ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರದಲ್ಲಿ ಕುಬ್ಜ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆನಂದ್ ಎಲ್. ರಾಯ್ ನಿರ್ದೇಶಿಸಲಿರುವ ಚಿತ್ರ ಸದ್ಯ ಚಿತ್ರಕತೆ ಹಂತದಲ್ಲಿದೆ. ಈ ವಿಶಿಷ್ಟ ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕರು, ‘ಮೂರಡಿ ಒಂದಿಂಚು ಎತ್ತರದ ಕುಬ್ಜ ವ್ಯಕ್ತಿಯ ಕತೆಯಿದು. ಇದಕ್ಕೆ ಹೊರತಾಗಿ ಈ ಸಂದರ್ಭದಲ್ಲಿ ನಾನು ಮತ್ತೇನೂ ಹೇಳಲು ಸಾಧ್ಯವಿಲ್ಲ’ ಎನ್ನುವ ಆನಂದ್, ಶಾರುಖ್ರನ್ನು ತಲೆಯಲ್ಲಿಟ್ಟುಕೊಂಡೇ ಈ ಪಾತ್ರ ಸೃಷ್ಟಿಸಿದ್ದಂತೆ.
‘ನನಗೆ ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ, ಆತ್ಮವಿಶ್ವಾಸದಿಂದ ಪಾತ್ರ ನಿಭಾಯಿಸುವ ಕಲಾವಿದ ಬೇಕಿತ್ತು. ಕೆಳಹಂತದಿಂದ ಬೆಳೆದು ದೊಡ್ಡ ಸ್ಟಾರ್ ಆಗಿರುವ ಶಾರುಖ್ರಿಗೆ ಬದುಕಿನ ಕಷ್ಟ-ಸುಖಗಳ ಅರಿವಿದೆ. ನಾನು ಸೃಷ್ಟಿಸಿರುವ ಪಾತ್ರಕ್ಕೆ ಅವರು ಅತ್ಯಂತ ಸೂಕ್ತ ಕಲಾವಿದ’ ಎನ್ನುವುದು ನಿರ್ದೇಶಕರ ಅಭಿಪ್ರಾಯ. ಇದೀಗ ಲವ್ ಸಿನಿಮಾಗಳಿಂದ ಪ್ರಯೋಗಾತ್ಮಕ ಸಿನಿಮಾಗಳತ್ತ ಹೊರಳಿರುವ ಶಾರುಖ್ ವೃತ್ತಿ ಬದುಕಿನಲ್ಲಿ ಇದೊಂದು ಮಹತ್ವದ ಪ್ರಯೋಗವಾಗಲಿದೆ.
ಧೂಮ್ ಸರಣಿಗೆ ವಾಣಿ ಕಪೂರ್
ಆದಿತ್ಯ ಚೋಪ್ರಾ ನಿರ್ಮಾಣದ ‘ಧೂಮ್ 4’ ಚಿತ್ರದ ನಾಯಕಿ ಪಾತ್ರಕ್ಕೆ ವಾಣಿ ಕಪೂರ್ ಆಯ್ಕೆಯಾಗುವುದು ಖಚಿತವಾಗಿದೆ. ಚಿತ್ರದ ಖಳ ಪಾತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಒಪ್ಪಿಕೊಂಡಿರುವುದು ಮತ್ತೊಂದು ಲೇಟೆಸ್ಟ್ ಬೆಳವಣಿಗೆ. ಆದರೆ ವಾಣಿ ಕಪೂರ್, ಸಲ್ಮಾನ್ಗೆ ನಾಯಕಿಯಾಗಲಿದ್ದಾರೆಯೇ ಎನ್ನುವುದಿನ್ನೂ ಖಚಿತವಾಗಿಲ್ಲ. ಪ್ರಸ್ತುತ ವಾಣಿ ಅವರು ಆದಿತ್ಯ ಚೋಪ್ರಾ ನಿರ್ಮಾಣದ ‘ಬೇಫಿಕರ್’ ಚಿತ್ರೀಕರಣದಲ್ಲಿದ್ದಾರೆ. ‘ಶುದ್ಧ್ ದೇಸಿ ರೊಮ್ಯಾನ್ಸ್’ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ಗೆ ಜೋಡಿಯಾಗಿ ಬಾಲಿವುಡ್ಗೆ ಎಂಟ್ರಿ ಕೊಟ್ಟ ವಾಣಿ ಸಿನಿಮಾ ಬದುಕಿಗೆ ‘ಧೂಮ್ 4’ ದೊಡ್ಡ ತಿರುವು ನೀಡಲಿದೆ ಎನ್ನಲಾಗುತ್ತಿದೆ. ‘ಧೂಮ್ 4’ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸುವಂತೆ ಹೃತಿಕ್ ರೋಷನ್ ಮತ್ತು ಅಮಿತಾಭ್ ಬಚ್ಚನ್ ಅವರಿಗೂ ಕರೆ ಕೊಡಲಾಗಿದೆ. ಆದರೆ ಆ ಕಡೆಯಿಂದ ಪ್ರತಿಕ್ರಿಯೆ ಇನ್ನೂ ಸಿಕ್ಕಿಲ್ಲ.
ಶ್ರದ್ಧಾ - ಪ್ರಾಚಿ ಜಗಳ
ರಾಕ್ಆನ್ 2 ಹಿಂದಿ ಚಿತ್ರದಲ್ಲಿ ನಟಿಸುತ್ತಿರುವ ಶ್ರದ್ಧಾ ಕಪೂರ್ ಮತ್ತು ಪ್ರಾಚಿ ದೇಸಾಯಿ ಶೂಟಿಂಗ್ ಸೆಟ್ನಲ್ಲಿ ಜಗಳ ಮಾಡಿಕೊಂಡಿರುವ ಸುದ್ದಿ ಬಂದಿದೆ. ಶೂಜತ್ ಸೌಧಾಗರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ತಮ್ಮ ಪಾತ್ರಗಳಿಗೆ ಪ್ರಾಮುಖ್ಯತೆ ಕಡಿಮೆಯಾಗಿದೆ ಎಂದು ಇಬ್ಬರೂ ತಗಾದೆ ತೆಗೆದಿದ್ದಾರಂತೆ. ಆರಂಭದಲ್ಲಿ ತಮ್ಮ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇರುತ್ತದೆ ಎಂದು ಭರವಸೆ ನೀಡಿ, ಆನಂತರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎನ್ನುವುದು ಶ್ರದ್ಧಾ ಅಳಲು. ಮತ್ತೊಂದೆಡೆ ತಮ್ಮ ಪಾತ್ರಕ್ಕೆ, ಶ್ರದ್ಧಾಗೆ ಸಿಗುವಷ್ಟೇ ಪ್ರಾಮುಖ್ಯತೆ ಬೇಕೆನ್ನುವುದು ಪ್ರಾಚಿ ಬೇಡಿಕೆ. ಇವರಿಬ್ಬರ ಜಗಳದಲ್ಲಿ ಸಿನಿಮಾ ಬಡವಾಗುತ್ತಿದೆ ಎಂದು ನಿರ್ದೇಶಕರು ಅಲವತ್ತುಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಪ್ರಶ್ನಿಸಿದರೆ ಇವರು ಮಾತ್ರ ತಮ್ಮ ಮಧ್ಯೆ ಏನೂ ಆಗೇ ಇಲ್ಲ ಎನ್ನುತ್ತಿದ್ದಾರೆ.
‘ನನಗೆ ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ, ಆತ್ಮವಿಶ್ವಾಸದಿಂದ ಪಾತ್ರ ನಿಭಾಯಿಸುವ ಕಲಾವಿದ ಬೇಕಿತ್ತು. ಕೆಳಹಂತದಿಂದ ಬೆಳೆದು ದೊಡ್ಡ ಸ್ಟಾರ್ ಆಗಿರುವ ಶಾರುಖ್ರಿಗೆ ಬದುಕಿನ ಕಷ್ಟ-ಸುಖಗಳ ಅರಿವಿದೆ. ನಾನು ಸೃಷ್ಟಿಸಿರುವ ಪಾತ್ರಕ್ಕೆ ಅವರು ಅತ್ಯಂತ ಸೂಕ್ತ ಕಲಾವಿದ’ ಎನ್ನುವುದು ನಿರ್ದೇಶಕರ ಅಭಿಪ್ರಾಯ. ಇದೀಗ ಲವ್ ಸಿನಿಮಾಗಳಿಂದ ಪ್ರಯೋಗಾತ್ಮಕ ಸಿನಿಮಾಗಳತ್ತ ಹೊರಳಿರುವ ಶಾರುಖ್ ವೃತ್ತಿ ಬದುಕಿನಲ್ಲಿ ಇದೊಂದು ಮಹತ್ವದ ಪ್ರಯೋಗವಾಗಲಿದೆ.
ಧೂಮ್ ಸರಣಿಗೆ ವಾಣಿ ಕಪೂರ್
ಆದಿತ್ಯ ಚೋಪ್ರಾ ನಿರ್ಮಾಣದ ‘ಧೂಮ್ 4’ ಚಿತ್ರದ ನಾಯಕಿ ಪಾತ್ರಕ್ಕೆ ವಾಣಿ ಕಪೂರ್ ಆಯ್ಕೆಯಾಗುವುದು ಖಚಿತವಾಗಿದೆ. ಚಿತ್ರದ ಖಳ ಪಾತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಒಪ್ಪಿಕೊಂಡಿರುವುದು ಮತ್ತೊಂದು ಲೇಟೆಸ್ಟ್ ಬೆಳವಣಿಗೆ. ಆದರೆ ವಾಣಿ ಕಪೂರ್, ಸಲ್ಮಾನ್ಗೆ ನಾಯಕಿಯಾಗಲಿದ್ದಾರೆಯೇ ಎನ್ನುವುದಿನ್ನೂ ಖಚಿತವಾಗಿಲ್ಲ. ಪ್ರಸ್ತುತ ವಾಣಿ ಅವರು ಆದಿತ್ಯ ಚೋಪ್ರಾ ನಿರ್ಮಾಣದ ‘ಬೇಫಿಕರ್’ ಚಿತ್ರೀಕರಣದಲ್ಲಿದ್ದಾರೆ. ‘ಶುದ್ಧ್ ದೇಸಿ ರೊಮ್ಯಾನ್ಸ್’ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ಗೆ ಜೋಡಿಯಾಗಿ ಬಾಲಿವುಡ್ಗೆ ಎಂಟ್ರಿ ಕೊಟ್ಟ ವಾಣಿ ಸಿನಿಮಾ ಬದುಕಿಗೆ ‘ಧೂಮ್ 4’ ದೊಡ್ಡ ತಿರುವು ನೀಡಲಿದೆ ಎನ್ನಲಾಗುತ್ತಿದೆ. ‘ಧೂಮ್ 4’ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸುವಂತೆ ಹೃತಿಕ್ ರೋಷನ್ ಮತ್ತು ಅಮಿತಾಭ್ ಬಚ್ಚನ್ ಅವರಿಗೂ ಕರೆ ಕೊಡಲಾಗಿದೆ. ಆದರೆ ಆ ಕಡೆಯಿಂದ ಪ್ರತಿಕ್ರಿಯೆ ಇನ್ನೂ ಸಿಕ್ಕಿಲ್ಲ.
ಶ್ರದ್ಧಾ - ಪ್ರಾಚಿ ಜಗಳ
ರಾಕ್ಆನ್ 2 ಹಿಂದಿ ಚಿತ್ರದಲ್ಲಿ ನಟಿಸುತ್ತಿರುವ ಶ್ರದ್ಧಾ ಕಪೂರ್ ಮತ್ತು ಪ್ರಾಚಿ ದೇಸಾಯಿ ಶೂಟಿಂಗ್ ಸೆಟ್ನಲ್ಲಿ ಜಗಳ ಮಾಡಿಕೊಂಡಿರುವ ಸುದ್ದಿ ಬಂದಿದೆ. ಶೂಜತ್ ಸೌಧಾಗರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ತಮ್ಮ ಪಾತ್ರಗಳಿಗೆ ಪ್ರಾಮುಖ್ಯತೆ ಕಡಿಮೆಯಾಗಿದೆ ಎಂದು ಇಬ್ಬರೂ ತಗಾದೆ ತೆಗೆದಿದ್ದಾರಂತೆ. ಆರಂಭದಲ್ಲಿ ತಮ್ಮ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇರುತ್ತದೆ ಎಂದು ಭರವಸೆ ನೀಡಿ, ಆನಂತರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎನ್ನುವುದು ಶ್ರದ್ಧಾ ಅಳಲು. ಮತ್ತೊಂದೆಡೆ ತಮ್ಮ ಪಾತ್ರಕ್ಕೆ, ಶ್ರದ್ಧಾಗೆ ಸಿಗುವಷ್ಟೇ ಪ್ರಾಮುಖ್ಯತೆ ಬೇಕೆನ್ನುವುದು ಪ್ರಾಚಿ ಬೇಡಿಕೆ. ಇವರಿಬ್ಬರ ಜಗಳದಲ್ಲಿ ಸಿನಿಮಾ ಬಡವಾಗುತ್ತಿದೆ ಎಂದು ನಿರ್ದೇಶಕರು ಅಲವತ್ತುಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಪ್ರಶ್ನಿಸಿದರೆ ಇವರು ಮಾತ್ರ ತಮ್ಮ ಮಧ್ಯೆ ಏನೂ ಆಗೇ ಇಲ್ಲ ಎನ್ನುತ್ತಿದ್ದಾರೆ.