ಆ್ಯಪ್ನಗರ

Aryan Khan: ಶಾರುಖ್ ಪುತ್ರನಿಗೆ ಜಾಮೀನು; ಬಾಲಿವುಡ್‌ ಸೆಲೆಬ್ರಿಟಿಗಳ ಪ್ರತಿಕ್ರಿಯೆ ಏನು?

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್‌ ಖಾನ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. 25 ದಿನಗಳ ಸೆರೆವಾಸದಿಂದ ಅವರಿಗೆ ಸದ್ಯ ಮುಕ್ತಿ ಸಿಗಲಿದೆ. ಈ ಮಧ್ಯೆ ಆರ್ಯನ್‌ಗೆ ಜಾಮೀನು ಸಿಕ್ಕಿದ್ದಕ್ಕೆ ಹಲವರು ಸಂತೋಷ ವ್ಯಕ್ತಪಡಿಸಿದ್ದಾರೆ.

Vijaya Karnataka Web 28 Oct 2021, 9:03 pm

ಹೈಲೈಟ್ಸ್‌:

  • ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿಕೊಂಡಿದ್ದ ಶಾರುಖ್ ಪುತ್ರ
  • ಸುಮಾರು 25 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರ್ಯನ್
  • ಮಾಧವನ್, ಸೋನು ಸೂದ್ ಸೇರಿದಂತೆ ಅನೇಕರಿಂದ ಟ್ವೀಟ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web SRK
ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ರನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದರು. ನಂತರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆ ಬಳಿಕ ನ್ಯಾಯಾಲಯವು ಆರ್ಯನ್‌ರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಆನಂತರ ಜಾಮೀನಿಗೆ ಹಲವು ಪ್ರಯತ್ನ ಮಾಡಿದ್ದರೂ, ಆರ್ಯನ್‌ಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಕಳೆದ ಮೂರು ದಿನಗಳಿಂದ ಮುಂಬೈ ಹೈಕೋರ್ಟ್‌ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿತ್ತು. ಅಂತಿಮವಾಗಿ ಇಂದು (ಅ.28) ಜಾಮೀನು ಸಿಕ್ಕಿದೆ. ಈ ಮಧ್ಯೆ ಶಾರುಖ್ ಪುತ್ರನಿಗೆ ಜಾಮೀನು ಸಿಕ್ಕಿರುವುದು ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಖುಷಿ ನೀಡಿದೆ. ಹಲವರು ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ರಿಯಲ್ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, 'ಸಮಯ ತೀರ್ಪು ನೀಡಿದಾಗ, ಆಗ ಸಾಕ್ಷಿಗಳ ಅವಶ್ಯಕತೆ ಇರುವುದಿಲ್ಲ... ' ಎಂದಿದ್ದಾರೆ. ಹಾಗೆಯೇ, ರಾಮ್ ಗೋಪಾಲ್ ವರ್ಮಾ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಹಾಗಾದರೆ, ಆರ್ಯನ್‌ಗೆ ಜಾಮೀನು ಸಿಗುವಂತೆ ಮಾಡಲು ಮುಕುಲ್ ರೋಹಟ್ಗಿ ಅವರ ವಾದವನ್ನು ತೆಗೆದುಕೊಂಡರೆ, ಈ ಹಿಂದೆ ವಾದ ಮಾಡಿದ ವಕೀಲರು ಎಷ್ಟು ಅಸಮರ್ಥರಾಗಿದ್ದರು ಎಂದರೆ ಅವರು ಇಷ್ಟು ದಿನ ಅನಗತ್ಯವಾಗಿ ಆರ್ಯನ್ ಜೈಲಿನಲ್ಲಿ ಕಳೆಯಬೇಕಾಗಿತ್ತು ಎಂದರ್ಥವೇ' ಎಂದು ವಿಚಿತ್ರವಾಗಿ ಪ್ರಶ್ನೆ ಮಾಡಿದ್ದಾರೆ.

ಇನ್ನು, ನಟ ಮಾಧವನ್ ಕೂಡ ಆರ್ಯನ್‌ಗೆ ಜಾಮೀನು ಸಿಕ್ಕಿದ್ದರ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಧನ್ಯವಾದ ದೇವರೆ, ಒಬ್ಬ ತಂದೆಯಾಗಿ ನಾನು ತುಂಬಾ ಸಮಾಧಾನಗೊಂಡಿದ್ದೇನೆ.. ಎಲ್ಲಾ ಒಳ್ಳೆಯ ಮತ್ತು ಧನಾತ್ಮಕ ಸಂಗತಿಗಳು ನಡೆಯಲಿ..' ಎಂದಿದ್ದಾರೆ. ಹಾಗೆಯೇ, ಮಲೈಕಾ ಅರೋರಾ, ಸೋನಮ್‌ ಕಪೂರ್, ಸ್ವರಾ ಭಾಸ್ಕರ್, ಹನ್ಸಲ್ ಮೆಹ್ತಾ, ಮಿಖಾ ಸಿಂಗ್‌ ಮುಂತಾದವರು ಸಂಭ್ರಮ ಹಂಚಿಕೊಂಡಿದ್ದಾರೆ. ಇನ್ನು, ಆರ್ಯನ್‌ಗೆ ಜಾಮೀನು ಸಿಕ್ಕಿರುವುದು ಶಾರುಖ್ ಫ್ಯಾನ್ಸ್‌ಗೂ ಕೂಡ ಖುಷಿ ನೀಡಿದೆ. ಈಗಾಗಲೇ ಶಾರುಖ್ ನಿವಾಸ ಮನ್ನತ್‌ ಎದುರು ಸಂಭ್ರಮಾಚರಣೆ ಮಾಡುತ್ತಿದ್ದಾರೆ ಅಭಿಮಾನಿಗಳು. ಆರ್ಯನ್‌ಗೆ ಜಾಮೀನು ಸಿಕ್ಕಿದ್ದರೂ ಕೂಡ ಅವರು ಬಿಡುಗಡೆ ಆಗುವುದು ಶುಕ್ರವಾರ ಅಥವಾ ಶನಿವಾರ ಎನ್ನಲಾಗಿದೆ.

ಡ್ರಗ್ಸ್ ಕುರಿತು ಆರ್ಯನ್ ಖಾನ್ & ಅನನ್ಯಾ ಪಾಂಡೆ ಮಾಡಿದ್ದ ವಾಟ್ಸಾಪ್ ಚಾಟ್‌ ಬಹಿರಂಗ!
ವಕೀಲ ಮುಕುಲ್ ರೋಹಟ್ಗಿ ಹೇಳಿದ್ದೇನು?
ನ್ಯಾಯಾಲಯದಲ್ಲಿ ಆರ್ಯನ್ ಖಾನ್ ಪರವಾಗಿ ವಾದ ಮಾಡಿದ ವಕೀಲ ಮುಕುಲ್ ರೋಹಟ್ಗಿ, 'ಆರ್ಯನ್‌ಗೆ ಅರ್ಬಾಜ್ ಪರಿಚಯವಿದೆ. ಅವರನ್ನು ಬಿಟ್ಟು ಉಳಿದವರು ತಿಳಿದಿಲ್ಲ. ರೇವ್ ಪಾರ್ಟಿಯಲ್ಲಿ ಸಹಜವಾಗಿ ಭೇಟಿಯಾಗಿದ್ದೇವೆ ಎಂದು ಸಾಬೀತು ಮಾಡುವುದು ಕಷ್ಟ ಎಂದು ಗೊತ್ತಿದೆ. ಸಾಕ್ಷಿಯೇ ಇಲ್ಲದೆ ಆರ್ಯನ್ ಬಂಧಿಸಲಾಗಿದೆ, ಬಂಧನ ಮಾಡುವಾಗಲೂ ಕೂಡ ಏನು ವಿಷಯ ಅಂತ ಹೇಳಿಲ್ಲ, ಯಾವ ಕಾರಣಕ್ಕೆ ಬಂಧನವಾಗುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ಆರೋಪಿಗಿದೆ. ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್‌ಸಿಬಿ ದಾರಿ ತಪ್ಪಿಸಿದೆ' ಎಂದು ಮುಕುಲ್ ಹೇಳಿದ್ದಾರೆ.

ಶಾರುಖ್‌ಗೆ ಜೈಲಿನಲ್ಲಿರುವ ಪುತ್ರನ ಆಹಾರದ್ದೇ ಚಿಂತೆ! ಅಧಿಕಾರಿಗಳಿಗೆ 'ಕಿಂಗ್ ಖಾನ್' ಕೇಳಿದ್ದೇನು?




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌