ಆ್ಯಪ್ನಗರ

ಅಕ್ಷಯ್‌ ಸದುದ್ದೇಶ ಆಗುತ್ತಿದೆ ದುರುಪಯೋಗ!

ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರರ ಕುಟುಂಬಕ್ಕೆ ನೆರವಾಗಬೇಕೆಂಬ ಒಳ್ಳೆಯ ಉದ್ದೇಶಕ್ಕೆ ಅಕ್ಷಯ್ ಕುಮಾರ್‌ ಪ್ರಾರಂಭಿಸಿದ ವೆಬ್‌ಸೈಟ್‌ ಹೆಸರನ್ನು ದುರುಪಯೋಗ ಮಾಡುತ್ತಿದ್ದಾರೆ

ಟೈಮ್ಸ್ ಆಫ್ ಇಂಡಿಯಾ 20 Jul 2017, 2:47 pm
ಹೊಸದಿಲ್ಲಿ: ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರ ಕುಟುಂಬಕ್ಕೆ ನೆರವಾಗಬೇಕೆಂಬ ಒಳ್ಳೆಯ ಉದ್ದೇಶಕ್ಕೆ ಅಕ್ಷಯ್ ಕುಮಾರ್‌ ಪ್ರಾರಂಭಿಸಿದ ವೆಬ್‌ಸೈಟ್‌ ಹೆಸರನ್ನು ದುರುಪಯೋಗ ಮಾಡುತ್ತಿದ್ದಾರೆ ಕೆಲ ದಂಧೆಕೋರರು.
Vijaya Karnataka Web scamsters use akshay kumars name for donations to fake accounts for martyrs families
ಅಕ್ಷಯ್‌ ಸದುದ್ದೇಶ ಆಗುತ್ತಿದೆ ದುರುಪಯೋಗ!


ವೀರ ಸೈನಿಕರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲು ಬಾಲಿವುಡ್ ನಟ ಅಕ್ಷಯ್‌ಕುಮಾರ್‌ bharatkeveer.gov.in ಎಂಬ ವೆಬ್‌ಸೈಟ್ ಪ್ರಾರಂಭಿಸಿದರು. ಆದರೆ ಅದನ್ನು ದುರುಪಯೋಗ ಪಡಿಸಲು ಹೊರಟಿದ್ದಾರೆ ಸಮಾಜ ಕಂಟಕರು.

ಅಕ್ಷಯ್ ಕುಮಾರ್ ವೆಬ್‌ಸೈಟ್‌ನ ತದ್ರೂಪಿ ವೆಬ್‌ಸೈಟ್ ಪ್ರಾರಂಭಿಸಿ ಅದರಲ್ಲಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಹಣ ಸಹಾಯ ಮಾಡಿ ಎಂದು ಬ್ಯಾಂಕ್ ಅಕೌಂಟ್‌ ನಂಬರ್ ನೀಡಿ ಜನರಿಗೆ ಮೋಸ ಮಾಡ ಹೊರಟಿದ್ದಾರೆ.

ಅಕ್ಷಯ್‌ಕುಮಾರ್ ವೆಬ್‌ಸೈಟ್‌ಗೂ ಈ ವೆಬ್‌ಸೈಟ್‌ಗೂ ಯಾವುದೇ ಸಂಬಂಧವಿಲ್ಲ.

ಅಕ್ಷಯ್‌ ಪ್ರಾರಂಭಿಸಿರುವ bharatkeveer.gov.in ವೆಬ್‌ಸೈಟ್‌ ಮೂಲಕ ಜನರು 15 ಲಕ್ಷದವರೆಗೆ ಪ್ರಾಣತ್ಯಾಗ ಮಾಡಿದ ಸೈನಿಕರ ಮನೆಯವರಿಗೆ ಆರ್ಥಿಕ ಸಹಾಯ ನೀಡಬಹುದು. ಅಕ್ಷಯ್ ರೂಪಾಯಿ 1.09 ಕೋಟಿ ಹಣ ಸಹಾಯ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌