ಆ್ಯಪ್ನಗರ

ಮಕ್ಕಳ ಹಕ್ಕು ರಕ್ಷಣೆಗಾಗಿ ಶ್ರಮಿಸಲಿದ್ದಾರೆ ತ್ರಿಶಾ

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್‌ ಯುನಿಸೆಫ್‌ (UNICEF)ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

Vijaya Karnataka Web 20 Nov 2017, 4:08 pm
ಚೆನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್‌ ಯುನಿಸೆಫ್‌ (UNICEF) ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಕ್ಕಳ ಹುಕ್ಕುಗಳ ರಕ್ಷಣೆಗಾಗಿ ಶ್ರಮಿಸಲಿದ್ದಾರೆ ತ್ರಿಶಾ.
Vijaya Karnataka Web south indian actress trisha krishnan gets unicef celebrity advocate status
ಮಕ್ಕಳ ಹಕ್ಕು ರಕ್ಷಣೆಗಾಗಿ ಶ್ರಮಿಸಲಿದ್ದಾರೆ ತ್ರಿಶಾ


'ಯುನಿಸೆಫ್' ವಿಶ್ವಸಂಸ್ಥೆಯ ಒಂದು ಅಂಗವಾಗಿದ್ದು, ಅಭಿವೃದ್ಧಿಶೀಲ ದೇಶಗಳಲ್ಲಿನ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಪ್ರತಿಷ್ಠಿತ ಯು.ಎನ್‌ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ತ್ರಿಶಾ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯೇ ಸರಿ. ಯುನಿಸೆಫ್‌ ಸದಸ್ಯರು ಹೇಳುವಂತೆ ಮಕ್ಕಳಲ್ಲಿನ ಅಪೌಷ್ಟಿಕತೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಹಾಗೂ ಮಕ್ಕಳ ಮೇಲಿನ ದೌರ್ಜನ್ಯದಂತಹ ಜ್ವಲಂತ ಸಮಸ್ಯೆಗಳನ್ನು ಹೊಡೆದೋಡಿಸಲು ತ್ರಿಶಾ ಬೆಂಬಲಿಸಲಿದ್ದಾರೆ. ಪ್ರಮುಖವಾಗಿ ತಮಿಳುನಾಡು ಮತ್ತು ಕೇರಳ ರಾಜ್ಯದ ಮಕ್ಕಳ ಅಭಿವೃದ್ಧಿಗಾಗಿ ಸಹಕರಿಸಲಿದ್ದಾರೆ ತ್ರಿಶಾ.

ಮತ್ತೊಂದು ವಿಶೇಷತೆ ಎಂದರೆ ಯುನಿಸೆಫ್‌ ಪ್ರಚಾರ ರಾಯಭಾರಿ ಎಂಬ ಮಾನ್ಯತೆ ಪಡೆದ ಮೊದಲ ದಕ್ಷಿಣ ಭಾರತದ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ತ್ರಿಶಾ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ನನಗೆ ದೊರೆತ ಈ ಮಾನ್ಯತೆ ನಿಜಕ್ಕೂ ಖುಷಿ ತಂದಿದೆ. ತಮಿಳುನಾಡು ಹಾಗೂ ಕೇರಳದ ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ರಕ್ಷಣೆಗೆ ಸದಾ ಬದ್ಧಳಾಗಿರುತ್ತೇನೆ. ಜ್ವಲಂತ ಸಮಸ್ಯೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ, ಆರೋಗ್ಯಯುತ ಸಮಾಜಕ್ಕಾಗಿ ಕೈ ಜೋಡಿಸುವೆ' ಎಂದು ತ್ರಿಶಾ ಹೇಳಿದರು.

ಇದೇ ವೇಳೆ 50 ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳ ಜತೆ ಸಂವಾದ ನಡೆಸಿದ ತ್ರಿಶಾ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಅಂಶಗಳನ್ನು ಚರ್ಚಿಸಿದರು. ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯನ್ನು ಹೊಡೆದೋಡಿಸಲು ಶಿಕ್ಷಣ ಪರಿಣಾಮಕಾರಿ ಅಸ್ತ್ರ ಎಂದು ತ್ರಿಶಾ ಅಭಿಪ್ರಾಯಪಟ್ಟರು.

ಮೂಲ ವರದಿ: ತಮಿಳ್‌ ಸಮಯಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌