ಒಂದು ವರ್ಷ ಮೌನಕ್ಕೆ ಶರಣಾಗಿದ್ದ ಶಾರುಖ್ ಖಾನ್ ಹುಟ್ಟುಹಬ್ಬದ ದಿನ ಕಣ್ಣೀರು
ಕಿಂಗ್ ಖಾನ್ ಶಾರುಖ್ ಖಾನ್ 54ನೇ ವರ್ಷಕ್ಕೆ ಅಡಿಯಿಟ್ಟಿದ್ದು ಈ ಸಂದರ್ಭದಲ್ಲಿ ತಾವು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. ಝೀರೋ ಸಿನಿಮಾದ ದಯನೀಯ ಸೋಲು ತನ್ನನ್ನು ಕಂಗೆಡಿಸಿಲ್ಲ. ಮುಂಬಯಿಗೆ ಬಂದಾಗ ಆಗಷ್ಟೇ ಮದುವೆಯಾಗಿದ್ದ ನನಗೆ ಮನೆ ಸಹ ಇರಲಿಲ್ಲ ಎಂದಿದ್ದಾರೆ.
Vijaya Karnataka 4 Nov 2019, 2:42 pm
ತಮ್ಮ ಅಭಿನಯದ ಝೀರೋ ಚಿತ್ರದ ದಯನೀಯ ಸೋಲಿನ ಬಳಿಕ ಸುಮಾರು ಒಂದು ವರ್ಷ ಕಾಲ ಮೌನಕ್ಕೆ ಶರಣಾಗಿರುವ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್, ಬಾಂದ್ರಾದಲ್ಲಿ ತಮ್ಮ 54ನೇ ಹುಟ್ಟುಹಬ್ಬದ ದಿನ ಮನ ಬಿಚ್ಚಿ ಮಾತನಾಡಿದ್ದಾರೆ.
ನಾನು ಅದೃಷ್ಟ, ದುರಾದೃಷ್ಟ ಎರಡನ್ನೂ ನೋಡಿದ್ದೇನೆ. ಝಿರೋ ಸಿನಿಮಾದ ದಯನೀಯ ಸೋಲು ನನ್ನನ್ನು ಕಂಗೆಡಿಸಿಲ್ಲ. ನಾನು ಕೆಲಸಕ್ಕಾಗಿ ಮುಂಬಯಿಗೆ ಬಂದ ಬಳಿಕ ಹೆತ್ತವರು, ಸಹೋದರಿ ಮತ್ತು ಹಣ ಎಲ್ಲವನ್ನೂ ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದ್ದೇನೆ. ಆಗಷ್ಟೇ ಮದುವೆಯಾಗಿದ್ದ ನನಗೆ ಸ್ವಂತ ಮನೆ ಕೂಡ ಇರಲಿಲ್ಲ. ಆದ್ದರಿಂದ ಇವುಗಳ ಮುಂದೆ ಒಂದು ಸಿನಿಮಾದ ಸೋಲು ಏನೇನೂ ಅಲ್ಲ ಎಂದು ಹೇಳಿದ್ದಾರೆ.
ಸಲ್ಮಾನ್ರಂತೆಯೇ ಇರುವ ಅಭಿಮಾನಿಯನ್ನು ನೋಡಿ ಬಿಗ್ ಬಿ ಶಾಕ್
ಕೆಟ್ಟದ್ದು ಸಂಭವಿಸಿದಾಗ ನಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ಬಿಡಬೇಕು ಎಂದು ಯಾವಾಗಲೂ ನಾನು ಜನರಿಗೆ ಹೇಳುತ್ತಲೇ ಬಂದಿದ್ದೇನೆ ಎಂದವರು ಅವರು, ಏನೇ ಆದರೂ, ಆಗುವುದೆಲ್ಲವೂ ಒಳ್ಳೆಯದಕ್ಕೇ ಎಂದೇ ನಾನು ನಂಬಿಕೊಂಡು ಬಂದಿದ್ದೇನೆ.
'ಝೀರೋ' ಹೀನಾಯ ಸೋಲು, ಶಾಕ್ನಿಂದ ಹೊರಬರದ ಶಾರುಖ್
ನಟಿ ಜೂಹಿ ಚಾವ್ಲಾ, ನಿರ್ಮಾಪಕ ಅಝಿಜ್ ಮಿರ್ಝಾ ಮತ್ತು ರಾಜೀವ್ ಮೆಹ್ರಾ, ಸಹ ನಿರ್ಮಾಪಕ ವಿವೇಕ್ ವಾಸ್ವಾನಿ ಅವರು ನನ್ನ ಕಷ್ಟ ಕಾಲದಲ್ಲಿ ಕಡಿಮೆ ಬಾಡಿಗೆಗೆ ಮನೆ ನೀಡಿದ್ದರು. ಅವರೆಲ್ಲರಿಗೂ ನಾನು ಕೃತಜ್ಞ ಎಂದು ಹೇಳಿದರು.
ಶಾರುಖ್ ಅಭಿನಯಾದ 'ಝೀರೋ' ಸಿನಿಮಾ ಬಾಕ್ಸ್ ಆಫೀಸಲ್ಲಿ ಹೀನಾಯವಾಗಿ ಸೋತ ಕಾರಣ ಅವರು ಶಾಕ್ನಲ್ಲಿದ್ದಾರೆ ಎಂದಿದ್ದಾರೆ ಸಾಹಿತಿ ಅಂಜುಮ್ ರಾಜಬಲಿ. ಭಾರತ ಗಗನಯಾತ್ರಿ ರಾಕೇಶ್ ಶರ್ಮಾ ಬಯೋಪಿಕ್ನಲ್ಲಿ ಶಾರುಖ್ ನಟಿಸಬೇಕಾಗಿತ್ತು. ಆದರೆ ಅದರಿಂದ ಹೊರಬಿದ್ದರು. ಈ ಬಯೋಪಿಕ್ಗೆ ಕಥೆ ಬರೆದವರೇ ಅಂಜುಮ್ ರಾಜಬಲಿ.
ನನ್ನ ಹಳೆ ಸಿನಿಮಾ ನೋಡುವಾಗ ಸೋಫಾ ಕೆಳಗೆ ಬಚ್ಚಿಟ್ಟುಕೊಳ್ಳುತ್ತಿದ್ದೆ: ಶಿಲ್ಪಾ ಶೆಟ್ಟಿ
'ಝೀರೊ' ಸಿನಿಮಾ ಸೋತ ಬಳಿಕ ಶಾರುಖ್ ಶಾಖ್ನಲ್ಲಿದ್ದಾರೆ. ಹಾಗಾಗಿ ಬಯೋಪಿಕ್ ಕಡೆಗೆ ಅವರು ಗಮನಹರಿಸಲು ಸಾಧ್ಯವಾಗದೆ ಅದರಿಂದ ದೂರ ಸರಿದರು ಎಂದಿದ್ದರು. ಝೀರೋ ಸಿನಿಮಾದ ಸ್ಕ್ರಿಪ್ಟ್ ಚೆನ್ನಾಗಿಲ್ಲದ ಕಾರಣ ಫ್ಲಾಪ್ ಆಯಿತು ಎಂದು ಬಾಲಿವುಡ್ ಮೂಲಗಳು ಭಾವಿಸಿವೆ. ಈ ಬಗ್ಗೆಯೂ ಅಂಜುಮ್ ಸ್ಪಷ್ಟನೆ ನೀಡಿದ್ದರು.
"ಝೀರೋ ಸಿನಿಮಾಗೆ ಹಿಮಾನ್ಷು ಶರ್ಮಾ ಕಥೆ ಬರೆದಿದ್ದಾರೆ. ಅವರು ಚಿತ್ರೋದ್ಯಮದಲ್ಲೇ ತುಂಬಾ ಪ್ರತಿಭಾನ್ವಿತ ವ್ಯಕ್ತಿ. ಅಂತಹದ್ದರಲ್ಲಿ ಅವರು ಬರೆದ ಸ್ಕ್ರಿಪ್ಟ್ ಕಾರಣದಿಂದಲೇ ಸಿನಿಮಾ ಓಡಲಿಲ್ಲ ಎಂದರೆ ಒಮ್ಮೊಮ್ಮೆ ಎಲ್ಲವೂ ನಾವು ಅಂದುಕೊಂಡಂತೆ ನಡೆಯದಿರಬಹುದು ಅಲ್ಲವೇ ಎಂದಿದ್ದಾರೆ.
ನಾನು ಅದೃಷ್ಟ, ದುರಾದೃಷ್ಟ ಎರಡನ್ನೂ ನೋಡಿದ್ದೇನೆ. ಝಿರೋ ಸಿನಿಮಾದ ದಯನೀಯ ಸೋಲು ನನ್ನನ್ನು ಕಂಗೆಡಿಸಿಲ್ಲ. ನಾನು ಕೆಲಸಕ್ಕಾಗಿ ಮುಂಬಯಿಗೆ ಬಂದ ಬಳಿಕ ಹೆತ್ತವರು, ಸಹೋದರಿ ಮತ್ತು ಹಣ ಎಲ್ಲವನ್ನೂ ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದ್ದೇನೆ. ಆಗಷ್ಟೇ ಮದುವೆಯಾಗಿದ್ದ ನನಗೆ ಸ್ವಂತ ಮನೆ ಕೂಡ ಇರಲಿಲ್ಲ. ಆದ್ದರಿಂದ ಇವುಗಳ ಮುಂದೆ ಒಂದು ಸಿನಿಮಾದ ಸೋಲು ಏನೇನೂ ಅಲ್ಲ ಎಂದು ಹೇಳಿದ್ದಾರೆ.
ಸಲ್ಮಾನ್ರಂತೆಯೇ ಇರುವ ಅಭಿಮಾನಿಯನ್ನು ನೋಡಿ ಬಿಗ್ ಬಿ ಶಾಕ್
ಕೆಟ್ಟದ್ದು ಸಂಭವಿಸಿದಾಗ ನಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ಬಿಡಬೇಕು ಎಂದು ಯಾವಾಗಲೂ ನಾನು ಜನರಿಗೆ ಹೇಳುತ್ತಲೇ ಬಂದಿದ್ದೇನೆ ಎಂದವರು ಅವರು, ಏನೇ ಆದರೂ, ಆಗುವುದೆಲ್ಲವೂ ಒಳ್ಳೆಯದಕ್ಕೇ ಎಂದೇ ನಾನು ನಂಬಿಕೊಂಡು ಬಂದಿದ್ದೇನೆ.
'ಝೀರೋ' ಹೀನಾಯ ಸೋಲು, ಶಾಕ್ನಿಂದ ಹೊರಬರದ ಶಾರುಖ್
ನಟಿ ಜೂಹಿ ಚಾವ್ಲಾ, ನಿರ್ಮಾಪಕ ಅಝಿಜ್ ಮಿರ್ಝಾ ಮತ್ತು ರಾಜೀವ್ ಮೆಹ್ರಾ, ಸಹ ನಿರ್ಮಾಪಕ ವಿವೇಕ್ ವಾಸ್ವಾನಿ ಅವರು ನನ್ನ ಕಷ್ಟ ಕಾಲದಲ್ಲಿ ಕಡಿಮೆ ಬಾಡಿಗೆಗೆ ಮನೆ ನೀಡಿದ್ದರು. ಅವರೆಲ್ಲರಿಗೂ ನಾನು ಕೃತಜ್ಞ ಎಂದು ಹೇಳಿದರು.
ಶಾರುಖ್ ಅಭಿನಯಾದ 'ಝೀರೋ' ಸಿನಿಮಾ ಬಾಕ್ಸ್ ಆಫೀಸಲ್ಲಿ ಹೀನಾಯವಾಗಿ ಸೋತ ಕಾರಣ ಅವರು ಶಾಕ್ನಲ್ಲಿದ್ದಾರೆ ಎಂದಿದ್ದಾರೆ ಸಾಹಿತಿ ಅಂಜುಮ್ ರಾಜಬಲಿ. ಭಾರತ ಗಗನಯಾತ್ರಿ ರಾಕೇಶ್ ಶರ್ಮಾ ಬಯೋಪಿಕ್ನಲ್ಲಿ ಶಾರುಖ್ ನಟಿಸಬೇಕಾಗಿತ್ತು. ಆದರೆ ಅದರಿಂದ ಹೊರಬಿದ್ದರು. ಈ ಬಯೋಪಿಕ್ಗೆ ಕಥೆ ಬರೆದವರೇ ಅಂಜುಮ್ ರಾಜಬಲಿ.
ನನ್ನ ಹಳೆ ಸಿನಿಮಾ ನೋಡುವಾಗ ಸೋಫಾ ಕೆಳಗೆ ಬಚ್ಚಿಟ್ಟುಕೊಳ್ಳುತ್ತಿದ್ದೆ: ಶಿಲ್ಪಾ ಶೆಟ್ಟಿ
'ಝೀರೊ' ಸಿನಿಮಾ ಸೋತ ಬಳಿಕ ಶಾರುಖ್ ಶಾಖ್ನಲ್ಲಿದ್ದಾರೆ. ಹಾಗಾಗಿ ಬಯೋಪಿಕ್ ಕಡೆಗೆ ಅವರು ಗಮನಹರಿಸಲು ಸಾಧ್ಯವಾಗದೆ ಅದರಿಂದ ದೂರ ಸರಿದರು ಎಂದಿದ್ದರು. ಝೀರೋ ಸಿನಿಮಾದ ಸ್ಕ್ರಿಪ್ಟ್ ಚೆನ್ನಾಗಿಲ್ಲದ ಕಾರಣ ಫ್ಲಾಪ್ ಆಯಿತು ಎಂದು ಬಾಲಿವುಡ್ ಮೂಲಗಳು ಭಾವಿಸಿವೆ. ಈ ಬಗ್ಗೆಯೂ ಅಂಜುಮ್ ಸ್ಪಷ್ಟನೆ ನೀಡಿದ್ದರು.
"ಝೀರೋ ಸಿನಿಮಾಗೆ ಹಿಮಾನ್ಷು ಶರ್ಮಾ ಕಥೆ ಬರೆದಿದ್ದಾರೆ. ಅವರು ಚಿತ್ರೋದ್ಯಮದಲ್ಲೇ ತುಂಬಾ ಪ್ರತಿಭಾನ್ವಿತ ವ್ಯಕ್ತಿ. ಅಂತಹದ್ದರಲ್ಲಿ ಅವರು ಬರೆದ ಸ್ಕ್ರಿಪ್ಟ್ ಕಾರಣದಿಂದಲೇ ಸಿನಿಮಾ ಓಡಲಿಲ್ಲ ಎಂದರೆ ಒಮ್ಮೊಮ್ಮೆ ಎಲ್ಲವೂ ನಾವು ಅಂದುಕೊಂಡಂತೆ ನಡೆಯದಿರಬಹುದು ಅಲ್ಲವೇ ಎಂದಿದ್ದಾರೆ.