ಆ್ಯಪ್ನಗರ

ಡ್ರಗ್ಸ್‌ ಕೇಸ್‌ನಲ್ಲಿ ಜಾಮೀನು ಪಡೆದುಕೊಂಡ ರಿಯಾ ಚಕ್ರವರ್ತಿ ಮೇಲಿದೆ ಈ 8 ಷರತ್ತುಗಳು!

ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಮತ್ತು ಡ್ರಗ್ಸ್‌ ಪ್ರಕರಣದಲ್ಲಿ ಆರೋಪಿ ಆಗಿರುವ ರಿಯಾ ಚಕ್ರವರ್ತಿಗೆ ಸದ್ಯಕ್ಕೆ ರಿಲೀಫ್‌ ಸಿಕ್ಕಿದೆ. ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದೆಯಾದರೂ ಕೆಲವು ಷರತ್ತುಗಳನ್ನು ವಿಧಿಸಿದೆ.

Vijaya Karnataka Web 7 Oct 2020, 7:34 pm
ನಟಿ ರಿಯಾ ಚಕ್ರವರ್ತಿ ಕಳೆದ ಹಲವು ದಿನಗಳಿಂದ ಎನ್‌ಸಿಬಿ ಅಧಿಕಾರಿಗಳ ವಶದಲ್ಲಿ ಇದ್ದರು. ಜಾಮೀನು ಪಡೆಯಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅವರಿಗೆ ಬುಧವಾರ (ಅ.7) ಜಾಮೀನು ಸಿಕ್ಕಿದೆ. ಸಂಜೆಯವರೆಗೂ ಕಾಗದಪತ್ರದ ಕೆಲಸ ನಡೆದಿದ್ದು, ನಂತರ ಅವರನ್ನು ಮನೆಗೆ ಕಳಿಸಲಾಗಿದೆ. ಜಾಮೀನು ನೀಡುವ ವೇಳೆ ರಿಯಾಗೆ 8 ಪ್ರಮುಖ ಷರತ್ತುಗಳನ್ನು ಹಾಕಲಾಗಿದೆ.
Vijaya Karnataka Web ರಿಯಾ ಚಕ್ರವರ್ತಿ


ರಿಯಾಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದೆ. ಹಾಗಂತ ಅವರು ಮನಬಂದಂತೆ ಇರಲು ಸಾಧ್ಯವಿಲ್ಲ. ಈಗ ಅವರು ಕಟ್ಟುನಿಟ್ಟಾಗಿ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಅವುಗಳಲ್ಲಿ ಪ್ರಮುಖವಾದ ಕೆಲವು ಷರತ್ತುಗಳು ಹೀಗಿವೆ:
ಒಂದು: ರಿಯಾ ಅವರು 1 ಲಕ್ಷ ರೂ. ಮೌಲ್ಯದ ಪಿಆರ್‌ ಬಾಂಡ್‌ ನೀಡಬೇಕು. ಅದಕ್ಕೆ ಒಬ್ಬರು ಅಥವಾ ಇಬ್ಬರು ಶ್ಯೂರಿಟಿ ನೀಡಬೇಕು.
ಎರಡು: ರಿಯಾ ತನ್ನ ಪಾಸ್‌ಪೋರ್ಟ್‌ ಅನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು.

ಮೂರು: ಮುಂಬೈನಲ್ಲಿ ಇರುವ ಎನ್‌ಡಿಪಿಎಸ್‌ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಿಂದ ಅನುಮತಿ ಪಡೆಯದೆ ರಿಯಾ ದೇಶಬಿಟ್ಟು ಹೊರಗೆ ಹೋಗುವಂತಿಲ್ಲ.
ನಾಲ್ಕು: ಮುಂಬೈನಿಂದ ಹೊರಗೆ ಹೋಗಬೇಕು ಎಂಬ ಪಕ್ಷದಲ್ಲಿ ತನಿಖಾಧಿಕಾರಿಗಳಿಗೆ ರಿಯಾ ಮೊದಲೇ ವಿಷಯ ತಿಳಿಸಬೇಕು. ತಾವು ಎಲ್ಲೆಲ್ಲಿಗೆ ಪ್ರಯಾಣ ಮಾಡಲಿದ್ದೇವೆ ಎಂಬ ರೂಟ್‌ ಮ್ಯಾಪ್‌ ಅನ್ನೂ ನೀಡಬೇಕು.
ಐದು: ಮುಂದಿನ 6 ತಿಂಗಳು ಕಾಲ ಪ್ರತಿ ತಿಂಗಳ ಮೊದಲ ಸೋಮವಾರ ಬೆಳಗ್ಗೆ 10ಗಂಟೆಯಿಂದ 11ರ ಒಳಗೆ ತನಿಖಾಧಿಕಾರಿಗಳ ಮುಂದೆ ರಿಯಾ ಹಾಜರಾಗಬೇಕು.

also read: ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿಗೆ ಗುಡ್‌ನ್ಯೂಸ್ ಕೊಟ್ಟ ಹೈಕೋರ್ಟ್!

ಆರು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಿಚಾರಣೆ ಇದ್ದಾಗೆಲ್ಲ ರಿಯಾ ಹಾಜರಾಗಬೇಕು. ಸೂಕ್ತ ಕಾರಣ ಇದ್ದರೆ ಮಾತ್ರ ವಿನಾಯಿತಿ ಪಡೆಯಬಹುದು.
ಏಳು: ಯಾವುದೇ ಕಾರಣಕ್ಕೂ ಸಾಕ್ಷಿ ನಾಶ ಮಾಡುವಂತಿಲ್ಲ. ತನಿಖೆಗೆ ಅಡ್ಡಿಪಡಿಸುವಂತಿಲ್ಲ.
ಎಂಟು: ಜಾಮೀನು ಸಿಕ್ಕ 10 ದಿನಗಳವರೆಗೆ ಪ್ರತಿದಿನ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆ ಒಳಗೆ ಯಾವಾಗಲಾದರೂ ಮನೆಯ ಹತ್ತಿರದ ಪೊಲೀಸ್‌ ರಾಣೆಗೆ ಅವರು ಭೇಟಿ ನೀಡಬೇಕು. ಆ ಮೂಲಕ ತಮ್ಮ ಹಾಜರಿಯನ್ನು ಹಾಕಬೇಕು.

also read: ಸುಶಾಂತ್‌ ಸಾವಿನ ಪ್ರಕರಣದ ತನಿಖೆ ಈಗ ಯಾವ ಹಂತದಲ್ಲಿದೆ? ಏನು ಮಾಡ್ತಿದ್ದಾರೆ CBI ಅಧಿಕಾರಿಗಳು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌