ಆ್ಯಪ್ನಗರ

ಮಾಧುರಿ ದೀಕ್ಷಿತ್‌ಗಾಗಿ 16 ದಿನ ಡ್ಯಾನ್ಸ್ ಪ್ರಾಕ್ಟೀಸ್‌ ಮಾಡಿದ್ದ ಸಂಜಯ್ ದತ್‌!

ನಟ ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ಅವರದ್ದು ಬಾಲಿವುಡ್‌ನಲ್ಲಿ ಹಿಟ್ ಜೋಡಿ. ಅನೇಕ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿ, ಗಮನಸೆಳೆದಿದ್ದಾರೆ. ಇದೀಗ ಸಂಜಯ್-ಮಾಧುರಿ ಕುರಿತ ಆಸಕ್ತಿಕರ ವಿಚಾರವೊಂದು ಹೊರಬಿದ್ದಿದೆ.

Vijaya Karnataka Web 16 Aug 2020, 3:52 pm
ಬಾಲಿವುಡ್ ನಟ ಸಂಜಯ್ ದತ್ ಹಾಗೂ ನಟಿ ಮಾಧುರಿ ದೀಕ್ಷಿತ್‌ ಅವರದ್ದು ಸೂಪರ್ ಹಿಟ್ ಜೋಡಿ. 80-90 ದಶಕದಲ್ಲಿ ಇವರಿಬ್ಬರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಅವರು ಒಟ್ಟಿಗೆ ನಟಿಸಿದ್ದ ಬಹುತೇಕ ಸಿನಿಮಾಗಳು ಹಿಟ್ ಆಗಿದ್ದರಿಂದ, ಇಬ್ಬರ ಕುರಿತು ಅನೇಕ ಗಾಸಿಪ್‌ಗಳು ಕೂಡ ಹರಿದಾಡುತ್ತಿದ್ದವು. ಸಂಜು-ಮಾಧುರಿ ಮದುವೆ ಆಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಹೀಗಿರುವಾಗ ಒಂದು ವಿಚಾರದಲ್ಲಿ ಮಾಧುರಿ ಬಗ್ಗೆ ಸಂಜಯ್‌ಗೆ ಸಿಕ್ಕಾಪಟ್ಟೆ ಭಯ ಇತ್ತಂತೆ!
Vijaya Karnataka Web sanjay dutt was scared to dance with madhuri dixit in tamma tamma loge song
ಮಾಧುರಿ ದೀಕ್ಷಿತ್‌ಗಾಗಿ 16 ದಿನ ಡ್ಯಾನ್ಸ್ ಪ್ರಾಕ್ಟೀಸ್‌ ಮಾಡಿದ್ದ ಸಂಜಯ್ ದತ್‌!


ಮಾಧುರಿ ಜೊತೆ ಡ್ಯಾನ್ಸ್ ಮಾಡೋಕೆ ಸಂಜುಗೆ ಭಯ
ಎಲ್ಲರಿಗೂ ತಿಳಿದಿರುವಂತೆ ಬಾಲಿವುಡ್‌ನಲ್ಲಿ ಮಾಧುರಿ ದೀಕ್ಷಿತ್‌ ಡ್ಯಾನ್ಸ್‌ ಕ್ವೀನ್ ಆಗಿ ಮೆರೆದವರು. ತೆರೆಮೇಲೆ ಅವರ ಡ್ಯಾನ್ಸ್ ನೋಡಲಿಕ್ಕಾಗಿಯೇ ಅಭಿಮಾನಿಗಳು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದರು. ಅವರೊಂದಿಗೆ ತೆರೆಹಂಚಿಕೊಂಡ ಮೇಲೆ ಸಹಜವಾಗಿ, ಆ ಹೀರೋ ಕೂಡ ಮಾಧುರಿಗೆ ಸರಿಸಮನಾಗಿ ಡ್ಯಾನ್ಸ್ ಮಾಡಲೇಬೇಕಿತ್ತು. ಆದರೆ, ಇದೇ ಸಂಜಯ್‌ಗೆ ಒಮ್ಮೆ ಸಿಕ್ಕಾಪಟ್ಟೆ ಹೆದರಿಕೆ ಹುಟ್ಟಿಸಿತ್ತಂತೆ!

ಒಂದು ಹಾಡಿಗಾಗಿ 16 ದಿವಸ ಪ್ರಾಕ್ಟೀಸ್ ಮಾಡಿದ ಸಂಜು
1990ರಲ್ಲಿ ತೆರೆಕಂಡ 'ತಾನೆದಾರ್‌' ಚಿತ್ರದಲ್ಲಿ ಸಂಜು ಮತ್ತು ಮಾಧುರಿ ಒಟ್ಟಾಗಿ ನಟಿಸಿದ್ದರು. ಆ ಚಿತ್ರದ 'ತಮ್ಮ ತಮ್ಮ ಲೋಗೆ..' ಹಾಡು ಯಾರಿಗೆ ತಾನೇ ನೆನಪಿಲ್ಲ ಹೇಳಿ? ಸಖತ್ ಹಿಟ್ ಆಗಿದ್ದ ಆ ಪಾರ್ಟಿ ಸಾಂಗ್‌ನಲ್ಲಿ ಸಂಜು ಮತ್ತು ಮಾಧುರಿ ಭರ್ಜರಿ ಸ್ಟೆಪ್ ಹಾಕಿದ್ದರು. ಆದರೆ, ಸಂಜು ಅಷ್ಟು ಅಧ್ಬುತವಾಗಿ ಡ್ಯಾನ್ಸ್ ಮಾಡುವುದರ ಹಿಂದೆ 16 ದಿವಸಗಳ ತರಬೇತಿ ಇತ್ತಂತೆ. ಹೌದು, ಮಾಧುರಿಗೆ ಸರಿಸಮನಾಗಿ ಹೆಜ್ಜೆ ಹಾಕಲು ಸಾಧ್ಯವಾಗುತ್ತದೋ, ಇಲ್ಲವೋ ಎಂಬ ಭಯದಲ್ಲಿ ಸತತ 16 ದಿನ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದರಂತೆ ನಟ ಸಂಜಯ್‌. ಆನಂತರವೇ ಅವರ ಸೆಟ್‌ಗೆ ಬಂದು ಶೂಟಿಂಗ್‌ನಲ್ಲಿ ಭಾಗವಹಿಸಿದ್ದು.

ತಮಿಳಿನ ರಿಮೇಕ್ 'ತಾನೆದಾರ್'
ರಜನಿಕಾಂತ್ ನಟಿಸಿದ್ದ 'ಅನ್ಬುಕ್ಕು ನಾನ್‌ ಅಡಿಮೈ' ಚಿತ್ರದ ರಿಮೇಕ್ ಆಗಿದ್ದ 'ತಾನೆದಾರ್' ಚಿತ್ರದಲ್ಲಿ ಸಂಜಯ್‌ ಜೊತೆಗೆ ಜೀತೇಂದ್ರ, ಜಯಪ್ರದಾ ಕೂಡ ನಟಿಸಿದ್ದರು. ರಾಜ್ ಎನ್. ಸಿಪ್ಪಿ ನಿರ್ದೇಶನ ಮಾಡಿದ್ದ 'ತಾನೆದಾರ್‌' ಚಿತ್ರವು ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದ ಕಲೆಕ್ಷನ್‌ ಮಾಡಿತ್ತು. 'ತಮ್ಮ ತಮ್ಮ ಲೋಗೆ..' ಹಾಡು ಯಾವಮಟ್ಟಕ್ಕೆ ಹಿಟ್ ಆಗಿತ್ತೆಂದರೆ, 2017ರಲ್ಲಿ ತೆರೆಕಂಡ ವರುಣ್ ಧವನ್‌-ಆಲಿಯಾ ಭಟ್‌ ನಟನೆಯ 'ಬದ್ರಿನಾಥ್‌ ಕೀ ದುಲ್ಹಾನಿಯಾ' ಚಿತ್ರದಲ್ಲೂ ಮರುಬಳಕೆ ಮಾಡಿಕೊಳ್ಳಲಾಗಿತ್ತು.

ಯಾರನ್ನೂ ಭೇಟಿಯಾಗದಿರಲು ನಿರ್ಧರಿಸಿದ ನಟ ಸಂಜಯ್ ದತ್‌!

ಸದ್ಯ ಸಂಜಯ್‌ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶೀಘ್ರದಲ್ಲೇ ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ. ಸದ್ಯ ಅವರ ಕ್ಯಾನ್ಸರ್‌ 4ನೇ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ.

ಸಂಜಯ್‌ ದತ್‌ ಹೆಸರಿನ ಹಿಂದಿದೆ ಇಂಟರೆಸ್ಟಿಂಗ್‌ ಸಂಗತಿ! ನಾಮಕರಣ ಮಾಡಿದ್ದು ಅಪರಿಚಿತ ಮಹಿಳೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌