಪೂತ್‌ ನಿಧನದ ಬಳಿಕ ಆ ದುರ್ಘಟನೆಯನ್ನೇ ಇಟ್ಟುಕೊಂಡು ನಟಿಯೊಬ್ಬರು ತಮ್ಮ ಸ್ವಾರ್ಥ ಸಾಧನೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಹೊರಿಸಿದ್ದಾರೆ ನಟ ಸಮೀರ್‌ ಸೋನಿ!

Vijaya Karnataka Web 20 Jul 2020, 4:03 pm
ಬಾಲಿವುಡ್‌ನ ಪ್ರತಿಭಾವಂತ ಕಲಾವಿದ ಸುಶಾಂತ್‌ ಸಿಂಗ್ ರಜಪೂತ್‌ ನಿಧನದಿಂದ ಅಭಿಮಾನಿಗಳಿಗೆ ಹೇಳಲಾರದಷ್ಟು ದುಃಖ ಆಗಿದೆ ನಿಜ. ಅವರು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುದು ಸದ್ಯಕ್ಕಂತೂ ನಿಗೂಢ. ಈ ದುರ್ಘಟನೆ ನಡೆದ ಬಳಿಕ ಬಾಲಿವುಡ್‌ ಅಂಗಳದಲ್ಲಿ ಅನೇಕ ಹುಳುಕುಗಳು ಹೊರ ಬಂದಿವೆ. ಸಾಕಷ್ಟು ಜನರ ಬಣ್ಣ ಬಯಲಾಗುತ್ತಿದೆ.
Vijaya Karnataka Web samir soni says kangana ranaut is using sushant singh rajput case to settle personal scores
ಸುಶಾಂತ್‌ ಸಾವನ್ನು ವೈಯಕ್ತಿಕ ದ್ವೇಷಕ್ಕಾಗಿ ಬಳಸಿಕೊಂಡ ನಟಿ ಯಾರು? ಕೇಳಿಬಂತು ಗಂಭೀರ ಆರೋಪ!


ಸುಶಾಂತ್‌ ಮನೆಯವರೇ ಈ ವಿಚಾರದಲ್ಲಿ ಸೈಲೆಂಟ್‌ ಆಗಿದ್ದಾರೆ. ಆದರೆ ಹಿಂದಿ ಚಿತ್ರರಂಗದ ಕೆಲವರು ಅಗತ್ಯಕ್ಕಿಂತಲೂ ಹೆಚ್ಚಾಗಿ ಮೂಗು ತೂರಿಸುತ್ತಿದ್ದಾರೆ ಎಂಬ ಅಭಿಪ್ರಾಯ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಅದರಲ್ಲೂ ನಟ ಶೇಖರ್‌ ಸುಮನ್‌, ನಟಿ ಕಂಗನಾ ರಣಾವತ್‌ ಮುಂತಾದವರು ಈ ವಿಚಾರವನ್ನು ಇಟ್ಟುಕೊಂಡು ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆ ಮಾಡುತ್ತಿದ್ದಾರೆ ಎಂದು ನಟ ಸಮೀರ್‌ ಸೋನಿ ಆರೋಪಿಸಿದ್ದಾರೆ.

2008ರಲ್ಲಿ ಬಂದ 'ಫ್ಯಾಷನ್‌' ಸಿನಿಮಾದಲ್ಲಿ ಕಂಗನಾ ರಣಾವತ್‌ ಮತ್ತು ಸಮೀರ್‌ ಸೋನಿ ನಟಿಸಿದ್ದರು. ಈಗ ತಮ್ಮ ಸಹ-ನಟಿ ವಿರುದ್ಧವೇ ಸಮೀರ್‌ ಗರಂ ಆಗಿ ಮಾತನಾಡಿದ್ದಾರೆ. 'ಇದನ್ನು ನಾನು ಈ ಮುಂಚೆಯೂ ಹೇಳಿದ್ದೆ. ಸುಶಾಂತ್‌ ಸಾವು ಒಂದು ದುರಂತ. ಅದಕ್ಕೆ ನ್ಯಾಯ ಸಲ್ಲಬೇಕು. ಆದರೆ ಇದೇ ವಿಚಾರವನ್ನು ತಮ್ಮ ವೈಯಕ್ತಿಕ ದ್ವೇಷಕ್ಕಾಗಿ ಬಳಸಿಕೊಳ್ಳುವವರಿಗೆ (ಕಂಗನಾ ಸೇರಿದಂತೆ) ನನ್ನ ವಿರೋಧವಿದೆ. ಇದು ಖಂಡನೀಯ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಮೀರ್‌ ಸೋನಿ ಮಾಡಿದ್ದರು.

also read: ಪದ್ಮಶ್ರೀ ಪ್ರಶಸ್ತಿ ವಾಪಸ್‌ ನೀಡಲು ಮುಂದಾದ ನಟಿ ಕಂಗನಾ! ಇದಕ್ಕೆ ಕಾರಣ ಸುಶಾಂತ್‌ ಪ್ರಕರಣ!

ಅದರೆ ಅದೇನಾಯಿತೋ ಗೊತ್ತಿಲ್ಲ. ಕೆಲವೇ ಸಮಯದ ಬಳಿಕ ಅವರು ಆ ಫೋಸ್ಟ್‌ ಡಿಲಿಟ್‌ ಮಾಡಿದ್ದಾರೆ. ಇದು ಅನೇಕರ ಅನುಮಾನಕ್ಕೆ ಕಾರಣ ಆಗಿದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಕಂಗನಾ, ಬಾಲಿವುಡ್‌ನ ಹಲವರ ವಿರುದ್ಧ ಗುಡುಗಿದ್ದರು. ತಾವು ಮಾಡುತ್ತಿರುವ ಆರೋಪ ಸುಳ್ಳಾದರೆ ತಮಗೆ ಸಿಕ್ಕಿರುವ ಪದ್ಮಶ್ರೀ ಪ್ರಶಸ್ತಿ ವಾಪಸ್‌ ನೀಡಲು ಸಹ ಸಿದ್ಧ ಎಂದು ಅವರು ಹೇಳಿದ್ದರು. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಸುಶಾಂತ್‌ ಸಾವಿನ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.

also read: ಸುಶಾಂತ್‌ ಸಿಂಗ್‌ ರಜಪೂತ್‌ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರು ಎರಚಿದ ಗೃಹ ಸಚಿವರ ಹೇಳಿಕೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌