ಆ್ಯಪ್ನಗರ

5 ದಿನ ಮುನ್ನವೇ ಸುಶಾಂತ್‌ಗೆ ಸಿಕ್ಕಿತ್ತು ಸಾವಿನ ಸುಳಿವು! ಅಕ್ಕನ ಮೆಸೇಜ್‌ನಿಂದ ರಹಸ್ಯ ಬಹಿರಂಗ!

ಸುಶಾಂತ್‌ ಸಿಂಗ್‌ ರಜಪೂತ್‌ ಅವರದ್ದು ಕೊಲೆಯೋ ಆತ್ಮಹತ್ಯೆಯೋ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಅವರಿಗೆ 5 ದಿನ ಮುನ್ನವೇ ತಮ್ಮ ಸಾವಿನ ಸುಳಿವು ಸಿಕ್ಕಿತ್ತು ಎಂಬುದು ಅಚ್ಚರಿ. ಅದಕ್ಕೆ ವಾಟ್ಸಪ್‌ ಸಂದೇಶ ಸಾಕ್ಷಿ ಒದಗಿಸುತ್ತಿದೆ.

Vijaya Karnataka Web 22 Sep 2020, 8:55 am
ಸುಶಾಂತ್‌ ನಿಧನರಾಗಿ ಮೂರು ತಿಂಗಳು ಕಳೆದಿದ್ದರೂ ಅವರ ಸಾವಿಗೆ ಕಾರಣ ಏನು ಎಂಬುದು ಸರಿಯಾಗಿ ಗೊತ್ತಾಗಿಲ್ಲ. ಈ ಬಗ್ಗೆ ಸಿಬಿಐ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಅಚ್ಚರಿ ಏನೆಂದರೆ ಸಾಯುವುದಕ್ಕಿಂತ ಕೇವಲ 5 ದಿನ ಮುಂಚೆ ಅಕ್ಕನಿಗೆ ಮಾಡಿದ ವಾಟ್ಸಪ್‌ ಮೆಸೇಜ್‌ನಲ್ಲಿ ಸುಶಾಂತ್‌ ಕೆಲವು ಶಾಕಿಂಗ್‌ ಸಂಗತಿ ಬಗ್ಗೆ ಹೇಳಿಕೊಂಡಿದ್ದರು.
Vijaya Karnataka Web ಸುಶಾಂತ್‌ ಸಿಂಗ್‌ ರಜಪೂತ್‌


'ಇವರು ನನ್ನನ್ನು ಕೊಂದುಬಿಡುತ್ತಾರೆ' ಎಂದು ಸಹೋದರಿ ಮೀತು ಸಿಂಗ್‌ಗೆ ಸುಶಾಂತ್‌ ಸಿಂಗ್‌ ರಜಪೂತ್‌ ಮೆಸೇಜ್‌ ಮಾಡಿದ್ದರು ಎನ್ನಲಾಗಿದೆ. 'ಇವರು ನನ್ನನ್ನು ಸಿಕ್ಕಿಸಿಬಿಡುತ್ತಾರೆ' ಎಂಬುದಾಗಿಯೂ ಅವರು ಸಂದೇಶ ಕಳಿಸಿದ್ದರು. ಒಟ್ಟಿನಲ್ಲಿ ತನ್ನ ಪ್ರಾಣಕ್ಕೆ ಕಂಟಕ ಇದೆ ಎಂಬುದು ಅವರಿಗೆ ಮೊದಲೇ ತಿಳಿದಿತ್ತು. ಹಾಗಾಗಿ ಕಾಪಾಡುವಂತೆ ಅಕ್ಕನಿಗೆ ಸುಶಾಂತ್‌ ಕೇಳಿಕೊಂಡಿದ್ದರು ಎಂಬ ಸತ್ಯ ಈಗ ಬಹಿರಂಗ ಆಗಿದೆ.

ಹಾಗಾದರೆ ಸುಶಾಂತ್‌ಗೆ ಯಾರಿಂದ ಪ್ರಾಣ ಬೆದರಿಕೆ ಇತ್ತು? ಡ್ರಗ್ಸ್‌ ಮಾಫಿಯಾದ ಜೊತೆಗೂ ಸುಶಾಂತ್‌ ಸಂಪರ್ಕ ಇಟ್ಟುಕೊಂಡಿದ್ದರು ಎಂಬ ಮಾಹಿತಿ ಇತ್ತೀಚೆಗೆ ಬಹಿರಂಗ ಆಗಿತ್ತು. ಆ ಪೈಕಿ ಯಾರಿಂದಲಾದರೂ ಅವರಿಗೆ ಬೆದರಿಕೆ ಒಡ್ಡಲಾಗಿತ್ತಾ ಎಂಬ ಪ್ರಶ್ನೆ ಈಗ ಮೂಡಿದೆ. ಸದ್ಯ ಸಿಸಿಬಿ ಪೊಲೀಸರಿಂದ ಸುಶಾಂತ್‌ ಪ್ರೇಯಸಿ ರಿಯಾ ಚಕ್ರವರ್ತಿ ವಿಚಾರಣೆ ನಡೆಯುತ್ತಿದೆ.

also read: ರಿಯಾ, ಅಂಕಿತಾ, ಸಾರಾ ಮಾತ್ರವಲ್ಲ, ಸುಶಾಂತ್‌ಗೆ ಈ ಸ್ಟಾರ್‌ ನಟಿ ಕೂಡ ಗರ್ಲ್‌ಫ್ರೆಂಡ್‌ ಆಗಿದ್ರು! ಯಾರದು?

ಸ್ವತಃ ರಿಯಾ ಕೂಡ ಮಾದಕ ವಸ್ತು ಜಾಲದ ಜೊತೆ ನಂಟು ಹೊಂದಿದ್ದರು ಎಂಬುದು ಸಹ ಜಗಜ್ಜಾಹೀರಾಗಿದೆ. ಸುಶಾಂತ್‌ಗಾಗಿಯೇ ತಾನು ಡ್ರಗ್ಸ್‌ ಖರೀದಿಸುತ್ತಿದ್ದೆ ಎಂದು ಅವರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಇಡೀ ಪ್ರಕರಣಕ್ಕೆ ಬೇರೆ ಸ್ವರೂಪ ಸಿಕ್ಕಿದೆ. ಸುಶಾಂತ್‌ರ ಮರಣೋತ್ತರ ಪರೀಕ್ಷೆಯ ನಿರ್ಣಾಯಕ ವರದಿಯು ಇಂದು (ಸೆ.22) ಸಿಬಿಐ ಅಧಿಕಾರಿಗಳ ಕೈ ಸೇರಲಿದೆ.

also read: ಶಾಕಿಂಗ್‌...! ಬಾಲಿವುಡ್‌ ಸೆಲೆಬ್ರಿಟಿಗಳ ಡ್ರಗ್ಸ್‌ ರಹಸ್ಯ ಬಯಲು ಮಾಡಿದ ಯುವರಾಜ್‌ ಎಸ್‌. ಸಿಂಗ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌