ಆ್ಯಪ್ನಗರ

ಬಾಹುಬಲಿಗೆ 2ಗೆ ಸೆಕ್ಯೂರಿಟಿ ಅಲರ್ಟ್

ಬಾಹುಬಲಿ ಪಾರ್ಟ್‌-1 ನೋಡಿದವರಿಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ 'ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ'?

Vijaya Karnataka Web 25 Mar 2017, 6:37 pm
ಬಾಹುಬಲಿ ಪಾರ್ಟ್‌-1 ನೋಡಿದವರಿಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ 'ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಏಕೆ'? ಇದಕ್ಕೆ ಉತ್ತರ ಪಾರ್ಟ್‌ ಎರಡರಲ್ಲಿ ಇದೆಯೇ ಗೊತ್ತಿಲ್ಲ! ಆದರೆ ಏಕೆ ಕೊಂದ ಎಂದು ತಿಳಿಯುವ ಕುತೂಹಲ ಮಾತ್ರ ಎಲ್ಲರಲ್ಲಿಯೂ ಇದೆ.
Vijaya Karnataka Web security alert for baahubali 2
ಬಾಹುಬಲಿಗೆ 2ಗೆ ಸೆಕ್ಯೂರಿಟಿ ಅಲರ್ಟ್


ಬಾಹುಬಲಿ ಪಾರ್ಟ್‌2 ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರ ಬಿಡುಗಡೆಯ ಮುನ್ನ ಆ ಚಿತ್ರದ ಯಾವುದೇ ಸೀಕ್ರೆಟ್‌ ಹೊರಗಡೆ ಬರದಂತೆ ನಿರ್ದೇಶಕ ರಾಜಮೌಳಿ ಕಟ್ಟೆಚ್ಚರ ವಹಿಸಿದ್ದಾರೆ.

ಬಾಹುಬಲಿ-2ರಲ್ಲಿ ಅಭಿನಯಿಸಿರುವ ಕಲಾವಿದರಿಂದ ಹಿಡಿದು ಅದರಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಚಿತ್ರದ ಕುರಿತ ಯಾವುದೇ ಸೀಕ್ರೆಟ್‌ ಹೊರಗಡೆ ಬಿಡದಂತೆ ಕಟ್ಟೆಚ್ಚರ ನೀಡಿದ್ದಾರೆ.

ಎಡಿಟಿಂಗ್ ಮಾಡುವ ರೂಂನಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಎಡಿಟರ್‌ಗಳ ಚಟುವಟಿಕೆಗಳನ್ನು ಕೂಲಂಕಷವಾಗಿ ಗಮನಿಸಲಾಗುತ್ತಿದೆ. ಅಲ್ಲದೆ ಎಡಿಟ್‌ ವರ್ಕ್‌ ಮಾಡುತ್ತಿರುವ ಬಿಲ್ಡಿಂಗ್‌ಗೆ ವೀಡಿಯೋ ಎಡಿಟರ್‌ಗಳಿಗೆ ಅಲ್ಲದೆ ಮತ್ಯಾರಿಗೂ ಅನುಮತಿಯಿಲ್ಲ.

ಚಿತ್ರ ಬಿಡುಗಡೆಗೆ ಮುನ್ನ ಚಿತ್ರದ ಯಾವುದಾದರೂ ದೃಶ್ಯ ಲೀಕ್ ಆಗಿ ಕಲೆಕ್ಷನ್‌ಗೆ ಧಕ್ಕೆಯಾಗದಿರಲು ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡುತ್ತಿದ್ದಾರೆ ರಾಜಮೌಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌